ದುಬೈನಲ್ಲಿ ಕನ್ನಡ ಕವಿಗೋಷ್ಠಿ ಮತ್ತು ಭಾವಗೀತೆ

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತಾಡಿದ ಸಾಹಿತಿ ಹಾಗೂ ರಂಗಕರ್ಮಿ ಪ್ರಕಾಶ್ ರಾವ್ ಪಯ್ಯಾರ್ ಅವರು, ಆದಿಕವಿ ಪಂಪ, ಬಸವಣ್ಣ, ಕನಕದಾಸ, ಸರ್ವಜ್ಞ ಹಾಗೂ ಇಂದಿನ ಆಧುನಿಕ ಕಾಲದವರೆಗಿನ ಹೆಚ್ಚಿನ ಎಲ್ಲಾ ಕವಿಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮಲ್ಲಿರುವ ತಾರತಮ್ಯ ಬೇಧ ಮನೊಭಾವನೆಯನ್ನು ಬಿಟ್ಟು ನಾವು ಮುಂದೆ ಸಾಗಬೇಕೆಂಬ ಬೋಧನೆಯನ್ನು ನೀಡುತ್ತಾ ಬಂದಿರುವರು. ಕನ್ನಡಿಗರಲ್ಲಿ ಎಂದೂ ನಾವೆಲ್ಲ ಒಂದೇ ಎಂಬ ಭಾವನೆ ಮೂಡದಿರುವುದು ವಿಪರ್ಯಾಸ ಎಂದು ಹೇಳಿ, ಹೆತ್ತ ತಾಯಿಯಂತೆ ಕನ್ನಡಮ್ಮನ ಋಣ ತೀರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕವಿಗಳಾದ ಗೋಪಿನಾಥ್ ರಾವ್, ಇರ್ಶಾದ್ ಮೂಡುಬಿದ್ರಿ, ಅರ್ಶದ್ ಹುಸ್ಸೆನ್, ರಾಮ್ ಪ್ರಸಾದ್, ರೊಬರ್ಟ್ ಉದ್ಯಾವರ ಮತ್ತು ಪಿಯುಸ್ ಜೇಮ್ಸ್ ಡಿಸೋಜ ತಮ್ಮ ಕವನಗಳನ್ನು ವಾಚಿಸಿದರು. ಭಾವಗೀತೆ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಸುಮಾ ನಾರಾಯಣ, ಸೋನಿಯ ಗೌತಮ್, ಸರಳಾ ರಘುನಾಥ್, ದೀಪಾ ರಘುನಂದನ್, ರಘುನಂದನ್ ರಾವ್ ಹಾಗೂ ಗುರುರಾಜ್ ಅವರು ಭಾವ ಗೀತೆಗಳನ್ನು ಹಾಡಿ ರಂಜಿಸಿದರು. ಹಾಡುಗಳಿಗೆ ರಾಮ್ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದರು.
ಬಿ.ಎಲ್.ನಾರಾಯಣ, ಫ್ರೆಂಡ್ಸ್ ಅಫ್ ಇಂಡಿಯಾ ಬಳಗದ ಸತೀಶ್ ರಾವ್, ಇಂಡಿಯಾ ಫೈನ್ ಅರ್ಟ್ಸ್ ಬಳಗದ ರಘುನಂದನ್, ಗಲ್ಫ್ ಕರ್ನಾಟಕ ಫಾರಂನ ಹರ್ಮನ್ ಲೂಯಿಸ್, ಕರ್ನಾಟಕ ಸಂಘ ಶಾರ್ಜಾದ ಗಣೇಶ್ ರೈ, ಬಸವ ಸಮಿತಿಯ ಮುರ್ಗೆಶ್ ಗಾಜಾರೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಡಾ. ದೀಪಾ ರಘುನಂದನ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ಪ್ರತಿಷ್ಠಾನದ ಕಾರ್ಯದರ್ಶಿ ಮಧುಸೂದನ್ ಅವರು ಸ್ವಾಗತಿಸಿ ಸರಳಾ ರಘುನಾಥ್ ಅವರು ವಂದಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. [ಧ್ವನಿ ಪ್ರತಿಷ್ಠಾನ, ದುಬೈ]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications