ನಾಲ್ವರು ಗಣ್ಯರಿಗೆ ಧ್ವನಿ ಪ್ರತಿಷ್ಠಾನ ಪ್ರಶಸ್ತಿ

Actress Tara and 3 others to be honored in Dubai
ದುಬೈ, ಏ. 4 : ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಗೆ ಜಯಂತ ಕಾಯ್ಕಿಣಿ(ಸಾಹಿತ್ಯ), ವಿಶ್ವೇಶ್ವರ ಭಟ್(ಮಾಧ್ಯಮ), ತಾರಾ (ಚಲಚಿತ್ರ ರಂಗ), ಶಶಿಧರ್ ಕೋಟೆ (ಸಂಗೀತ) ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನವು ಹಿರಿಯ ಕವಿ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 23ರಂದು ದುಬೈ ಜೆಮ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ನೆರವೇರಲಿರುವ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನಕ್ಕೆ ಪ್ರವೇಶ ಮುಕ್ತವಾಗಿದ್ದು, ಬೆಳಿಗ್ಗೆ ರುಚಿಕರ ಲಘು ಉಪಹಾರ, ಮಧ್ಯಾಹ್ನ ಸ್ವಾದಿಷ್ಟ ಭೋಜನ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಕನ್ನಡಿಗರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಚಾರಿತ್ರಿಕ ದಾಖಲೆಯನ್ನಾಗಿಸಬೇಕೆಂದು ಧ್ವನಿ ಬೆಳ್ಳಿಹಬ್ಬ ಆಚರಣ ಸಮಿತಿ ವಿನಂತಿಸಿಕೊಂಡಿದೆ.

ಸಮ್ಮೆಳನದ ಸ್ಥಳ : ದುಬೈ ಜೆಮ್ ಪ್ರೈವೇಟ್ ಸ್ಕೂಲ್ ಸಭಾಂಗಣ, ಕೆ.ಎಮ್.ಟ್. ಟ್ರೇಡಿಂಗ್ ಹತ್ತಿರ,ದುಬೈ. ಬೆಳಿಗ್ಗೆ 8.30ರಿಂದ ಸಂಜೆ 7ರ ತನಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+