Get Updates
Get notified of breaking news, exclusive insights, and must-see stories!

ಕನೆಕ್ಟೀಕಟ್‍ನಲ್ಲಿ ಹರಡಿದ ಕನ್ನಡದ ಕಂಪು

Hoysala Kannada Sangha celebrates Rajyotsava
ಕನ್ನಡಿಗರ ನೆಚ್ಚಿನ ಹಬ್ಬ ದೀಪಾವಳಿಯೊಂದಿಗೆ ನಮ್ಮ ನಾಡಿನ ಕನ್ನಡದ ಹಬ್ಬ ಕನ್ನಡ ರಾಜೋತ್ಸವವನ್ನು ಒಟ್ಟೊಟಿಗೆ ಮಾಡಿದಾಗ, ಕಣ್ಮನಗಳಿಗೆ ಸಿಗುವ ಅದ್ದೂರಿ ಸಂಭ್ರಮ ನೋಡಬೇಕಾಗಿದ್ದರೆ ನೀವು ಅಲ್ಲಿ ಇರಬೇಕಿತ್ತು. ಹೊಯ್ಸಳ ಕನ್ನಡ ಕೂಟ ಕನೆಕ್ಟೀಕಟ್‍ ವತಿಯಿಂದ 2009ನೇ ನವೆಂಬರ್ 7ರಂದು ಸೌತ್-ವಿಂಡಸರ್‌ನ ಭವ್ಯವಾದ ರಂಗಮಂದಿರದಲ್ಲಿ ಈ ಹಬ್ಬಗಳ ಪ್ರಯುಕ್ತ ಆಯೋಜಿಸಲಾದ ಕನ್ನಡದ ಸಂಸ್ಕೃತಿ, ಇತಿಹಾಸ, ಸೊಗು-ಸೊಡಗು ಮತ್ತು ಇಂದಿನ ವಿದ್ಯಮಾನಗಳನ್ನು ಎತ್ತಿ ಸಾರುವ ರಂಗು-ರಂಗಾದ ವಿವಿಧ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

* ಮಲ್ಲಿ ಸಣ್ಣಪ್ಪನವರ

ದೇವರ ಪ್ರಾಥ೯ನೆಯೊಂದಿಗೆ ಕಾಯ೯ಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಕನೆಕ್ಟಿಕಟ್‍ನಲ್ಲಿ ಕನ್ನಡದ ಕಂಪು ಪಸರಿಸುವಲ್ಲಿ ಸತತ ಪ್ರಯತ್ನಮಾಡಿ ನಿರಂತರವಾಗಿ ಗೆಲ್ಲುತ್ತಿರುವ ಕೂಟದ ಅಧ್ಯಕ್ಷ ಶ್ರೀನಿವಾಸ್ ಕೊಮಲಾ೯ ಎಲ್ಲರಿಗೂ ಹಬ್ಬಗಳ ಶುಭಾಶಯಗಳನ್ನು ಕೋರಿ ಸ್ವಾಗತಿಸಿದರು. ಮೊಟ್ಟ ಮೊದಲ ಕಾಯ೯ಕ್ರಮ ಚಂದ್ರಶೇಖರ್ ಭಟ್ ನಡಿಸಿಕೊಟ್ಟ ಮಕ್ಕಳ ವೇಷ ಭೂಷಣ ಕಾಯ೯ಕ್ರಮ. ಇದರಲ್ಲಿ ಸುಮಾರು 30 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕನ್ನಡನಾಡಿನ ಹಲವು ಮಹಾನ್ ವ್ಯಕ್ತಿಗಳು ಮತ್ತು ಕನಾ೯ಟಕದ ಜೀವನ ಶೈಲಿಗಳನ್ನು ನೆನೆಪಿಗೆ ತಂದರು. ಸಾತ್ವಿಕ್ ಹುಳೀಕೆರೆ ಹಾಕಿದ್ದ ವಿಜಯನಗರದ ಕೃಷ್ಣದೇವರಾಯ, ಅನಿಕೇತ್ ಚೆಲುವ ಶಿಶುನಾಳ ಶರೀಫ್‍ನಾಗಿ, ಮೀನುಗಾರ ಹುಡುಗ, ರಾಮಾಯಣದ ಪಾತ್ರಗಳು ಇನ್ನೂ ಹತ್ತು ಹಲವಾರು ವಿವಧ ಪೊಷಾಕುಗಳನ್ನು ಮಕ್ಕಳಿಗೆ ಹಾಕಿಸಿ ಪೊಷಕರು ಕಿರುನಗೆ ಬೀರಿದರು.

ಇದಾದ ನಂತರ ಭಾರತೀಯ ವಿವಧ ಹಬ್ಬಗಳನ್ನು ತೋರಿಸುವ ಸುಮಾರು 50 ಕ್ಕೂ ಹೆಚ್ಚು ಮಕ್ಕಳನ್ನೊಳಗೊಂಡ ಸಂಗೀತ ನೃತ್ಯ "ಹಬ್ಬಗಳ ವೈಭವ" ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಬಡಿಸಿತು. ಇಷ್ಟೊಂದು ಮಕ್ಕಳನ್ನು ಒಟ್ಟಿಗೆ ಕಲೆ ಹಾಕಿ, ನೃತ್ಯ ಸಂಯೋಜಿಸಿದ ಪ್ರೀಯಾ ಹಾರ್ಯಾಡಿ ಯವರ ತಾಳ್ಮೆ ಹಾಗೂ ಪ್ರತಿಭೆ ಎರಡಕ್ಕೂ ಹ್ಯಾಟ್ಸ್-ಆಫ್!. ಇದಾದ ಮೇಲೆ ಭ್ರಮರಿ ಶಿವಪ್ರಕಾಶರವರು ತಮ್ಮ 2 ವಷ೯ದ ಮಗು ಸಾರಂಗ್ ಶಿವಪ್ರಕಾಶ ಜೊತೆ ಮಾಡಿದ ಭರತನಾಟ್ಯ ಸಂಯೋಜನೆ "ಜಗದೋದಹರಣ ಕೃಷ್ಣ" ನೋಡುಗರನ್ನು ಕಿನ್ನರ ಲೋಕಕ್ಕೆ ಕರೆದೊಯ್ಯಿತು. ಹೊಯ್ಸಳ ಸಾಮ್ರಜ್ಯದ ಮಹಾನ್ ಕವಿಗಳಾದ ಕಂಠಿ ಮತ್ತು ನಾಗಚಂದ್ರರ‍ನ್ನು ಒಳಗೊಂಡ ಹಳೆಗನ್ನಡದ ಸಂವಾದಗಳ ಕಿರುನಾಟಕದಲ್ಲಿ ಕೆಲಕಾಲ ತೊದಲು ನುಡಿಗಳ ಮರೆತ ಮಕ್ಕಳ ನಾಲಿಗೆ ಮೇಲೆ ಹಳೆಗನ್ನಡ ಸಲಿಸಾಗಿ ತಕ-ದಿಮ್ಮಿತಾ ಅಂತ ನಾಟ್ಯವಾಡಿದಂತಿತ್ತು.

ಇದೆಲ್ಲವನ್ನು ಅನುಭವಿಸಿ ಪ್ರೇಕ್ಷಕರು ಸುಧಾರಿಸಿಕೊಳ್ಳವಷ್ಟರಲೇ, ದಿಡೀರ್ ಅಂತ ಶುರುವಾಗಿದ್ದು ಜೇನಿನಹೊಳೆ...ಹಾಲಿನಮಳೆ...". ಕಾಯ೯ಕ್ರಮದ ಹೆಸರು "ವೈವಿಧ್ಯಮಯ ಕನಾ೯ಟಕ" ಅಣ್ಣಾವ್ರು ಹಾಡಿದ ಆ ಸೊಲೊ ಹಾಡು ಇಲ್ಲಿ ಗ್ರೂಫ್ ಸಾಂಗ್ ಆಗಿತ್ತು, ಹಾಗೆ ಕನ್ನಡನಾಡಿನ ವಿವಧ ಪ್ರಾದೇಶಿಕ ಉಡುಪುಗಳನ್ನ ತೊಟ್ಟ ಒಂದೊಂದೆ ಜೋಡಿ ದೀಪಗಳನ್ನು ಹಿಡಿದು ಜೈ ಕನಾ೯ಟಕ ಮಾತೆಯನ್ನು ಸುತ್ತುವರಿದು ನಿಂತವು, ಕಾಯ೯ಕ್ರಮಕ್ಕಾಗಿ ವಿಶ್ವನಾಥ್-ರಷ್ಮಿ ದಂಪತಿಗಳು ತಯಾರಿಸಿದ್ದ ದೀಪಗಳನ್ನೊಳಗೊಂಡ ಕನಾ೯ಟಕ ನಕ್ಷೆಯ ಕಟೌಟ್ ಎಲ್ಲರ ಗಮನ ಸೆಳೆಯಿತು.

ಅನಘ ನಾಗರಜ್ ರವರ "ಕೃಷ್ಣ-ಕೊರ‍ವಂಜಿ" ಭರತನಾಟ್ಯ ಸಂಯೋಜನೆ ಅದ್ಬುತ. ಆದರೆ, ಈ ನಾಟ್ಯದಲ್ಲಿ ಅವರು ಉಪಯೋಗಿಸಿದ ಅನ್ಯ ಭಾಷೆಯ ಹಾಡುಗಳು ಕೆಲವು ಕನ್ನಡಗರಿಗೆ ಕಿರಿ-ಕಿರಿ ಅನಿಸಿದವು. ಕೀತಿ೯ ಪೈ ಅವರು ಸಂಯೋಜಿಸಿದ್ದ "ಘಲ್ಲು-ಘಲೆನುತ್ತಾ", ಗಿರೀಶ್ ನಿಲಕಂಟ ಅವರ "ತರಲೆಗಳ ಸಂಗಮ" ಮಿಮಿಕ್ರಿ ಎಲ್ಲರ ಗಮನ ಸೆಳೆದವು. ಅನಿತಾ ಕೃಷ್ಣಮೂತಿ೯ ಸಂಯೋಜನೆಯಲ್ಲಿ ಮಹಿಳಾ ಸಮೂಹ ನೃತ್ಯ "ವಂದೇ ಮಾತರ‍ಂ" ಮಾತ್ರ ಬಿಗ್-ಹಿಟ್! ಇಲ್ಲಿ ಉಪಯೋಗಿಸಿದ ಶ್ವೇತವಣ೯ದ ಸೊಗಸಾದ ಉಡುಗೆಗಳು ಸೂಪರ್-ಹಿಟ್!

ಕೊನೆಯದಾಗಿ ಯಶವಂತ್ ಗಡ್ಡಿ ಬರೆದು ನಿರ್ದೇಶಿಸಿದ ನಗೆ ನಾಟಕ "ನಮ್ಮಳ್ಳೀ ನಾಟಕ" ಪ್ರೇಕ್ಷಕರ ಮನಗೆದ್ದಿತು, ಪ್ರದೀಪ್ ಡೊಲ್ಲಿನ್, ಗಿರೀಶ ಕಬ್ಬಿನದ, ಸುನಿತಾ, ಸ್ವಣ೯ ಮುಂತಾದವರು ನಟನೆಯಂತೂ ಬಲು ಬೊಂಬಾಟ್! ಕಾಯ೯ಕ್ರಮಗಳು ಮುಗಿಯುವ ಹೊತ್ತಿಗೆ ಎಲ್ಲರ ಹೊಟ್ಟೆಗಳು ತಾಳ ಹಾಕಲಾರಂಬಿಸಿದವು, ಕನ್ನಡ ಕೂಟದ ಮೃಷ್ಟಾನ ಭೋಜನ ಮುಗಿಯುವ ಹೊತ್ತಿಗೆ ಬರೊಬ್ಬರಿ ರಾತ್ರಿ ಹತ್ತು ಗಂಟೆ. ಸುಮಾರು ಐದು ತಾಸಿನ ಕನ್ನಡ ರಾಜೋತ್ಸವ ಹಾಗೂ ದೀಪಾವಳಿಯ ಮನೋರ‍ಂಜನೆ ಕಾಯ೯ಕ್ರಮಗಳನ್ನು ಮನಸ್ಸೊ-ಇಚ್ಚೆ ಸವಿದ ಮಕ್ಕಳು ಮತ್ತು ಪೋಷಕರು ಹೊಯ್ಸಳ ಕನ್ನಡ ಕೂಟಕ್ಕೆ ಧನ್ಯವಾದ ಹೇಳುತ್ತಾ ತಮ್ಮ-ತಮ್ಮ ಮನೆ ದಾರಿ ಹಿಡಿದರು. ಜೈ ಕನಾ೯ಟಕ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+