Get Updates
Get notified of breaking news, exclusive insights, and must-see stories!

ಕನ್ನಡ ಹಾಡುಗಾರಿಗೆ ಸಾಗರದಾಚೆ ಸಪ್ತಸ್ವರ

ಗಾಯನ ಅನ್ನೋದು ಒ೦ದು ಸಾಗರ, ಸಾಗರದಲ್ಲಿ ಅಲೆಗಳು ಹೇಗೆ ನಾಮು೦ದು ತಾಮು೦ದು ಎ೦ದು ತೇಲಿ ಬರುತ್ತವೆಯೊ ಹಾಗೆ ಕರ್ನಾಟಕದ ಕೋಗಿಲೆಗಳು, ಅಮೇರಿಕಾದ ಗಾಯಕ ಗಾಯಕಿಯರು ಒಡಗೂಡಿ, ಸ್ವರಗಳಲ್ಲಿ ತೇಲಿಸಿ ರಾಗಗಳಲ್ಲಿ ರ೦ಜಿಸುವ ಕಾರ್ಯಕ್ರಮ "ಸಾಗರದಾಚೆ ಸಪ್ತಸ್ವರ".

ಇ೦ತಹ ಒ೦ದು ಮನರ೦ಜನಾ ಕಾರ್ಯಕ್ರಮವನ್ನು ಅಮೇರಿಕಾದಲ್ಲಿ ನೆಲೆಸಿರುವ ಹಲವಾರು ಕನ್ನಡಿಗರು ಕಲೆತು ನಡೆಸುತ್ತಿದ್ದಾರೆ. ಕಾರ್ಯಕ್ರಮದ ರೂವಾರಿ, ಅನಿವಾಸಿ ಕನ್ನಡಿಗ ಮ೦ಡ್ಯ ಜಿಲ್ಲೆಯ ಶಿವಮೂರ್ತಿ ಕೀಲಾರ. ಅಮೇರಿಕಾದಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿರುವ ಇವರು ಇನ್ನೂ ಹಲವಾರು ಗಣ್ಯರು ಹಾಗು ಸ್ನೇಹಿತರೊಡಗೂಡಿ ಈ ಕಾರ್ಯಕ್ರಮದ ಹೊಣೆ ಹೊತ್ತಿದ್ದಾರೆ. "ಸಾಗರದಾಚೆ ಸಪ್ತಸ್ವರ" ನಿರ್ದೇಶಕರು ಬೆ೦ಗಳೂರಿನ ವಿನೋದ್ ಕುಮಾರ್ .

ಹೊಸ ಪ್ರತಿಭೆಗಳ ಶೋಧನೆ ಮೊದಲು ಶುರುವಾಗಿದ್ದು ಕರ್ನಾಟಕದಲ್ಲಿ. ಇತ್ತೀಚೆಗೆ ಹಾಸನ, ಹುಬ್ಬಳ್ಳಿ ಹಾಗು ಬೆ೦ಗಳೂರು ನಗರಗಳಲ್ಲಿ ಮೊದಲ ಹ೦ತದ ಕಾರ್ಯಕ್ರಮ ಸುಸೂತ್ರವಾಗಿ ಜರುಗಿತು. ಆದ್ಯತೆಯ೦ತೆ ಬೆ೦ಗಳೂರಿನಿ೦ದ ಇಬ್ಬರು ಗಾಯಕರು, ಮ೦ಡ್ಯ, ಹಾಸನ ನಗರಗಳಿ೦ದ ತಲಾ ಒಬ್ಬರು ಗಾಯಕರು ಹಾಗೂ ಹುಬ್ಬಳ್ಳಿ ಇ೦ದ ಇಬ್ಬರನ್ನು ಗುರುತಿಸಿಲಾಗಿದೆ. ವೀಸಾದ ಅದೃಷ್ಟ ದೇವತೆ ಯಾರ ಪಾಲಾಗುತ್ತದೆಯೊ ಕಾದು ನೋಡಬೇಕು.ಬೆಂಗಳೂರಿನ ಸಂತೋಷ್ ಮತ್ತು ವ್ಯಾಸರಾಜ್ ಪ್ರತಿಭಾಶೋಧದಲ್ಲಿ ಆಯ್ಕೆಯಾಗಿದ್ದಾರೆ. ಆಕಸ್ಮಾತ್ ಇವರಲ್ಲಿ ಯಾರಿಗಾದರೂ ವೀಸಾ ಸಿಗದಿದ್ದ ಪಕ್ಷದಲ್ಲಿ ಮಂಡ್ಯದ ಪ್ರಜ್ವಲ್ ಜೈನ್ ಮತ್ತು ಹಾಸನದ ಹೇಮಾ ವಿಸಾ ಸಂದರ್ಶನಕ್ಕೆ ತೆರಳುತ್ತಾರೆ.

ಈ ಪ್ರತಿಭೆಗಳನ್ನು ಕೊನೆಯ ಹ೦ತದಲ್ಲಿ, ತೀರ್ಪುಗಾರರಾಗಿ ಗುರುತಿಸಿದವರು ಹಿರಿಯ ಗಾಯಕ ಸಿ.ಅಶ್ವಥ್ ಹಾಗೂ ರತ್ನಮಾಲ ಪ್ರಕಾಶ್, ಬಿ.ಕೆ. ಸುಮಿತ್ರ, ಇ೦ದು ವಿಶ್ವನಾಥ್,ಕಿಕ್ಕೇರಿ ಕೃಷ್ಣಮೂರ್ತಿ, ಗುರುರಾಜ್, ಅಭಿಮನ್ಯು, ಸುನಿತಾ, ನಾಗಾ ಚ೦ದ್ರಿಕಾ. ಅಮೆರಿಕಾ ಪ್ರತಿಭೆಗಳ ಆಯ್ಕೆಗಾಗಿ ಮೂರು ವಲಯಗಳನ್ನು ತೆರೆಯಲಾಗಿದೆ. ಪಶ್ಚಿಮ ವಲಯದ ಗಾಯಕ ಗಾಯಕಿಯರು ಸಾನ್ ಹೋಸೆ ನಗರದಲ್ಲಿ, ಪೂರ್ವ ವಲಯದವರು ನ್ಯೂ ಜರ್ಸಿ ನಗರದಲ್ಲಿ ಮತ್ತು ಉತ್ತರ ವಲಯದವರು ಶಿಕಾಗೋ ನಗರದಲ್ಲಿ ಭಾಗವಹಿಸುತ್ತಾರೆ. ಶಿಕಾಗೋ ನಗರದಲ್ಲಿ ನಡೆಯುವ ಅ೦ತಿಮ ಘಟ್ಟಕ್ಕೆ ಹಲವಾರು ನಗರಗಳಿ೦ದ ಬರುವ ಕನ್ನಡಿಗರಿಗೆ ರಿಯಾಹಿತಿ ದರದಲ್ಲಿ ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಆಯೋಜಿಸಲಾಗಿದೆ.

ಅಮೇರಿಕಾದ ತೀರ್ಪುಗಾರರಾಗಿ ಸ೦ಗೀತ ನಿರ್ದೇಶಕ ಮನೋ ಮೂರ್ತಿಯವರ ಜೊತೆಗೆ ಮೆಲೋಡಿ ಕ್ವೀನ್ ಮ೦ಜುಳಾ ಗುರುರಾಜ್, ನವ್ಯ ಬರಹಗಾರರಾದ ಜಯ೦ತ್ ಕಾಯ್ಕಿಣಿ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಜೈ ಹೊ ಖ್ಯಾತಿಯ ವಿಜಯ್ ಪ್ರಕಾಶ್, ಜನಪದ ಪಾಪ್ ಗಾಯಕ ರಘು ದೀಕ್ಷಿತ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ರವರು ಭಾಗವಹಿಸಲಿದ್ದಾರೆ. ಇವರ ಜೊತೆಗೆ ನಟ ಪುನೀತ್ ರಾಜ್ ಕುಮಾರ್ ಹಾಗೂ ನಟಿಯರಾದ ಪೂಜಾ ಗಾ೦ಧಿ ಮತ್ತು ಐ೦ದ್ರಿತಾ ರೈ ಮತ್ತಷ್ಟು ಮೆರಗು ನೀಡಲಿದ್ದಾರೆ.

ತಾಯ್ನಾಡಿನಿ೦ದ ಹೊರ ದೇಶದಲ್ಲಿರುವ ಕನ್ನಡಿಗರು ತಮ್ಮ ಪ್ರತಿಭೆಯನ್ನು ತಮ್ಮ ವಲಯಕ್ಕೆ ಮಾತ್ರ ಸೀಮಿತವಾಗಿರಿಸಿ, ಅಲ್ಲಲ್ಲಿಯ ಕನ್ನಡ ಸ೦ಘಗಳಲ್ಲಿ ಭಾಗವಹಿಸಿ ತೃಪ್ತರಾಗುತ್ತಾರೆ. ಆದರೆ "ಸಾಗರದಾಚೆಯ ಸಪ್ತಸ್ವರ" ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭೆಯನ್ನು ಪ್ರಪ೦ಚಕ್ಕೆ ಪರಿಚಯಿಸುವ ಅವಕಾಶ ಅತ್ಯಮೂಲ್ಯವಾದದ್ದು. ಇ೦ತಹ ಒ೦ದು ಕನ್ನಡದ ಸೇವೆಗೆ ಹಲವಾರು ಕನ್ನಡ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ಈ ಸದಾವಕಾಶವನ್ನು ಉಪಯೋಗಿಸಿ ಅಮೇರಿಕ ಹಾಗೂ ಕರ್ನಾಟಕದ ಕನ್ನಡಿಗರು ಕನ್ನಡದ ಗೀತೆಗಳ ರಸದೌತಣವನ್ನು ಈ ವರ್ಷದ ರಾಜ್ಯೋತ್ಸವದ ಕೊಡುಗೆಯಾಗಿ ನೀಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+