ಬಲ್ಗೇರಿಯಾದಲ್ಲಿ ಹರೇಕೃಷ್ಣ ಹರೇರಾಮ

ಹೀಗೆ ಒಂದು ದಿನ ಟ್ಯಾಕ್ಸಿ ಹತ್ತುತ್ತಿದಂತೆ ಡ್ರೈವರ್ "ಇಂಡಿಯಾ?" ಎಂದು ಪ್ರಶ್ನಿಸಿದ. ನಾನು "ಹೌದು" ಎಂಬಂತೆ ತಲೆ ಅಲ್ಲಾಡಿಸಿದೆ. ಮತ್ತೆ ಅದೇ ಪ್ರಶ್ನೆ "ಇಂಡಿಯಾ?". ನಾನು "ಯಸ್" ಎಂದು ಮತ್ತೆ ಗೋಣು ಕುಣಿಸಿದೆ. ಆತ ಇನ್ನು ಮನವರಿಕೆ ಆಗಿಲ್ಲ ಎಂಬಂತೆ ಪ್ರಶ್ನಾರ್ಥಕ ಮುಖ ಮಾಡಿದ್ದ. ಪರಿಸ್ಠಿತಿ ಅರಿತ ನನ್ನ ಗೆಳೆಯ ಶುಭ "ಇಂಡಿಯಾ ದಾ ದಾ " (ದಾ ಎಂದರೆ ಯೆಸ್) ಎನ್ನುತ್ತ "ಅಲ್ಲ" ಅನ್ನುವ ರೀತಿಯಲ್ಲಿ ತಲೆ ಕುಣಿಸುತ್ತಿದ್ದ. ಈಗ ಪ್ರಶ್ನಾರ್ಥಕ ಮುಖ ಮಾಡುವ ಸರದಿ ನನ್ನದಾಗಿತ್ತು. [ಇಲ್ಲಿನ ಸೋಜಿಗ ಎಂದರೆ, "ಇಲ್ಲ" ಅನ್ನುವ ರೀತಿಯಲ್ಲಿ ತಲೆಯನ್ನು ಎಡಕ್ಕೆ ಬಲಕ್ಕೆ ಅಲುಗಾಡಿಸಿದರೆ "ಹೌದು" ಅಂತ ಅರ್ಥ. "ಹೌದು" ಎಂಬಂತೆ ಗೋಣು ಕುಣಿಸಿದರೆ "ಇಲ್ಲ" ಅಂತ. ಪೂರ್ತಿ ಉಲ್ಟಾ ಪಲ್ಟಾ ಲೋಕಾರೂಢಿ!!]
ಈಗ ಟ್ಯಾಕ್ಸಿ ಡ್ರೈವರ್ ಗೆ ನಾವು ಭಾರತೀಯರು ಅನ್ನುವುದು ಪಕ್ಕಾ ಆಗಿತ್ತು. ಆತ ಮುಗುಳ್ನಕ್ಕು ಕೈ ಮುಗಿಯುತ್ತ ಹೇಳಿದ "ಹರೇ ಕೃಷ್ಣ ಹರೇ ರಾಮ". ನಾನು ಆಶ್ಚರ್ಯ ಚಕಿತನಾಗಿ ಅವನನ್ನು ನೋಡುತ್ತಿದ್ದಂತೆ, ಆ ಮಹಾಶಯ ತನ್ನ ಪೆನ್ ಡ್ರೈವ್ ತೆಗೆದು "ಹರೇ ಕೃಷ್ಣ ಹರೇ ರಾಮ ....." ಹಾಡು ಪ್ಲೇಯ್ ಮಾಡುತ್ತಿದ್ದ. ಪಕ್ಕಾ ನಮ್ಮ ಇಸ್ಕಾನ್ ದೇಗುಲದ ಧ್ವನಿ. ನಂತರ ಒಂದು ಸಿ ಡಿ. " ಗೋಕುಲನಂದ ದೇವಕಿಸುತ ........." ಕೃಷ್ಣನ ಭಕ್ತಿಗೀತೆಗಳ ಮಹಾಪೂರವೇ ಹರಿದು ಬರುತ್ತಿತ್ತು. ಬಲ್ಗೇರಿಯಾ ಸೋಫಿಯಾದ ಟ್ಯಾಕ್ಸಿ ಡ್ರೈವರ್ ಎಲ್ಲಿ? ಗೋಕುಲದ ಕೃಷ್ಣ ಎಲ್ಲಿ? ನಾನು ನನ್ನ ಗೆಳೆಯ ಇಬ್ಬರೂ ದಂಗಾಗಿದ್ದೆವು!
ನಮ್ಮ ಇಸ್ಕಾನ್, ಕೃಷ್ಣನ ಗುಣಗಾನವನ್ನು ಜಗತ್ತಿನಾದ್ಯಂತ ಮಾಡುತ್ತಿರುವುದು ಗೊತ್ತಿರುವ ವಿಷಯ. ನಾವೇ ಈಗ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಟ್ಟು ಪಾಶ್ಚಿಮಾತ್ಯದ ಕಡೆ ವಾಲುತ್ತಿರುವಾಗ ಇಲ್ಲಿನ ಒಬ್ಬ ಟ್ಯಾಕ್ಸಿ ಚಾಲಕ ಕೃಷ್ಣನ ಭಕ್ತ. ಆತ ಇಲ್ಲೇ ಸನಿಹದಲ್ಲಿರುವ ದೇಗುಲಕ್ಕೂ ಕೂಡ ಭೇಟಿ ನೀಡುತ್ತಾನಂತೆ. ನಾವುಗಳು ಪ್ರಾಯಶಃ ಕೃಷ್ಣನ ಸ್ತುತಿಯನ್ನು ಕೇಳುವುದು ಕೃಷ್ಣಾಷ್ಟಮಿಗೆ ಮಾತ್ರವೇನೋ! ನಮ್ಮ ವೈಭವೊಪೇತ ಸಂಸ್ಕೃತಿ ನಮಗೆ ನಗಣ್ಯ ಆಗುತ್ತಿರುವುದು ಶೋಚನೀಯ. ಹಿತ್ತಲ ಗಿಡ ಮದ್ದಲ್ಲ ಅಂದರೆ ಇದೇನಾ?
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications