ವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ

ಡಾ ವಸುಂಧರಾ ದೊರೆಸ್ವಾಮಿ ಅವರು ತಮ್ಮ ಶಿಷ್ಯರಾದ ವಿದುಷಿ ವಾಣಿ ರಮೇಶ್ ಮತ್ತು ವಿದುಷಿ ಶೀಲಾ ಕುಮಾರ್ ಅವರ ನೃತ್ಯ ಶಾಲೆಯಲ್ಲಿ ಕಾರ್ಯಾಗಾರವನ್ನು ನಡೆಸಿಕೊಡಲು ಬಂದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತು. ನೃತ್ಯ ಕಾರ್ಯಕ್ರಮಕ್ಕೆ ಮನಸ್ಸು ಮತ್ತು ದೇಹವನ್ನು ತಯಾರುಮಾಡಿಕೊಳ್ಳುವ ಒಂದು ನೃತ್ಯ ಬಂಧ ಮೇಳ ಪ್ರಾಪ್ತಿ ಜತಿಯಿಂದ ಕಾರ್ಯಕ್ರಮ ಆರಂಭಗೊಂಡಿತು. ಮತ್ತೆ ನಡೆದದ್ದು ವಿಘ್ನ ವಿನಾಶಕ ಗಣಪತಿಯ ಪ್ರಾರ್ಥನೆ. ಅಂಬಲದ ಆರಾಧ್ಯ ದೈವ ಸುಬ್ರಹ್ಮಣ್ಯನನ್ನು ಸ್ತುತಿಸುವ ನೃತ್ಯಬಂಧ ಷಣ್ಮುಖ ಕೌತ್ವಂ ಮೂರನೆಯದಾಗಿ ಪ್ರಸ್ತುತಗೊಂಡಿತು. ಮಯೂರ ಗತಿಯನ್ನು ಅಳವಡಿಸಿ ನವಿಲನ್ನು ಏರಿ ಬರುವ ಷಣ್ಮುಖನ ಸೊಬಗು ನೆರೆದ ಎಲ್ಲರ ಕಣ್ತುಂಬಿತು.
ಮುಂದೆ ವಿದುಷಿ ಗೀತಾ ಸೀತಾರಾಂ ಅವರು ಕನ್ನಡದಲ್ಲಿ ರಚಿಸಿದ ಪದವರ್ಣ ವೇಣುಗೋಪಾಲ ಸ್ವಾಮಿಯ ಕರೆ ತಾರೆಲೆ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಈ ಆತ್ಮ ಪರಮಾತ್ಮನಲ್ಲಿ ಲೀನವಾಗಲು ಹಂಬಲಿಸುವುದನ್ನು ನಾಯಕ ನಾಯಕಿ ಭಾವದ ಮೂಲಕ ಡಾ ವಸುಂಧರಾ ಅವರು ಮನೋಜ್ಞವಾಗಿ ಅಭಿನಯಿಸಿದರು. ಕನ್ನಡ ಭಾಷೆಯಲ್ಲಿ ರಚಿತವಾದ ಶಾಸ್ತ್ರೀಯ ಭರತನಾಟ್ಯದ ನೃತ್ಯ ಬಂಧಗಳು ಬಹಳ ವಿರಳವಾದದ್ದರಿಂದ ನವ್ಯ ವಾಗ್ಗೇಯಕಾರರ ಇಂಥ ಪ್ರಯತ್ನ ಪ್ರಶಂಸನಾರ್ಹ.
ಮುಂದಿನ ಹಂತದಲ್ಲಿ ಗಂಗಾವತರಣವನ್ನು ಚಿತ್ರಿಸುವ ಮಹಾದೇವ ಶಿವ ಶಂಭೋ ಮತ್ತು ಮಹಿಷಾಸುರ ಮರ್ದನದ ಕಥೆಯನ್ನು ಹೇಳುವ ಜಯದುರ್ಗೆ ದುರ್ಗತಿ ಪರಿಹಾರಿಣಿ ಹೃದಯ ಸ್ಪರ್ಶಿಯಾಗಿದ್ದವು. ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ವಿದುಷಿಯಾಗಿರುವ ಡಾ ವಸುಂಧರಾ ಅವರು ತಿಲ್ಲಾನಕ್ಕಾಗಿ ಆಯ್ದ ಕೃತಿ ಶ್ರೀಮತಿ ನಾಗಮಣಿ ಶ್ರೀನಾಥ್ ಅವರು ರಚಿಸಿದ ಶಿವಶಕ್ತಿ ರಾಗದ ನೃತ್ಯ ಬಂಧ. ಇದರಲ್ಲಿ ಭಕ್ತ ಶ್ರೇಷ್ಠ ಸಂತ ಕನಕದಾಸರಿಗೆ ಕಡೆಗೋಲು ಹಗ್ಗ ಹಿಡಿದ ಮುದ್ದು ಬಾಲ ಕೃಷ್ಣ ದರ್ಶನ ನೀಡಿದ ಸಂದರ್ಭವನ್ನು ತೋರಿಸಿ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಧ್ವನಿ ಮುದ್ರಿತ ಹಿನ್ನೆಲೆ ಸಂಗೀತ ಒಂದೊಮ್ಮೆ ಕೈಕೊಟ್ಟು ರಸಾಭಾಸವಾಗಿ ಆಯೋಜಕರು ತಾಳ್ಮೆಕೆಟ್ಟರೂ ಸಂಯಮದಿಂದಿದ್ದ ಡಾ ವಸುಂಧರಾ ನೆರೆದಿದ್ದ ಎಲ್ಲ ಗಣ್ಯರು ಮತ್ತು ನನ್ನಂಥ ಎಲ್ಲ ಶಿಷ್ಯವೃಂದದವರಿಗೆ ಆದರ್ಶ ಪ್ರಾಯರಾಗಿ ಇಡೀ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. ಮುರುಗನ್ ದೇವಸ್ಥಾನದ ಅರ್ಚಕರು ದೇವರ ಪ್ರಸಾದ ಆಶೀರ್ವಾದಪೂರ್ವಕವಾಗಿ ನೀಡಿ ದೇವಾಲಯದ ಕಾರ್ಯಕರ್ತರು ಕಲಾವಿದೆಯನ್ನು, ಸಂಘಟಕರನ್ನು ಅಭಿನಂದಿಸಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications