ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!

ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ ಆಹ್ವಾನಿಸಿದರು. ದಾಸರ ಬಗ್ಗೆ, ದಾಸ ಸಾಹಿತ್ಯದ ಬಗ್ಗೆ ಮಾತನಾಡಿದರು. ದಾಸ ಪರಂಪರೆ, ದಾಸರ ಇತಿಹಾಸ ಹಾಗು ನಾವು ದಾಸರ ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಮುಂದುವರಿಸಿಕೊಂಡು ಹೋಗುತ್ತಾ ಇದ್ದೇವೆ ಅನ್ನುವುದರ ಬಗ್ಗೆ ಮಾತನಾಡಿ, ಹಾಗೆಯೆ ಮಕ್ಕಳಿಗಾಗಿ ಆಯೋಜಿಸಿದ ದಾಸರ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಇದರಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಯಿತು. ಮೊದಲನೆಯದಾಗಿ ಕಾರ್ಯಕ್ರಮವನ್ನು ತರಂಗ ತಂಡದವರಿಂದ ಪ್ರಾರಂಭ ಮಾಡಲಾಯಿತು. ದೀಪಿಕಾ ಅವರು ಈ ತಂಡದ ಜವಾಬ್ದಾರಿಯನ್ನು ಕಳೆದ ಎರಡು ವರುಷಗಳಿಂದಲೂ ಹೊತ್ತಿದ್ದಾರೆ ಹಾಗು ಇವರಿಗೆ ಸಹಾಯ ಮಾಡುತ್ತಿರುವವರಲ್ಲಿ ಉಮಾ, ಸುಬ್ಬರಾವ್ ಹಾಗು ಪ್ರಕಾಶ್ ರವರು ಸೇರಿದ್ದಾರೆ. ತರಂಗ ತಂಡವು ಪ್ರತಿ ವರುಷದಂತೆ ಈ ವರುಷವು ದಾಸರ ಹೊಸ ಹಾಗು ಬಹು ಸುಂದರವಾದ ಹಾಡುಗಳನ್ನು ಕಲಿತು ಎಲ್ಲರಿಗು ದಿವ್ಯ ಅನುಭವವನ್ನು ಒದಗಿಸಿದರು. ಅವರಿಗೆ ಜೊತೆಯಾಗಿ ಲಕ್ಷ್ಮಣ್ ಅವರು ಮೃದಂಗದಲ್ಲಿ ಜೊತೆ ನೀಡಿದರು.
ನಂತರ ಪ್ರಸಿದ್ಧ ಗಾಯಕರಾದ ಶ್ರೀರಾಮ್ ಅವರು ಇಪ್ಪತ್ತು ನಿಮಿಷಗಳ ಕಾಲ ಕಾರ್ಯಕ್ರಮವನ್ನು ನೀಡಿದರು. ಅವರ ಅದ್ಭುತವಾದ ಗಾಯನ ಎಲ್ಲರ ಮನಸೂರೆಗೊಂಡಿತು. ಶ್ರೀರಾಮ್ ಅವರಿಗೆ ಹೂಗುಚ್ಚ ನೀಡಿ ಗೌರವಿಸಲಾಯಿತು. ನ್ಯಾಶ್-ವಿಲ್ ನಿಂದ ಆಗಮಿಸಿದ್ದ ಉಪಾಸನ ತಂಡದ ಕಾರ್ಯಕ್ರಮ ನಂದಿನಿ ಕಂಬಿ ಅವರ ನೇತೃತ್ವದಲ್ಲಿ ಬಹು ಸುಂದರವಾಗಿ ಮೂಡಿ ಬಂದಿತು. ಅವರ ಗಾಯನವನ್ನು ಎಲ್ಲರೂ ಮನಸಾರೆ ಹೊಗಳಿದರು. ನಂದಿನಿ ಕಂಬಿ ಅವರು 'ಮಧುರಧ್ವನಿ' ಎನ್ನುವ ಹೆಸರಿನಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ.
ಲಕ್ಷ್ಮಣ್ ಮತ್ತು ನಂದಿನಿ ಕಂಬಿ ಅವರಿಗೆ ಪ್ರಶಸ್ತಿ ಪತ್ರ ಹಾಗು ಫಲಕಗಳನ್ನು ನೀಡಿ ಗೌರವಿಸಲಾಯಿತು. ಹಾಗೆಯೆ ತರಂಗ ಹಾಗು ದಾಸ ಆರಾಧನೆಗೆ ಸದಾ ಸಹಕಾರ ಕೊಡುತ್ತಾ ಬಂದಿರುವ ಸರಸ್ವತಿ ಕಣ್ಣನ್, ಮೀನಾಕ್ಷಿ ಮಾಮಿ ಹಾಗು ಸುಬ್ಬರಾವ್ ಅವರಿಗೂ ಹೂಗುಚ್ಚ ನೀಡಿ ಗೌರವಿಸಲಾಯಿತು.
ಪುಷ್ಪ ಸಂಜಯ್ ಅವರು ಕಾರ್ಯಕ್ರಮದ ನಿರೂಪಣೆಯ ಜೊತೆಗೆ ದಾಸರ ಬಗ್ಗೆ ರಸ ಪ್ರಶ್ನೆಗಳನ್ನೂ ಕೇಳಿದರು. ನಂತರ ಮಕ್ಕಳ ಕಾರ್ಯಕ್ರಮ ಆರಂಭವಾಯಿತು. ಪುಟ್ಟ ಮಕ್ಕಳ ಸುಶ್ರಾವ್ಯ ಗಾಯನ ಕೇಳಿ ನೆರೆದಿದ್ದವರೆಲ್ಲ ತಲೆ ದೂಗಿದರು. ಕಾರ್ಯಕ್ರಮದ ಅಂತ್ಯದಲ್ಲಿ ರಸ ಪ್ರಶ್ನೆಯ ವಿಜೇತರ ಹೆಸರುಗಳನ್ನು ಉಪಾಧ್ಯಕ್ಷರಾದ ದಿನೇಶ್ ಉಡುಪಿಯವರು ಘೋಷಿಸಿದರು. ಪುಷ್ಪ ಸಂಜಯ್ ಅವರು ಬಹುಮಾನಗಳನ್ನು ವಿತರಿಸಿದರು. ಕೊನೆಯದಾಗಿ ವಿನಯ್ ನಾಗರಾಜ್ ಅವರು ವಂದನಾರ್ಪಣೆ ಮಾಡಿದರು.
ಒಟ್ಟಿನಲ್ಲಿ ಇದೊಂದು ಮರೆಯಲಾಗದ ಅನುಭವವಾಗಿ ಮೂಡಿ ಬಂತು. ಕಾರ್ಯಕ್ರಮದ ಯಶಸ್ಸು ಎಲ್ಲ ಪದಾಧಿಕಾರಿಗಳ ಮುಖದಲ್ಲೂ ಮೂಡಿದ ಸಾರ್ಥಕತೆಯಲ್ಲಿ ಗುರುತಿಸಬಹುದಾಗಿತ್ತು. ಇದಕ್ಕೆಲ್ಲ ಕಾರಣರಾದವರನ್ನು ನೆನೆಯದಿದ್ದರೆ ಕೃತಘ್ನರಾಗುತ್ತೇವೆ. ನಿಸ್ಪೃಹತೆಯಿಂದ ಕೆಲಸ ಮಾಡಿದ ಎಲ್ಲ ಪದಾಧಿಕಾರಿಗಳಿಗೂ ಹಾಗು ಲಘು ಉಪಾಹಾರದ ವ್ಯವಸ್ಥೆಗೆ ಸಹಾಯ ಮಾಡಿದ ಎಲ್ಲ ಸ್ವಯಂಸೇವಕರಿಗೂ ತರಂಗದ ಪರವಾಗಿ ನನ್ನ ಹೃತ್ಪೂರ್ವಕವಾದ ವಂದನೆಗಳು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications