ಪುರಂದರ ದಾಸರಿಗೆ ಸಿಂಗಪುರದಲ್ಲಿ ಸಂಗೀತ ನಮನ

ದಾಸಶ್ರೇಷ್ಠ ಪುರಂದರದಾಸರು ಹುಟ್ಟಿದ ದಿನವೇ ಆಗಲಿ, ಹರಿದಾಸ ದೀಕ್ಷೆ ಪಡೆದ ದಿನವೇ ಆಗಲೀ ತಿಳಿಯದು. ಅವರ ಶರೀರವನ್ನು ಅಗಲಿದ ದಿನ ಮಾತ್ರ ರಕ್ತಾಕ್ಷಿ ಸಂವತ್ಸರ, ಪುಷ್ಯ ಮಾಸದ ಅಮಾವಾಸ್ಯೆ ಕ್ರಿ.ಶ. 1564 ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಈ ದಿನವನ್ನು ವಿಶ್ವದ ಬಹುತೇಕ ಕಡೆಗಳಲ್ಲಿ ಕರ್ನಾಟಕ ಸಂಗೀತ ಆರಾಧಕರು ಪುರಂದರರ ಪುಣ್ಯದಿನವೆಂದು ದಾಸವರೇಣ್ಯನಿಗೆ ಪುಷ್ಪಾಂಜಲಿ ಸಲ್ಲಿಸುತ್ತಾರೆ.
ಪುರಂದರರಿಗೆ ಸಲ್ಲಿಪ ಈ ಪುಷ್ಪಾಂಜಲಿಯು ಸಂಗೀತ ಕಲಿತ, ಕಲಿಯುವ, ಸಂಗೀತ ಕಲಾಭಿಮಾನಿಗಳು ಸಲ್ಲಿಪ "ಗುರುವಂದನೆ". ಈ ಗುರುವಂದನೆಯನು ಸಿಂಗಪುರ ಕನ್ನಡ ಸಂಘ ಹಾಗೂ ಸ್ಯಾಮ-ಸಂಸ್ಥೆಯ ಕಲಾವಿದರ ನೇತೃತ್ವದಲ್ಲಿ, 24 ಶನಿವಾರ ಸಂಜೆ ಡಿ.ಬಿ.ಎಸ್. ಸಭಾಂಗಣದಲ್ಲಿ "ದಾಸರು"-(ದೃಷ್ಟಿಯಲಿ ಕೃಷ್ಣ)-ನೃತ್ಯರೂಪಕ ಕಾರ್ಯಕ್ರಮ ಏರ್ಪಡಿಸಿತ್ತು.
ಕೃಷ್ಣನ ಬಾಲಲೀಲೆಗಳ ವರ್ಣನೆ, ಗೋಪಿಕೆಯರ ಒಡನಾಟ, ತಾಯಿ-ಮಗುವಿನ ಅನುಬಂಧ, ಕಾಳಿಂಗ ಮರ್ದನ ಕಣ್ಣಾರೆ ಕಂಡಂತೆ ತಮ್ಮ ರಚನೆಗಳಲಿ ವರ್ಣಿಸಿ.. ಏಕೆ, ಹೀಗೆ, ಇದೇನು, ಅದ್ಯಾಕೆ ಎಂದು ಅ ಭಗವಂತ ನಿನ್ನ ಲೀಲೆಗಳು ಇದೆಂತುಹುದೆಂದು ಪ್ರಶ್ನಿಸಿ.. ಕಡೆಯಲ್ಲಿ ಹರಿಯೇ ಈ ಭವಬಂಧನದಿಂದ ಮುಕ್ತಿ ನೀಡು ಎಂದು ಮೊರೆಯಿಟ್ಟು ಆ ವಿಠಲನಲ್ಲಿ ಲೀನಗೊಳ್ಳುವ ಪುರಂದರರ ರಚನೆಗಳ ನಾಟ್ಯ-ಗಾಯನವದಾಗಿತ್ತು.
ಕನ್ನಡ ಸಂಘದ ಕಲಾವಿದರಿಂದ ಗಾಯನ- ಸ್ಯಾಮ ಸಂಸ್ಥೆಯ ವಿದ್ಯಾರ್ಥಿನಿಯರ ನೃತ್ಯ-ರೂಪಕದಲಿ ದಾಸರ ಬುಕುಚ್ಚಿ ಮಾಡಲಾರೆ, ಅಮ್ಮಾ ಎತ್ತಿಕೊಳ್ಳಮ್ಮ, ಗುಮ್ಮನ ಕರೆಯದಿರೆ, ಜಗದೋದ್ದಾರನ, ಏನು ಮಾಡಲೋ ರಂಗ, ಏಕೆ ಬೆಳಗಾಯಿತು, ಚಿಕ್ಕವನೇ ಇವನು ಯಶೋದೆ, ಜಗನ್ಮೋಹನನೇ ಕೃಷ್ಣ, ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ, ಆನೆಯು ಕರೆದರೆ ಆದಿಮೂಲ ಕೀರ್ತನೆಗಳು ಜನರ ಮನ ಗೆದ್ದವು.
ಗಾಯನ ಸಂಗೀತ ವಿದುಷಿ ಭಾಗ್ಯಮೂರ್ತಿ ಹಾಗೂ ತಂಡದವರಿಂದ ಕಲಾಪ್ರದರ್ಶನ ಏರ್ಪಡಿಸಲಾಗಿತ್ತು. ಇದಕ್ಕೆ ತಕ್ಕ ಸಾರಥ್ಯ ನೀಡಿದವರು ರಾಜ ಸುಬ್ರಹ್ಮಣ್ಯಂ-ಮೃದಂಗ, ತ್ಯಾಗರಾಜು-ಕೊಳಲು, ವಿದ್ಯಾ-ವಯಲಿನ್, ರಾಮ್ಕುಮಾರ್ ವಾಸುದೇವನ್-ವೀಣೆ. ಶ್ರೀಲಕ್ಷ್ಮಿ- ನಟುವಾಂಗ, ಪ್ರಕೃತಿ, ಸಾಧನ ರಾಜಾರಾಂ, ಭಾರತಿ ಮೂರ್ತಿ ಮತ್ತು ಅತಿರ ಅವರಿಂದ ನೃತ್ಯಗೈದರು. ಪುರಂದರ ವೇಷಧಾರಿಯಾಗಿ ವಿಶಾಲಾಕ್ಷಿ ವೈದ್ಯ, ನಿರೂಪಣೆ ಸರಯೂ ವೈದ್ಯ ಅವರಿಂದ ನಡೆಯಿತು.
ಪುರಂದರ ದಾಸರು ಹಿರಿಯ ಭಕ್ತ, ಹಾಡುಗಾರ, ಕೀರ್ತನಕಾರ. ಅವರ ಕೃತಿಗಳಲ್ಲಿ ಸಮಾಜ ವಿಮರ್ಶೆ, ಸಮಾಜ ಬೋಧನೆ, ದೇವರ ನಾಮ ಮಹಿಮೆ, ಅಂತರಂಗ ನಿವೇದನೆ, ಆಧ್ಯಾತ್ಮಿಕ ಕಲ್ಪನೆಗಳು ಕಂಡು ಬರುತ್ತದೆ. ದಾಸರ ಕೃತಿಗಳಲ್ಲಿ ಭಕ್ತನ ಸಂಪೂರ್ಣ ಸಮಪರ್ಣೆಯ ಸಾಕ್ಷಾತ್ಕಾರ ಸುಂದರ ರೂಪ ಕಂಡು ಬರುತ್ತದೆ. ಹಾಗೆಯೇ ಭಕ್ತಿ, ಶೃಂಗಾರ, ಹಾಸ್ಯ, ವಾತ್ಸಲ್ಯ, ವೈರಾಗ್ಯ, ನೀತಿಭೋಧೆ, ಜೀವನ ನಿಷ್ಠೆ ಇದೆ.
'ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ' ಎಂದು ಭಕ್ತಿ ಸಕ್ಕರೆಯ ಹಂಚಿ, ರಾಮನಾಮವ ನುಡಿ, ನುಡಿ, ಕಾಮಕ್ರೋಧಗಳ ಬಿಡಿ, ಬಿಡಿ-ಎಂದ್ನುಡಿದ ಪಿತಾಮಹನ ಆರಾಧನೆಯ ವೇದಿಕೆ ಹಾಡುಗಾರ ವೇದಿಕೆ. ಪ್ರತಿಯೋರ್ವ ಸಂಗೀತ ಪ್ರೇಮಿಯೂ ಹಿರಿಯ ವ್ಯಕ್ತಿಗೆ ಸಂಗೀತದ ಮೂಲಕ ಸಲ್ಲಿಸುವ ಪುರಂದರ ನಮನವೆಂಬ ಪೂಜೆ ಹೀಗೆಯೇ ಪ್ರತಿವರುಷವೂ ನಡೆಯುತ್ತಿರಲಿ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications