ಸಾಹಿತ್ಯಗೋಷ್ಠಿಯಲ್ಲಿ ವಿಜಯಾ ಹರನ್ ಉಪನ್ಯಾಸ
ಅಮೆರಿಕಾ ನೆಲದ ಕನ್ನಡ ಅಕ್ಷರಪ್ರೇಮಿಗಳ ವೃಂದ 'ಸಾಹಿತ್ಯಗೋಷ್ಠಿ' ಕಾರ್ಯಕ್ರಮಕ್ಕೆ ಮತ್ತೊಮ್ಮೆ ಎಲ್ಲರಿಗೂ ಸ್ವಾಗತ. ಈ ತಿಂಗಳ ಕಾರ್ಯಕ್ರಮದಲ್ಲಿ ಡಾ|| ಎಮ್. ಎಸ್. ವಿಜಯ ಹರನ್ ಅವರು ಒಂದು ಸ್ವಾರಸ್ಯಕರ ಉಪನ್ಯಾಸವನ್ನು ನೀಡಲಿದ್ದಾರೆ: "ಆನಂದರ (ಅಜ್ಜಂಪುರದ ಸೀತಾರಾಮ)ಸಣ್ಣ ಕಥೆಗಳು". ಇದೇ ವಸ್ತುವಿನ ಮೇಲೆ ಬರೆದ ಪ್ರೌಢ ಪ್ರಬಂಧ ಇವರಿಗೆ ಪಿಎಚ್.ಡಿಯನ್ನು ತಂದು ಕೊಟ್ಟಿದೆ.
ಕಾರ್ಯಕ್ರಮದ ವಿವರಗಳು ಇಂತಿವೆ:
ಜನವರಿ 25, 2009 (ಶನಿವಾರ)
ಮಧ್ಯಾಹ್ನ 2:00 ರಿಂದ 5:00 ರವರೆಗೆ
ಲಾಸ್ ಆಲ್ಟೋಸ್ ವಾಚನಾಲಯದ ಸಾರ್ವಜನಿಕ ಸಭಾಂಗಣ
13 ಸೌತ್ ಸ್ಯಾನ್ ಅಂಟೊನಿಯೋ ರೋಡ್,
ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯ 94022
* ಪ್ರಾರ್ಥನೆ : ಪದ್ಮ ರಾವ್.
* ಉಪನ್ಯಾಸ : 'ಆನಂದರ ಸಣ್ಣ ಕಥೆಗಳು" ಡಾ|| ಎಂ.ಎಸ್. ವಿಜಯ ಹರನ್
* ಕಾರ್ಯಕ್ರಮ ನಿರ್ವಹಣೆ : ವಿಶ್ವನಾಥ್ ಹುಲಿಕಲ್
ಡಾ||ಎಮ್. ಎಸ್. ವಿಜಯ ಹರನ್ ಪರಿಚಯ:
ಶ್ರೀಮತಿ ವಿಜಯ ಹರನ್ರವರು ಬಿ.ಎ. ಮತ್ತು ಎಮ್. ಎ. ಪದವಿಗಳನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮತ್ತು ಪಿಎಚ್.ಡಿ.ಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. ಅವರು "ಭಾರತ ಪ್ರಸಾರ ಕಾರ್ಯಕ್ರಮ ಸೇವೆ" ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ.
ಆಕಾಶವಾಣಿಯಲ್ಲಿ 34 ವರ್ಷಗಳು ಇವರು ಪ್ರಕಟಣೆ, ಕಾರ್ಯಕ್ರಮ ನಿರ್ವಹಣೆ ಮತ್ತು ಸಹ ನಿರ್ದೇಶಕಿ - ಹೀಗೆ ವಿವಿಧ ರೀತಿಯ ಕೆಲಸಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಮೈಸೂರಿನ ಆಕಾಶವಾಣಿಯಲ್ಲಿ ನಿಲಯದ ನಿರ್ದೇಶಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ವಿಜಯ್ ಹರನ್ ಹಲವಾರು ನಾಟಕಗಳನ್ನು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಬರೆದು ಪ್ರಸ್ತುತಪಡಿಸಿ, ಕೇಳುಗರ ಮನಗೆದ್ದಿದ್ದಾರೆ. ನಿತ್ಯ ಜೀವನದ ಪ್ರಾಮುಖ್ಯತೆಯ ಬಗ್ಗೆ 52 ಪ್ರಬಂಧಗಳನ್ನು ಬರೆದು ಪ್ರಸ್ತುತ ಪಡಿಸಿದ್ದಾರೆ; ಇದು ಪ್ರತಿವಾರವೂ ಆಕಾಶವಾಣಿಯಲ್ಲಿ ಬಿತ್ತರಿಸಲ್ಪಟ್ಟಿದೆ.
ಖಾಸಗಿ ಚಾನೆಲ್ ಮತ್ತು ಅದರಲ್ಲಿನ ಸವಾಲುಗಳ ಬಗ್ಗೆ ಪ್ರಸಾರ ಭಾರತಿಯ ಮುಂದೆ 2001ರಲ್ಲಿ ದೆಹಲಿಯಲ್ಲಿ ಒಂದು ಲೇಖನವನ್ನು ಮಂಡಿಸಿದ್ದಾರೆ. ರೇಡಿಯೋ ಮತ್ತು ಜನತೆಯ ಮೇಲೆ ಅದರ ಪರಿಣಾಮ ಎಂಬುದರ ಬಗ್ಗೆ ಬರೆದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಪ್ರಕಟಿತ ಕೃತಿಗಳು: "ಆನಂದರ ಬದುಕು-ಬರಹ" ಮತ್ತು "ಆಲೋಕ". ಇದಲ್ಲದೆ ದಿನ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ.
ಸಾಹಿತ್ಯಗೋಷ್ಠಿಯ ನಿಮ್ಮ ವಿಶ್ವಾಸಿಗಳು,
ಪ್ರಕಾಶ್ ನಾಯಕ್ ಮತ್ತು ವಿಶ್ವನಾಥ್ ಹುಲಿಕಲ್
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications