ವೈಜ್ಞಾನಿಕ-ಕೈಗಾರಿಕಾ ಕ್ರಾಂತಿಗಳು ಭಾರತದಲ್ಲೇಕೆ ಆಗಲಿಲ್ಲ?
Queen
of
the
Sciences
ಆದ
ಗಣಿತವನ್ನು
ತೆಗೆದುಕೊಳ್ಳೋಣ.
Herman
Wyle
ಪ್ರಕಾರ
ಐರೋಪ್ಯರ
ಗಣಿತ
ಗ್ರೀಕರ
ದೃಷ್ಟಿಕೋನವನ್ನು
ಬಿಟ್ಟು
ಹೊಸ
ಹಾದಿ
ಹಿಡಿದಿದ್ದು
ಪ್ರಾಯಶಃ
ಇಂಡಿಯಾದ
ಗಣಿತ
ಅರಬ್ಬರ
ಮೂಲಕ
ಪರಿಷ್ಕಾರ
ಹೊಂದಿ
ಪಶ್ಚಿಮ
ಏಷ್ಯಾದ
ಮೂಲಕ
ಯೂರೋಪಿಗೆ
ಬಂದಾಗ.
ಖಗೋಳಶಾಸ್ತ್ರಜ್ಞರಾದ ಗ್ರೀಕಿನ ಟಾಲೆಮಿ (ಕ್ರಿ.ಶ.2) ಮತ್ತು ಇಂಡಿಯಾದ ಆರ್ಯಭಟ (ಕ್ರಿ.ಶ.5) ರನ್ನು ಹೋಲಿಸಿ ನೋಡಿದರೆ ಗ್ರೀಕರ ವಿಧಾನಕ್ಕೂ, ಭಾರತೀಯ ವಿಧಾನಕ್ಕೂ ಇದ್ದ ಮೂಲಭೂತ ವ್ಯತ್ಯಾಸಗಳು ಕಾಣುತ್ತವೆ. ಗ್ರೀಕರು ಪ್ರಾರಂಭಿಸುತ್ತಿದ್ದುದು ಮೂಲವಾಕ್ಯ (axiom) ಅಥವಾ ಮಾದರಿಯಿಂದ. ನಂತರ ವ್ಯವಸ್ಠಿತ ತಾರ್ಕಿಕ ನಿಗಮನದಿಂದ (deductive logic) ಪ್ರಮೇಯಗಳನ್ನು, ಫಲಿತಾಂಶಗಳನ್ನು ಸ್ಥಿರಪಡಿಸುತ್ತಿದ್ದರು. ಆದರೆ ಇಂಡಿಯಾದ ವಿಧಾನ ವೀಕ್ಷಣೆ, ಗುಣನಕ್ರಮಗಳ ಮೂಲಕ ಸಮರ್ಥನೀಯ ತೀರ್ಮಾನವನ್ನು ತಲುಪುವುದು. ಅಲ್ಲದೇ ರ್ನಿಗಮನ ತರ್ಕದ ಬಗ್ಗೆ ಅಪನಂಬಿಕೆ. ಭೌತ-ಗಣಿತ ಮಾದರಿಗಳಲ್ಲಿ ಸಂಶಯ ಕಂಡುಬರುತ್ತದೆ.
ವಿಜ್ಞಾನದ ಸಮಸ್ಯೆಗಳಿಗೆ ಇಂಡಿಯಾದವರ ದೃಷ್ಟಿಕೋನದಲ್ಲಿ ಪ್ರಯೋಜನಕ್ಕೆ ಹೆಚ್ಚು ಪ್ರಾಶಸ್ತ್ಯವಿತ್ತು. ಉದಾಹರಣೆಗೆ, ವಿಶ್ವ ಸೂರ್ಯಕೇಂದ್ರಿತವೋ ಅಥವಾ ಭೂಕೇಂದ್ರಿತವೋ ಎಂಬ ಸಿದ್ಧಾಂತದ ಪ್ರಶ್ನೆ ಗ್ರೀಕ್ ಹಾಗೂ ಪಾಶ್ಚಿಮಾತ್ಯ ಚಿಂತಕರಿಗೆ ಮುಖ್ಯವಾಗಿ ಕಾಡಿದ್ದರೆ, ಇಂಡಿಯಾದ ಖಗೋಳಶಾಸ್ತ್ರಜ್ಞರಿಗೆ ಮುಖ್ಯವಾಗಿದ್ದು ಗ್ರಹಣ ಎಂದು ಸಂಭವಿಸುತ್ತದೆ ಎಂಬ ಕ್ರಿಯಾಜ್ಞಾನ.
ಒಟ್ಟಿನಲ್ಲಿ, ಚೀನಾದಿಂದ ಬಂದ ತಾಂತ್ರಿಕತೆ, ಇಂಡಿಯಾದಿಂದ ಬಂದ ಗಣಿತದ ಚಿಂತನಾಹಾದಿ, ಗ್ರೀಸಿನಿಂದ ಪಡೆದ ವಿಜ್ಞಾನ ಪರಂಪರೆ, ಪಶ್ಚಿಮ ಏಷ್ಯಾದಿಂದ ಬಂದ ಕ್ರಿಯಾಶೀಲ ಮಾಧ್ಯಮ - ಈ ಎಲ್ಲಾ ಆವಿಷ್ಕಾರಗಳಿರದಿದ್ದರೆ ಯೂರೋಪಿನ ವೈಜ್ಞಾನಿಕ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ.
ಅಂತೆಯೇ, ಯೂರೋಪಿನ ವಿಜ್ಞಾನ ಭೌತ-ಗಣಿತ ಮಾದರಿಗಳಿಂದ ಅದ್ಭುತ ಯಶಸ್ಸನ್ನು ಗಳಿಸಿದ್ದನ್ನು ಗಮನಿಸಿದರೆ, ಭಾರತೀಯರಿಗೆ ಭೌತ-ಗಣಿತ ಮಾದರಿಗಳಲ್ಲಿ ಇದ್ದ ಸಂಶಯದಿಂದ ಬಹಳಷ್ಟು ನಷ್ಟವಾಗಿರಬೇಕೆಂದು ತೋರುತ್ತದೆ. ಇದರೊಂದಿಗೆ ಮೌಖಿಕ ಪದ್ಧತಿಗೆ ಪ್ರಾಮುಖ್ಯವಿದ್ದು ದಾಖಲೆಗಳು ಹೆಚ್ಚಿಗೆ ಇಲ್ಲದಿದ್ದುದು, ಬರೆದಿಟ್ಟರೂ ಕ್ಲಿಷ್ಟವಾಗಿ, ಸಂಕ್ಷಿಪ್ತವಾಗಿ ಬರೆದಿಡುವ ಸಂಪ್ರದಾಯವಿದ್ದಿದ್ದರಿಂದ, ಭಾರತದಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆಗೆ ಅಡ್ಡಬಂದಿತು.
ಹೀಗೆ ಕಾರಣಾಂತರಗಳಿಂದ ತನ್ನನ್ನು ತಾನೇ ಕಟ್ಟಿಹಾಕಿಕೊಂಡ ಇಂಡಿಯಾದಲ್ಲಿ ಆಧುನಿಕ ವಿಜ್ಞಾನದ ಹುಟ್ಟು ಸಾಧ್ಯವಿರಲಿಲ್ಲವಾದರೂ, ಈಗಿನ ಹಾಗೂ ಮುಂದಿನ ಪೀಳಿಗೆಯ ಭಾರತೀಯ ವಿಜ್ಞಾನಿಗಳಿಗೆ ಈ ಅಡೆತೊಡೆಗಳಿಲ್ಲದಿರುವುದು ಸಮಾಧಾನಕರ ಸಂಗತಿ ಎಂಬ ಆಶಾಭಾವನೆಯಲ್ಲಿ ಚರ್ಚೆ ಮುಕ್ತಾಯವಾಯಿತು.
ದೂರದಲ್ಲಿ ನೆಲೆಸಿರುವ ಆಸಕ್ತರು ಭೂಮಿಕಾ ಚರ್ಚೆಯಲ್ಲಿ ದೂರವಾಣಿಯ ಮೂಲಕ ಭಾಗವಹಿಸಬಹುದು. ಈ ಅವಕಾಶ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಆಸಕ್ತರು ಭೂಮಿಕಾದ ಕಾರ್ಯಕರ್ತರನ್ನು ಸಂಪರ್ಕಿಸಿ :