ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ : ಜಯಜಯ ಕರ್ನಾಟಕಧೀಶ್ವರಿ

By Staff
|
Google Oneindia Kannada News

ಕವಿತೆ : ಜಯಜಯ ಕರ್ನಾಟಕಧೀಶ್ವರಿ
‘Jaya Karnataka Eshwari’ poem by Vibhanu
sಜಯ ಕರ್ನಾಟಕಧೀಶ್ವರಿ

ಜೈ ಜಯ ಭುವನೇಶ್ವರಿ
ಜಯ ಕರ್ನಾಟಕಧೀಶ್ವರಿ।

ಬಾನಿನಂಗಳದಿ ನೀ ಧ್ವಜದೀಶ್ವರಿ
ಮಲೆ ಸಹ್ಯಾದ್ರಿಯ ಮಕುಟಶಿಖರಿ
ಪಚ್ಚೆ ಪೈರುಗಳ ನವ ಧಾನ್ಯ ಶೇಖರಿ
ಗಣಿ ಕೋಲಾರದ ಹೊನ್ನ ಸುಂದರಿ
ಜಯ ಕರ್ನಾಟಕಧೀಶ್ವರಿ।

ವಿದ್ಯಾ ಶಾಲೆಗಳಲಿ ಶ್ರೀ ವಾಗೀಶ್ವರಿ
ಜೀವಜಲ ದಾಯಿನಿ ನದಿ ಕಾವೇರಿ
ಗೀತ ಗಾನ ಸುಧೆಯಿಂ ನೀ ಸುರಕಿನ್ನರಿ
ಕವಿ ಸಾಹಿತಿಗಳಿಂ ಗೋಚರಿಪ ಶರೀರಿ
ಜಯ ಕರ್ನಾಟಕಧೀಶ್ವರಿ।

ಕೊಂಕಣ ರೇಖೆಯ ಅಮಿತ ಕಡಲಸಿರಿ
ಘಟ್ಟ ತಪ್ಪಲುಗಳಲಿ ಬನಶಂಕರಿ
ಕರುನಾಡ ಮನಗಳ ಕನ್ನಡ ಕುವರಿ
ನೀ ಭಾರತಾಂಬೆ ಮುಡಿಯ ಚೆಲುವಿನ ಗರಿ
ಜಯ ಕರ್ನಾಟಕಧೀಶ್ವರಿ।


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X