ಕವಿ ಮೈ.ಶ್ರೀ.ನಟರಾಜ್ಗೆ ಯುಗಾದಿ ಕಾರ್ಯಕ್ರಮದಲ್ಲಿ ಅಭಿನಂದನೆ
*ಚಿದಾ ರಂಗಸ್ವಾಮಿ
ಹ್ಯೂಸ್ಟನ್ ಕನ್ನಡ ವೃಂದದ ಈ ಬಾರಿಯ ಯುಗಾದಿ ಕಾರ್ಯಕ್ರಮದಲ್ಲಿದ್ದುದು ಬೇವು ಬೆಲ್ಲ ಮಾತ್ರವಲ್ಲ ; ಇಡೀ ಕಾರ್ಯಕ್ರಮಕ್ಕೆ ಒಂದು ಚೆಂದದ ಕವಿತೆಯ ಲಯವಿತ್ತು . ಅಲ್ಲಿ ಕವಿಯೂ ಇದ್ದರೆನ್ನಿ . ಇತ್ತೀಚೆಗಷ್ಟೇ ತವರಲ್ಲಿ ಗೊರೂರು ಪ್ರಶಸ್ತಿ -ಸನ್ಮಾನಕ್ಕೆ ಪಾತ್ರರಾಗಿ, ಕುತ್ತಿಗೆಯಲ್ಲಿ ಇನ್ನೂ ಗುಲಾಬಿ ಮಲ್ಲಿಗೆಯ ಪರಿಮಳದ ಕಂಪಿರುವ ಡಾ.ಮೈ.ಶ್ರೀ.ನಟರಾಜ್ ಕಾರ್ಯಕ್ರಮದ ಕೇಂದ್ರಬಿಂದು.
ಮೇ 24ರಂದು ಮೀನಾಕ್ಷಿ ದೇಗುಲದ ಸಭಾಂಗಣದಲ್ಲಿ ಹ್ಯೂಸ್ಟನ್ ಕನ್ನಡ ವೃಂದದ ಯುಗಾದಿ ಕಾರ್ಯಕ್ರಮ ನಡೆಯಿತು. ಕನ್ನಡ ವೃಂದದ ಅಧ್ಯಕ್ಷ ವತ್ಸ ಕುಮಾರ್ ಅವರ ಪ್ರಾಸ್ತಾವಿಕ ಮಾತು ಹಾಗೂ ಸ್ವಾಗತದ ಮೂಲಕ ಯುಗಾದಿ ಕಾರ್ಯಕ್ರಮ ಪ್ರಾರಂಭವಾಯಿತು.
ಸುಮಾ ಮಂಜುನಾಥ್ ಮತ್ತು ರಾಜೇಶ್ವರಿ ಅವರು ಹಾಡಿದ ಯುಗಾದಿ ಗೀತೆ ಹೊಸ ವರ್ಷದ ಆಚರಣೆಗೆ ವಿಶೇಷ ಸೊಬಗು ನೀಡಿತು. ಯುಗಾದಿ ಗೀತೆಯ ನಂತರ ಕನ್ನಡನಾಡಿನ ಜನಪದ ನೃತ್ಯವನ್ನು ಕನ್ನಡ ವೃಂದದ ಮಕ್ಕಳು ಯಶಸ್ವಿಯಾಗಿ ಪ್ರದರ್ಶಿಸಿದರು.
ಮಧುಚಂದ್ರ ಸಿರಿಕೇಂದ್ರದ ಕವಿ ಡಾ.ಮೈ.ಶ್ರೀ.ನಟರಾಜ್ರನ್ನು ಸುಬ್ಬಿ ಸುಬ್ರಹ್ಮಣ್ಯಂ ಅವರು ಸಭೆಗೆ ಪರಿಚಯಿಸಿದರು. 60 ದಿನಗಳಲ್ಲಿ ನಟರಾಜ್ ಅವರು ಕಾಲೇಜು ಹಾಗೂ ಹಾಸ್ಟೆಲ್ ಜೊತೆಗಾರನಾಗಿದ್ದ ದಿನಗಳನ್ನು ನೆನಪಿಸಿಕೊಂಡ ಸುಬ್ಬಿ ಸುಬ್ರಹ್ಮಣ್ಯಂ- ಹ್ಯೂಸ್ಟನ್ ಕನ್ನಡಿಗರಿಗೆ ಆತ್ಮೀಯವೆನ್ನಿಸುವ ನಟರಾಜ್ರ ಕವಿತೆ ಮುಖಪುಟ / ಸಾಹಿತ್ಯ ಸೊಗಡು