Get Updates
Get notified of breaking news, exclusive insights, and must-see stories!

‘ವಾ’ನರರು ಕಟ್ಟಿದ ಸ್ವರ್ಣಸೇತುಕನ್ನಡ ಕೂಟವೊಂದರ ವಾರ್ಷಿಕ ಸಂಚಿಕೆ ಹೀಗಿರಬೇಕು ಅನ್ನುವಂತಿದೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ 2003ರ ಸಾಹಿತ್ಯ ಸಂಚಿಕೆ ‘ಸ್ವರ್ಣಸೇತು’. ಪುಟಪುಟದಲ್ಲೂ ಸಂಪಾದಕೀಯ ಬಳಗದ ಪರಿಶ್ರಮದ ಹಾಜರಿಯಿದೆ. ‘ಸ್ವರ್ಣಸೇತು’ ಸಾಹಿತ್ಯ ಸಂಚಿಕೆಯ ಕುರಿತ ಈ ಒಳನೋಟದ ಬರಹದಲ್ಲಿ ಕಾಣುವುದು ಪುಸ್ತಕ ವಿಮರ್ಶೆಯಲ್ಲ - ಪುಸ್ತಕ ಪ್ರೀತಿ !

ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ

ಮಾರ್ಚ್‌ 10, 2003

‘ವಾ’ನರರು ಕಟ್ಟಿದ ಸ್ವರ್ಣಸೇತು
ಕನ್ನಡ ಕೂಟವೊಂದರ ವಾರ್ಷಿಕ ಸಂಚಿಕೆ ಹೀಗಿರಬೇಕು ಅನ್ನುವಂತಿದೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ 2003ರ ಸಾಹಿತ್ಯ ಸಂಚಿಕೆ ‘ಸ್ವರ್ಣಸೇತು’. ಪುಟಪುಟದಲ್ಲೂ ಸಂಪಾದಕೀಯ ಬಳಗದ ಪರಿಶ್ರಮದ ಹಾಜರಿಯಿದೆ. ‘ಸ್ವರ್ಣಸೇತು’ ಸಾಹಿತ್ಯ ಸಂಚಿಕೆಯ ಕುರಿತ ಈ ಒಳನೋಟದ ಬರಹದಲ್ಲಿ ಕಾಣುವುದು ಪುಸ್ತಕ ವಿಮರ್ಶೆಯಲ್ಲ - ಪುಸ್ತಕ ಪ್ರೀತಿ !

  • ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌,
    E-mail : [email protected]
Swarnasetu KKNC magazine, 2003ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ‘ಸಾಹಿತ್ಯಿಕ’ ಸದಸ್ಯರಿಗೆಲ್ಲ ನನ್ನ ನಮಸ್ಕಾರಗಳು.

ನಿಮ್ಮ ಕೂಟದ 2003ರ ಸಾಹಿತ್ಯ ಸಂಚಿಕೆ ‘ಸ್ವರ್ಣಸೇತು’ವಿನ ಪ್ರತಿಯನ್ನು ದತ್ತಾತ್ರಿ ರಾಮಣ್ಣ ನೇತೃತ್ವದ ಸಂಪಾದಕ ಮಂಡಲಿಯವರು ಪ್ರೀತಿ-ವಿಶ್ವಾಸಗಳಿಂದ ನನಗೆ ಕಳಿಸಿಕೊಟ್ಟಿದ್ದರು. 180 ಪುಟಗಳ ಈ ಪುಸ್ತಕವನ್ನು ಬಿಡುವು ಸಿಕ್ಕಿದ ವೇಳೆಯಲ್ಲಿ ಓದಿಮುಗಿಸಿದಾಗ ಅನಿಸಿದ್ದಿಷ್ಟು :

ಸಂಪಾದಕ ಮಂಡಳಿ, ಸಂಚಿಕೆಯಲ್ಲಿನ ಶ್ರೀಮಂತ ಬರಹಗಳ ಲೇಖಕರು, ಆಕರ್ಷಕ ಮುಖಪುಟ ಮತ್ತು ಚಿತ್ರರಚಿಸಿದ ಕಲಾವಿದರು - ಎಲ್ಲರೂ ‘ಸ್ತುತ್ಯರ್ಹ’ ಕೆಲಸಮಾಡಿದ್ದಾರೆ! ಹಾಗಾಗಿ ಎಲ್ಲರಿಗೂ ಅಭಿನಂದನೆ ಮತ್ತು ಧನ್ಯವಾದ ಸೂಚಿಸೋಣವೆಂದು ಈ ಪತ್ರ.

ಸ್ವರ್ಣಸೇತು ಸಂಚಿಕೆಯ ಕುರಿತು ಎರಡು ಮಾತು

  • ಮುಖಪುಟ ವಿನ್ಯಾಸ ಸರಳ-ಸುಂದರವಾಗಿದ್ದು ಬಹಳ ಅರ್ಥಪೂರ್ಣವಾಗಿದೆ. ಜನಾರ್ಧನ ಸ್ವಾಮಿಯವರ ‘ಸ್ಟಾಂಪ್‌’ ಕಂಡೇ ಕಾಣುತ್ತದೆ.
  • ವರದಿಗಳು, ಕಥೆ, ಕವನ, ಸಂದರ್ಶನ (ಡೆಟ್ರಾಯಿಟ್‌ ಸಮ್ಮೇಳನದ ಆ ಗಲಾಟೆಯ ನಡುವೆಯೂ ನಿಸಾರ್‌ ಅಹ್ಮದ್‌ರ ಸಮಯ ಪಡೆದು ನಡೆಸಿದ್ದು) - ಹೀಗೆ ‘ಆಲ್‌ರೌಂಡರ್‌’ ಸಾಧನೆ ತೋರಿದ ಜ್ಯೋತಿ ಮಹಾದೇವ್‌ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಬೇಕು. ಈ ‘ಬಹುಮುಖ ಸಾಧನೆ’ಯಲ್ಲಿ ಸೂಪರ್‌ ಎಂದರೆ ‘ಕಂದ ಮನೆಯಲ್ಲಿಲ್ಲ...’ ಕವನ!
  • ಹರಿಹರೇಶ್ವರ ಅವರ ಪ್ರಬಂಧ ಅಧ್ಯಾತ್ಮ ವಿಷಯದಿಂದಾಗಿ ಸ್ವಲ್ಪ ‘ತಲೆಯ ಮೇಲಿಂದ’ ಹಾದುಹೋಗುವಂತಿದ್ದರೆ, ನಟರಾಜ್‌ ಅವರ ಪ್ರಬಂಧ ವಸ್ತುಸ್ಥಿತಿಗೆ ಹತ್ತಿರವಾಗಿದೆ. ‘ಭಾಷೆ, ಸೌಂದರ್ಯ...’ (ಮಹಾಬಲಶಾಸ್ತ್ರಿ) ಸೋದಾಹರಣ ಪ್ರಬಂಧ ಚೆನ್ನಾಗಿದೆ.
  • ಗುರುಪ್ರಸಾದ್‌ ಕಾಗಿನೆಲೆ, ಎಂ.ವಿ.ನಾಗರಾಜರಾವ್‌, ಶಾಂತಾರಾಮ ಸೋಮಯಾಜಿ ಮತ್ತು ಕಡೂರು ರಾಮಸ್ವಾಮಿಯವರ ಕಥೆಗಳು ಖಂಡಿತವಾಗಿಯೂ ಸ್ವರ್ಣಸೇತುವಿನ ಮೌಲ್ಯ ಹೆಚ್ಚಿಸಿವೆ.
  • ಎಲ್ಲ ಕವಿತೆಗಳೂ ಹೈ-ಕ್ಲಾಸ್‌! ಅದರಲ್ಲೂ ಎರಡನ್ನು ಹೆಸರಿಸಿ ಎಂದು ನನ್ನ ಬಳಿ (ಅದು ನಿಮ್ಮ ಅಭಿಪ್ರಾಯವೂ ಆಗಿರಬೇಕಿಲ್ಲ) ಕೇಳಿದರೆ ‘ಒಲವಿನ ಸಸಿ’( ಸುಧಿ ಬೆಂಗಳೂರು) ಮತ್ತು ‘ಜಿಂಕೆ ಜಾನಕಿ’ (ಸಂಧ್ಯಾ ರವೀಂದ್ರನಾಥ್‌).
  • ‘ಅಮೆರಿಕಾಯಣ’ (ಜ್ಯೋತಿ ಶೇಖರ್‌) ವ್ಯಂಗ್ಯಚಿತ್ರಗಳೂ ‘ಕಾರ್ಟೂನ್‌ ಸ್ವಾಮಿ’ಯವರ ಚಿತ್ರಗಳಿಗಿಂತೇನೂ ಕಡಿಮೆಯಿಲ್ಲ !
  • ಚಿಣ್ಣರ ಲೋಕದಲ್ಲಿ , ‘ಆನಂದನ ರಜಾ’ (ವಿವೇಕ್‌ ವಿನಾಯಕ್‌), ‘Hurry, I found peace’(ಅಭಿಜ್ಞಾ ಚಂದ್ರಶೇಖರ್‌) ಮತ್ತು ‘Trip to Kabini’ (ಅಲೋಕ್‌ ಸುಬ್ಬರಾವ್‌) ನನಗಿಷ್ಟವಾದುವು. ಉಳಿದವರೆಲ್ಲರ ಪ್ರತಿಭೆಯೂ ಮೆಚ್ಚತಕ್ಕದ್ದೇ.
  • ‘ಸ್ವರ್ಣಸೇತು’ ಹೆಸರು ಕೂಡ ಚೆನ್ನಾಗಿದೆ. ಬಹುಷಃ ಲೇಖನಗಳ ತಯಾರಿ, ಬರವಣಿಗೆ, ಕ್ರೋಢೀಕರಣದ ವೇಳೆ ಇನ್ನೂ ಈ ಹೆಸರು ನಿರ್ಧರಿತವಾಗಿದ್ದಂತಿಲ್ಲ. ಎಲ್ಲ ಕಡೆ, ‘ನಮ್ಮೀ ಸಂಚಿಕೆಯಲ್ಲಿ..., ನಮ್ಮ ಸಂಚಿಕೆಗೆ..., ಈ ಸಂಚಿಕೆಯ...’ ಎಂದೇ ಕಂಡುಬರುತ್ತಿದೆ. ಆ ಜಾಗದಲ್ಲೆಲ್ಲ ‘ಸ್ವರ್ಣಸೇತು’ ಉಲ್ಲೇಖಿಸಬೇಕು, ಮುಂದಿನ ಸಂಚಿಕೆಯಿಂದ.
  • ಮುಖಾಮುಖಿ, ಪ್ರಬಂಧ, ಕಥೆ, ಕವನ, ಚಿತ್ರಗಳು, ಮಕ್ಕಳ ವಿಭಾಗ - ಹೀಗೆ ವಿವಿಧಗುಚ್ಛಗಳನ್ನು ಪೋಣಿಸಿದ ರೀತಿ ಚೆನ್ನಾಗಿದೆ. ‘ದೇವಾಲಯದ ಬಳಿಯಲೊಂದು ಮನೆಯ ಮಾಡಿ’, ‘ಅವತಾರದ ಅವಾಂತರ’ ಮುಂತಾದ ಹರಟೆ ಬರಹಗಳು (ಅವು ಚೆನ್ನಾಗಿವೆ!) ‘ಲಲಿತ ಪ್ರಬಂಧ’ಗಳಾದುದರಿಂದ ಪ್ರಬಂಧಗಳ ವಿಭಾಗಕ್ಕೆ ಸೇರಬೇಕೇನೊ.
  • ‘ಗ್ಯಾಪ್‌ ಫಿಲ್ಲಿಂಗ್‌ ಐಟಂ’ಗಳನ್ನು ಇನ್ನೂ ಚೆನ್ನಾಗಿ ನಿರ್ವಹಿಸಬಹುದಿತ್ತು. ಕೆಲವು ಕಡೆ ರಚನೆಕಾರರ ಹೆಸರಿಲ್ಲ. ಅಕ್ಷರಕ್ಕೊಂದು ಗಾದೆ (ಪುಟ 48) ಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ‘ಪ ಫ ಬ ಭ ಮ’ ಎಲ್ಲಿ ಮಾಯವಾದುವು?
  • ಕಾಗುಣಿತ ತಪ್ಪುಗಳು ಕೆಲವೊಮ್ಮೆ ಅನಿವಾರ್ಯ. ಆದರೆ ‘ಜಿ.ಪಿ.ರಾಜರತ್ನಂ’ ಎಂದಿರಬೇಕಾದ್ದು ‘ಜೆ.ಪಿ.ರಾಜರತ್ನಂ’ (ಪುಟ 156) ಆಗಿರುವುದು ಅಕ್ಷಮ್ಯ!
ಒಟ್ಟಿನಲ್ಲಿ , ಸ್ವರ್ಣಸೇತು ಕಟ್ಟಿದ ವಾನರರು (ವಾ! ನರರು:-) ಮತ್ತು ಅಳಿಲುಗಳಿಗೆಲ್ಲ ಇನ್ನೊಮ್ಮೆ ಹೃತ್ಪೂರ್ವಕ three cheers!! ನಿಮ್ಮೆಲ್ಲರ ಸಾಹಿತ್ಯ ಕೃಷಿ ಹೀಗೇ ಹುಲುಸಾಗಿ ಬೆಳೆಯಲಿ.

Click here to go to top
ಮುಖಪುಟ / ಸಾಹಿತ್ಯ ಸೊಗಡು


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+