ಕೆರೆಯ ನೀರನು ಕೆರೆಗೆ ಚೆಲ್ಲಿ
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೊ - ಪುರಂದರ ದಾಸ.
ಇಲಿನಾಯ್ ಕನ್ನಡ ಕೂಟ, ವಿದ್ಯಾರಣ್ಯವು ಕಳೆದ ಎಂಟು ವರ್ಷಗಳಿಂದ ತನ್ನ ಚಾರಿಟಬಲ್ ಫಂಡ್ ಸಮಿತಿಯ ಮೂಲಕ ಸಮಾಜದ ನಿರಾಶ್ರಿತರಿಗೆ, ದೀನರಿಗೆ, ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಿರುವ ವಿವಿಧ ಸಂಸ್ಥೆಗಳಿಗೆ ಧನ ಸಹಾಯ ನೀಡುತ್ತಿದೆ. ಈ ವರ್ಷ ಈ ಬಗ್ಗೆ ನಿಧಿ ಸಂಗ್ರಹಕ್ಕಾಗಿ ಎರಡು ಕಾರ್ಯಕ್ರಮಗಳನ್ನು ನಿಯೋಜಿಸಲಾಗಿತ್ತು. ಮೊದಲನೆಯ ಕಾರ್ಯಕ್ರಮ ಎಂ.ಎಸ್. ಶೀಲಾ ಅವರ ಸಂಗೀತ ಕಛೇರಿ ಏಪ್ರಿಲ್ ತಿಂಗಳಿನಲ್ಲಿ ನಡೆಯಿತು.
ಎರಡನೆಯ ಕಾರ್ಯಕ್ರಮ ಉತ್ತರ ಕ್ಯಾಲಿಫೋರ್ನಿಯಾದ 'ರಾಗ" ತಂಡದವರಿಂದ 'ಸಂಗೀತ ಸಂಧ್ಯೆ" ಡಿಸೆಂಬರ್ ಎಂಟರಂದು ನಡೆಯಿತು. 'ಸ್ವಾಮಿ ಕಾರ್ಯ, ಸ್ವಕಾರ್ಯ" ಎಂಬ ಗಾದೆಯನ್ನು ಅನ್ವರ್ಥಗೊಳಿಸಿದ ಕಾರ್ಯಕ್ರಮವಿದು. ವಿವಿಧ ವಸ್ತುಗಳ ಆಕ್ಷನ್, ರ್ಯಾಫಲ್ ಹಾಗೂ ಟಿಕೆಟ್ಗಳ ಮಾರಾಟದಿಂದ ಬಹಳಷ್ಟು ಹಣ ಸಂಗ್ರಹವಾಗಿತ್ತು. 'ರಾಗ" ತಂಡದವರೂ ಉದಾರ ಮನಸ್ಸಿನವರಾಗಿದ್ದು, ತಾಯ್ನಾಡ ಸೇವೆಯಲ್ಲಿ ತಮ್ಮದೊಂದು ಕಿರುಕಾಣಕೆ ಎಂಬ ಮನೋಭಾವದಿಂದ ಈ ಕಾರ್ಯಕ್ರಮವನ್ನು ಉಚಿತವಾಗಿ ನೀಡಿದರು. ಆದರೆ, ಅಂದಿನ ಸಂಗೀತದ ಅಮಲೇರಿಸುವ ಮಾದಕತೆ, ಕಲಾವಿದರು ಮತ್ತು ಸಭಿಕರ ಪರಸ್ಪರ ಭಾಗವಹಿಸುವಿಕೆಯಿಂದ ಸಭಾಂಗಣದಲ್ಲಾದ ವಿದ್ಯುತ್ ಸಂಚಾರ, ಮೈ ಮರೆಸುವ ಕುಣಿತ, ಮನ ತಣಿಸುವ ಗಾಯನ ಎಲ್ಲವೂ ಸೇರಿ '"ಸ್ವಾಮಿ ಕಾರ್ಯ" ಮರೆಯಾಗಿ ಇದು 'ಸ್ವಕಾರ್ಯ" ಎನ್ನಿಸುವಂತೆ ಮಾಡಿತ್ತು.
ಹಲವಾರು ಹಳೆಯ ಚಿತ್ರಗೀತೆಗಳು : 'ಮಾಯಾ ಬಜಾರ್" ಚಿತ್ರದ 'ಸಾಗಲಿ ತೇಲಿ ತರಂಗದೊಳು", 'ಗೆಜ್ಜೆಪೂಜೆ"ಯ 'ಗಗನವು ಎಲ್ಲೋ", 'ಮನ ಮೆಚ್ಚಿದ ಮಡದಿ" ಚಿತ್ರದ ಪಿ.ಬಿ. ಶ್ರೀನಿವಾಸ್ ಹಾಡಿದ 'ಜೈ ಭಾರತ ಜನನಿಯ ತನುಜಾತೆ" 'ಬಬ್ರುವಾಹನ" ಚಿತ್ರದ 'ಆರಾಧಿಸುವೆ ಮದನಾರಿ" ಮುಂತಾದ ಹಾಡುಗಳು ಸಭಿಕರನ್ನು ಗತಿಸಿದ ಸುಂದರ ದಿನಗಳ ಯಕ್ಷ ಲೋಕಕ್ಕೆ ಕೊಂಡೊಯ್ದವು. ಜೊತೆಗೇ ಹೊಸ ಚಿತ್ರಗಳಾದ 'ಅಮೃತವರ್ಷಿಣಿ", 'ನಮ್ಮೂರ ಮಂದಾರ ಹೂವೆ" ಮುಂತಾದ ಚಿತ್ರಗಳ ಗೀತೆಗಳೂ ಇದ್ದವು. ಕಾರ್ಯಕ್ರಮದ ಉತ್ತರಾರ್ಧದಲ್ಲಿ ಸಭಿಕರು ತಮ್ಮ ಸಂಕೋಚ , ನಾಚಿಕೆಯನ್ನು ಬದಿಗೊತ್ತಿ ಎದ್ದು ನರ್ತಿಸಲು ಶುರು ಮಾಡಿದಾಗಲಂತೂ 'ಈ ಸಂಗೀತದ ಮರುಳು ಮಾಡುವ ಶಕ್ತಿಯಾದರೂ ಎಷ್ಟು ಅದ್ಭುತವಾದದ್ದು" ಎಂದು ಎಲ್ಲರಿಗೂ ಅನಂದಾಶ್ಚರ್ಯ ಉಂಟಾಗಿತ್ತು.
ಸಂಗೀತ ಸಂಧ್ಯೆಯಲ್ಲಿ ಭಾಗವಹಿಸಿದ ಕಲಾವಿದರು ರಾಮ್ ಪ್ರಸಾದ್, ಅಶೋಕ್ ಕುಮಾರ್, ರವಿಕುಮಾರ್, ಬಿ.ವಿ. ಜಗದೀಶ್, ಪರಿಮಳ ಮುರಳೀಧರ, ದೀಪ್ತಾ ಕಾರ್ತಿಕ್, ಚಂದ್ರಿಕ ಶಂಕರ್, ಅಂಜನ್ ಶ್ರೀನಿವಾಸ್, ಸುನೀಲ್ ನಾಡಿಗ್ ಶಂಕರ್, ಮಹೇಶ್ ಕುಮಾರ್, ನಟರಾಜ್ ಗುಜರನ್, ಸತೀಶ್ ತಾರೆ ಮತ್ತು ವೆಂಕಟೇಶನ್ ವಿಜಯಕುಮಾರ್. ಅದಮ್ಯ ಉತ್ಸಾಹವನ್ನೂ, ನಿಸ್ವಾರ್ಥ ಸೇವಾ ಮನೋಭಾವವನ್ನೂ ಹೊಂದಿದ ಕಲಾವಿದರಿಗೆ ಇಲಿನಾಯ್ ಕನ್ನಡ ಕೂಟವು ಒಂದು ಕಿರುಕಾಣಿಕೆಯನ್ನು ಮತ್ತು ಶಿಕಾಗೋ ವಲಯದ ಪತ್ರಿಕೆಯಾದ ' ಸಂಗಮ"ವನ್ನು ನೀಡಿ ಗೌರವಿಸಿತು.
ಈ ಕಾರ್ಯಕ್ರಮ ಮೋಕ್ಷಗುಂಡಂ ಜಯರಾಮ್ ಅವರ ನೇತೃತ್ವದಲ್ಲಿ ನಡೆದಿದ್ದು ಅವರು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಎರಡು ಸಮಾರಂಭಗಳನ್ನೂ ಸೇರಿಸಿ ಹಲವು ಸಾವಿರ ಡಾಲರ್ಮೊತ್ತದ ಹಣ ಕಲೆಕ್ಟ್ ಆಗಿದ್ದು, ಸದ್ಯದಲ್ಲೇ ಈ ಹಣವನ್ನು ವಿವಿಧ ಸಂಸ್ಥೆಗಳಿಗೆ ವಿತರಣೆ ಮಾಡಲಾಗುತ್ತದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications