ಉತ್ತರ ಕ್ಯಾಲಿಫೋರ್ನಿಯಾದಲ್ಲಿ ‘ಗಣೇಶನ ಹಬ್ಬ’
ಉತ್ತರ ಕ್ಯಾಲಿಫೋರ್ನಿಯಾ : ಇಲ್ಲಿನ ಕನ್ನಡಕೂಟ ‘ಗಣೇಶನ ಹಬ್ಬ’ದ ಸಮಾರಂಭವನ್ನು ಆಗಸ್ಟ್ 25 ರ ಶನಿವಾರ ಏರ್ಪಡಿಸಿದೆ. ಪೂಜೆ ಮಾತ್ರವಲ್ಲದೆ ನೃತ್ಯ, ನಾಟಕ, ಸಂಗೀತ ಮುಂತಾದ ಕಾರ್ಯಕ್ರಗಳಿರುವುದು ಉತ್ಸವದ ವಿಶೇಷ. ಮನೆ ಮಕ್ಕಳೊಂದಿಗೆ ಸಂತೋಷ ಪಡಲು ಬನ್ನಿ ಎಂದು ಕನ್ನಡಕೂಟದ ಪ್ರಕಟಣೆ ತಿಳಿಸಿದೆ.
ಸ್ಪಾನ್ಗೆನ್ಬರ್ಗ್ ಥಿಯೇಟರ್ ಸಭಾಂಗಣ, ಗನ್ನ್ ಹೈಸ್ಕೂಲ್, 780 ಅರಸ್ಟ್ರಡೆರೋ ರಸ್ತೆ , ಪಾಲೋ ಆಲ್ಟೋ, ಉತ್ತರ ಕ್ಯಾಲಿಫೋರ್ನಿಯಾ 94306, ಈ ವಿಳಾಸದಲ್ಲಿ ಆ.25 ರಂದು ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೂ ಗಣೇಶ ಉತ್ಸವದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಕ್ಕಳಿಂದ ಗಣೇಶನ ಪೂಜೆ ನಡೆಯಲಿದೆ. ಪಂಡಿತ ಗಜಾನನ ಜೋಷಿ ಪುರೋಹಿತರಾಗಿರುತ್ತಾರೆ. ಆನಂತರ- ಉಷಾ ಶೇಖರ್ ನಿರ್ದೇಶನದ ‘ಗಣೇಶನ ಸೃಷ್ಟಿ ’ ಮಕ್ಕಳ ನೃತ್ಯ ನಾಟಕ, ರಶ್ಮಿ ಅಶೋಕ್ಕುಮಾರ್ ನೃತ್ಯ ಸಂಯೋಜನೆಯ ಜನಪದ ಗೀತೆಯ ನೃತ್ಯ, ವೀಣಾ ರಮೇಶ್ ಮತ್ತು ಸಂಗಡಿಗರಿಂದ ಕೋಲಾಟ, ಪ್ರಮೀಳಾ ಶಿವಶಂಕರ್ ನಿರ್ದೇಶನದಲ್ಲಿ ಕೋಲಾಟ, ಆನಂದ್ ಮತ್ತು ಶ್ರೀರಂಜನಿ ತಂಡದವರಿಂದ ಕನ್ನಡ ಚಿತ್ರಗೀತೆಗಳು ಹಾಗೂ ರಾಘವೇಂದ್ರ ಹೆಬ್ಬಳಲು ಮತ್ತು ಸುಕುಮಾರ್ ರಘುರಾಮ್ ನಡೆಸಿಕೊಡುವ ಕನ್ನಡ ರಸಪ್ರಶ್ನೆ ಕಾರ್ಯಕ್ರಮಗಳು ನಡೆಯಲಿವೆ.
ಹಬ್ಬದ ಊಟದ ನಂತರ ‘ಇಂಚರ’ ಗಾನವೃಂದದ ಸುಗಮ ಸಂಗೀತ ಕಾರ್ಯಕ್ರಮ, ಎಚ್.ಸಿ. ಶ್ರೀನಿವಾಸ್ ನಿರ್ದೇಶನದಲ್ಲಿ ದ.ರಾ.ಬೇಂದ್ರೆ ಅವರ ‘ಸಾಯೋ ಆಟ’ ನಾಟಕ ಪ್ರದರ್ಶನ, ಅಶೋಕ್ ಕುಮಾರ್ ದಿಗ್ದರ್ಶನದಲ್ಲಿ ‘ಸಾಮೂಹಿಕ ನಾಡಗೀತೆ’ ಕಾರ್ಯಕ್ರಮಗಳಿವೆ.
ಹೆಚ್ಚಿನ
ವಿವರಗಳಿಗೆ
-
ರಾಮ್
ಪ್ರಸಾದ್
ಹೆಬ್ಬಳಲು
:
(510)
489-7190
ಪರಿಮಳಾ
ಮುರಳೀಧರ
:
(408)
927-9945
ಶೋಭಾ
ಪ್ರಭಾಕರ
:
(408)
867-7314
ರಾಘವೇಂದ್ರ
ಹೆಬ್ಬಳಲು
:
(408)
227-0277
ಅಥವಾ
ಮುಖಪುಟ
/
ಸಾಹಿತ್ಯ
ಸೊಗಡು