ಕ್ಯಾಲಿಫೋರ್ನಿಯಾ - ನೊಂದವರಿಗಾಗಿ ಭಜನೆ
ಕ್ಯಾಲಿಫೋರ್ನಿಯಾ : ಇದೊಂದು ನೊಂದವರಿಗಾಗಿ ಸಂತಾಪ ಸೂಚಿಸುತ್ತ ಒಳಿತಿಗಾಗಿ ಪ್ರಾರ್ಥಿಸುವ ಸಂಜೆ . ಮಾರ್ಚ್ 24 ರ ಶನಿವಾರ ಸಂಜೆ ಒಟ್ಟುಗೂಡುವ ಭಾರತೀಯ ಸಮುದಾಯ ಭಜನೆಯ ಮೂಲಕ ಗುಜರಾತ್ ಭೂಕಂಪಕ್ಕೆ ಬಲಿಯಾದವರಿಗೆ ಹಾಗೂ ನೊಂದವರಿಗೆ ನೆಮ್ಮದಿ ದೊರಕಲೆಂದು ಪ್ರಾರ್ಥಿಸಲಿದೆ.
ಇಂಡಿಯನ್ ಅಸೋಸಿಯೇಶನ್ಸ್ ಮತ್ತು ಕೆಸಿಎ ಸೇರಿದಂತೆ ದಕ್ಷಿಣ ಕ್ಯಾಲಿಫೋರ್ನಿಯಾದ ಸಂಸ್ಥೆಗಳು ಒಟ್ಟಾಗಿ ಈ ಕಾರ್ಯಕ್ರಮವನ್ನು ಸ್ವಾಮಿ ನಾರಾಯಣ ದೇಗುಲದಲ್ಲಿ ಏರ್ಪಡಿಸಿವೆ. ಸಂಜೆ 6.30 ರಿಂದ 7.30 ರವರೆಗೆ ಊಟದ ವ್ಯವಸ್ಥೆಯೂ ಇದೆ. 8 ರಿಂದ 10.30 ರವರೆಗೆ ಭಜನೆ, ಪ್ರಾರ್ಥನೆ.
ಗೋಪ್ಲ ಮರಾಠೆ, ಹೇಮಟ್ ಎಕ್ಬೊಟೆ, ಭೂಪೇಂದ್ರ ಸೋನ್ಐ, ಕೀರ್ತಿ ದವೆ, ನಿತಿನ್ ಕರಿಯ, ಬಾಬುಭಾಯ್ ಗೊರಾಜಿಯ, ದಿಲೀಪ್ ಭಟ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುವರು . ಕಾಂಗ್ರೆಸ್ಸಿಗ ಈ. ರಾಯ್ಸ್ ಪ್ರಾಸ್ತಾವಿಕ ಭಾಷಣ ಮಾಡುವರು. ಹೆಚ್ಚಿನ ವಿವರಗಳಿಗೆ ಮಹೇಂದ್ರ ಶಾ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ - 714-821-8974, ಇ ಮೇಲ್ -[email protected]
ಸ್ಥಳ
:Swaminarayan
Temple
(BAPS),
12401
Pellissier
Road,
Whittier
CA
90601
(ಇನ್ಫೋ ವಾರ್ತೆ)