ಅನಿವಾಸಿ ಕನ್ನಡಿಗರಿಂದ ನಾಟಕ-ಕರ್ನಾಟಕ

"ರಂಗಧ್ವನಿ" ಹವ್ಯಾಸಿ ನಾಟಕ ಸಂಸ್ಥೆ ವಲ್ಲೀಶ ಶಾಸ್ತ್ರಿಯವರ ನೇತೃತ್ವದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಾಟಕಗಳನ್ನು ಪ್ರದರ್ಶಿಸುವುದಲ್ಲದೇ ಅಮೆರಿಕೆಯ ಹಲವಾರು ನಗರಗಳಲ್ಲೂ ಪ್ರದರ್ಶಿಸುತ್ತಾ ರಂಗ ಚಟುವಟಿಕೆಗಳಲ್ಲಿ ತೊಡಗಿ ಕನ್ನಡ ಸೇವೆ ಮಾಡುತ್ತಿರುವ ಸಂಸ್ಥೆ.
"ಹಾಲಿವುಡ್ನಲ್ಲಿ ಯಮ", "ಕೃಷ್ಣ ಸಂಧಾನ", "ಪಶ್ಚಾತ್ತಾಪ", "ಗೋವಿನ ಕಥೆ".. ಹೀಗೆ ಹಲವಾರು ನಾಟಕ ಪ್ರದರ್ಶನಗಳಿಂದ ಅಮೆರಿಕೆಯ ಕನ್ನಡಿಗರಿಗೆ ಚಿರಪರಿತರಾಗಿರುವ ಈ ಕಲಾವಿದರು, ಈಗ ತಾಯ್ನಾಡಿನಲ್ಲಿ ತಮ್ಮ ಕಲಾಪ್ರದರ್ಶನಕ್ಕೆ ಬರುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಾಟಕಗಳನ್ನು ಪ್ರದರ್ಶಿಸಲು ರೆಡಿಯಾಗಿದ್ದಾರೆ.
ಈ ಸಾಗರೋತ್ತರ ಕನ್ನಡ ನಾಟಕ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಹೆಗಲು ಕೊಟ್ಟು ನಿಂತಿದೆ ಬೆಂಗಳೂರಿನ ಕಲಾವೇದಿಕೆ ಸಂಸ್ಥೆ ಹಾಗೂ ವಲ್ಲೀಶ ಶಾಸ್ತ್ರಿಯವರ ಸ್ನೇಹಿತರ ಸಮೂಹ.
ಮೊದಲ ನಾಟಕ ಜೇಮ್ಸ್ ಹ್ಯಾಡ್ಲಿ ಚೇಸ್ ನ ಖ್ಯಾತ ಕಥೆ "There is Always a Price Tag"ನ ಕನ್ನಡ ನಾಟಕ ರೂಪಾಂತರ "ತಿರುಗೇಟು". ಈ ಕುತೂಹಲಕಾರಿ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸುವವರು ವಲ್ಲೀಶ ಶಾಸ್ತ್ರಿ ಹಾಗೂ ರವಿ ಶೇಷಾದ್ರಿ.
ಎರಡನೇ ನಾಟಕ, IT ಯುಗದಲ್ಲಿ ಯಮನ ಅವತಾರದ ಒಂದು ವಿಡಂಬನೆ "ಯಮನ Call Center". ಅನಿವಾಸಿ ಹೈಟೆಕ್ ಕನ್ನಡಿಗರನ್ನೊಡಗೂಡಿಸಿ ನಿರ್ದೇಶಿಸಿರುವವರು ವಲ್ಲೀಶ ಶಾಸ್ತ್ರಿ. ಅಮೆರಿಕೆಯಂತಹ ದೇಶದಲ್ಲಿ ಕನ್ನಡದ ಕಂಪನ್ನು ರಂಗ ಚಟುವಟಿಕೆಯ ಮೂಲಕ ಅಮೆರಿಕೆಯ ಉದ್ದಗಲಕ್ಕೂ ಹಬ್ಬಿಸುತ್ತಿರುವ ಈ ಸಂಸ್ಥೆ ಸ್ತುತ್ಯಾರ್ಹ. ಕನ್ನಡಿಗರೆಲ್ಲರು ಬಂದು ನಾಟಕ ನೋಡಿ ಪ್ರೋತ್ಸಾಹಿಸಬೇಕೆಂದು ರಂಗಧ್ವನಿ ಕಲಾವಿದರು ಮನವಿಮಾಡಿದ್ದಾರೆ. [ಸ್ಥಳ, ದಿನಾಂಕ, ಸಮಯದ ವಿವರಗಳು]
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications