ಅನಿವಾಸಿ ಕನ್ನಡಿಗರಿಂದ ನಾಟಕ-ಕರ್ನಾಟಕ

"ರಂಗಧ್ವನಿ" ಹವ್ಯಾಸಿ ನಾಟಕ ಸಂಸ್ಥೆ ವಲ್ಲೀಶ ಶಾಸ್ತ್ರಿಯವರ ನೇತೃತ್ವದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಾಟಕಗಳನ್ನು ಪ್ರದರ್ಶಿಸುವುದಲ್ಲದೇ ಅಮೆರಿಕೆಯ ಹಲವಾರು ನಗರಗಳಲ್ಲೂ ಪ್ರದರ್ಶಿಸುತ್ತಾ ರಂಗ ಚಟುವಟಿಕೆಗಳಲ್ಲಿ ತೊಡಗಿ ಕನ್ನಡ ಸೇವೆ ಮಾಡುತ್ತಿರುವ ಸಂಸ್ಥೆ.
"ಹಾಲಿವುಡ್ನಲ್ಲಿ ಯಮ", "ಕೃಷ್ಣ ಸಂಧಾನ", "ಪಶ್ಚಾತ್ತಾಪ", "ಗೋವಿನ ಕಥೆ".. ಹೀಗೆ ಹಲವಾರು ನಾಟಕ ಪ್ರದರ್ಶನಗಳಿಂದ ಅಮೆರಿಕೆಯ ಕನ್ನಡಿಗರಿಗೆ ಚಿರಪರಿತರಾಗಿರುವ ಈ ಕಲಾವಿದರು, ಈಗ ತಾಯ್ನಾಡಿನಲ್ಲಿ ತಮ್ಮ ಕಲಾಪ್ರದರ್ಶನಕ್ಕೆ ಬರುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಾಟಕಗಳನ್ನು ಪ್ರದರ್ಶಿಸಲು ರೆಡಿಯಾಗಿದ್ದಾರೆ.
ಈ ಸಾಗರೋತ್ತರ ಕನ್ನಡ ನಾಟಕ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಹೆಗಲು ಕೊಟ್ಟು ನಿಂತಿದೆ ಬೆಂಗಳೂರಿನ ಕಲಾವೇದಿಕೆ ಸಂಸ್ಥೆ ಹಾಗೂ ವಲ್ಲೀಶ ಶಾಸ್ತ್ರಿಯವರ ಸ್ನೇಹಿತರ ಸಮೂಹ.
ಮೊದಲ ನಾಟಕ ಜೇಮ್ಸ್ ಹ್ಯಾಡ್ಲಿ ಚೇಸ್ ನ ಖ್ಯಾತ ಕಥೆ "There is Always a Price Tag"ನ ಕನ್ನಡ ನಾಟಕ ರೂಪಾಂತರ "ತಿರುಗೇಟು". ಈ ಕುತೂಹಲಕಾರಿ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸುವವರು ವಲ್ಲೀಶ ಶಾಸ್ತ್ರಿ ಹಾಗೂ ರವಿ ಶೇಷಾದ್ರಿ.
ಎರಡನೇ ನಾಟಕ, IT ಯುಗದಲ್ಲಿ ಯಮನ ಅವತಾರದ ಒಂದು ವಿಡಂಬನೆ "ಯಮನ Call Center". ಅನಿವಾಸಿ ಹೈಟೆಕ್ ಕನ್ನಡಿಗರನ್ನೊಡಗೂಡಿಸಿ ನಿರ್ದೇಶಿಸಿರುವವರು ವಲ್ಲೀಶ ಶಾಸ್ತ್ರಿ. ಅಮೆರಿಕೆಯಂತಹ ದೇಶದಲ್ಲಿ ಕನ್ನಡದ ಕಂಪನ್ನು ರಂಗ ಚಟುವಟಿಕೆಯ ಮೂಲಕ ಅಮೆರಿಕೆಯ ಉದ್ದಗಲಕ್ಕೂ ಹಬ್ಬಿಸುತ್ತಿರುವ ಈ ಸಂಸ್ಥೆ ಸ್ತುತ್ಯಾರ್ಹ. ಕನ್ನಡಿಗರೆಲ್ಲರು ಬಂದು ನಾಟಕ ನೋಡಿ ಪ್ರೋತ್ಸಾಹಿಸಬೇಕೆಂದು ರಂಗಧ್ವನಿ ಕಲಾವಿದರು ಮನವಿಮಾಡಿದ್ದಾರೆ. [ಸ್ಥಳ, ದಿನಾಂಕ, ಸಮಯದ ವಿವರಗಳು]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications