ಅಮೆರಿಕದಲ್ಲಿ ಭೀಕರ ಬರಗಾಲ! ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ!
ಪ್ರಕೃತಿಯ ಮೇಲೆ ದೌರ್ಜನ್ಯ ಎಸಗಿದ್ದರ ಫಲವನ್ನು ಮನುಷ್ಯ ನಿಧಾನವಾಗಿ ಅನುಭವಿಸುತ್ತಿದ್ದಾನೆ. ಅದರಲ್ಲೂ ಅಮೆರಿಕ ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಹೋಗಿದೆ. ಇನ್ನು ಈಗ ತಾನೆ ಕೊರೊನಾ ಕೊಟ್ಟಿರುವ ಏಟಿನಿಂದ ಹೊರಬರುತ್ತಿರುವ ಅಮೆರಿಕನ್ನರಿಗೆ, ಮಳೆಯಾಗದ ಪರಿಣಾಮ ಭೀಕರ ಬರಗಾಲ ಮತ್ತೊಂದು ಶಾಕ್ ನೀಡಿದೆ. ಕೊಲೊರಾಡೋ ನದಿಗೆ ಅಡ್ಡಲಾಗಿ ನೆವಾಡಾ ಮತ್ತು ಅರಿಜೋನ ಗಡಿಯಲ್ಲಿ ನಿರ್ಮಿಸಿರುವ ಹೂವರ್ ಡ್ಯಾಂನ ನೀರಿನ ಮಟ್ಟ ಭಾರಿ ಕುಸಿತ ಕಂಡಿದೆ.
ಡ್ಯಾಂ ನೀರು ಇಷ್ಟು ಕುಸಿತ ಕಂಡಿರುವುದು ಇದೇ ಮೊದಲು ಎನ್ನುತ್ತಾರೆ ಇಲ್ಲಿನ ತಜ್ಞರು. ಹೀಗೆ ಡ್ಯಾಂನಲ್ಲಿ ನೀರಿಗೆ ಬರ ಎದುರಾಗಿರುವ ಪರಿಣಾಮ ಸುಮಾರು 25 ಮಿಲಿಯನ್ ಅಂದ್ರೆ 2 ಕೋಟಿ 50 ಲಕ್ಷ ಅಮೆರಿಕನ್ನರಿಗೆ ಭಾರಿ ತೊಂದರೆ ಆಗಲಿದೆ. ಈ ತಿಂಗಳ ಆರಂಭದಲ್ಲೇ ಅಮೆರಿಕ ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಆದರೆ ಮತ್ತೆ 10-20 ದಿನದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.
ಈಗ ಇರುವ ನೀರು ಕೂಡ ಸದ್ಯದಲ್ಲೇ ಖಾಲಿಯಾಗುವ ಆತಂಕ ಎದುರಾಗಿದೆ. ಇಷ್ಟುದಿನ ಮನಸೋಯಿಚ್ಛೆ ನೀರು ಖರ್ಚು ಮಾಡಿದ್ದವರು, ಈಗ ಹನಿ ಹನಿ ನೀರಿಗೂ ಲೆಕ್ಕ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಕೃಷಿಗೆ ನೀರು ಬೀಡುತ್ತಿಲ್ಲ..!
ಈಗಿನ ಪರಿಸ್ಥಿತಿ ನೋಡಿದ್ರೆ ಮುಂದೆ ಅಮೆರಿಕದ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿಗೂ ಬರ ಎದುರಾಗಿ, ಜನರು ನರಳುವ ಭೀತಿ ಕಾಡುತ್ತಿದೆ. ಹೀಗಾಗಿ ಕೃಷಿಗೆ ಕೊಡುತ್ತಿದ್ದ ನೀರು ನಿಲ್ಲಿಸಿದೆ ಸರ್ಕಾರ. ಇದರ ಪರಿಣಾಮ ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಅಮೆರಿಕ ರೈತರ ಪರಿಸ್ಥಿತಿ. ಸದ್ಯದಲ್ಲೇ ಮಳೆಯಾಗುವ ಲಕ್ಷಣಗಳು ಕೂಡ ಇಲ್ಲ. ಹೀಗಾಗಿ ನೀರಿನ ಕೊರತೆ ಮತ್ತಷ್ಟು ಹೆಚ್ಚಲಿದೆ, ಸಮಸ್ಯೆ ಬಗೆಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂಬ ಎಚ್ಚರಿಕೆ ನೀಡಲಾಗಿದೆ. ಹೂವರ್ ಡ್ಯಾಂ ನೀರಿನ ಮಟ್ಟ ಬರೋಬ್ಬರಿ 35 ಅಡಿಗೆ ಕುಸಿತ ಕಂಡಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಯುತ್ತಾ ಸಾಗಿದೆ.

1400 ವರ್ಷದಲ್ಲೇ ಭೀಕರ ಬರಗಾಲ
ಕಳೆದ 20 ವರ್ಷಗಳಿಂದಲೂ ಕ್ಯಾಲಿಫೋರ್ನಿಯಾದ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಇಳಿಕೆ ಕಾಣುತ್ತಿದೆ. ಆದರೆ ಈ ಬಾರಿ 1400 ವರ್ಷದಲ್ಲೇ ಕಾಣದಷ್ಟು ಬರಗಾಲ ಎದುರಾಗಿದೆ. ಕೃಷಿ ಭೂಮಿ ಒಣಗಿ ನಿಂತಿದ್ದರೂ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ಇದನ್ನ ಬಿಡಿ ಮುಂದಿನ ದಿನಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಜನರಿಗೆ ಕುಡಿಯುವ ನೀರು ಸಿಗೋದೆ ಅನುಮಾನವಾಗಿದೆ. ಹೀಗಾಗಿ ಬೈಡನ್ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಈಗ ನಿರ್ಲಕ್ಷ್ಯ ಮಾಡಿದ್ರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ.

ಕೃಷಿಕರ ಬದುಕು ಬೀದಿಗೆ
ನೀವು ಕೇಳಿರಬಹುದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬೆಳೆಯುವ ಬಾದಾಮಿಗೆ ಭಾರಿ ಡಿಮ್ಯಾಂಡ್ ಇದೆ. ಈ ಬಾದಾಮಿ ಬೆಳೆಗೆ ತನ್ನದೇ ಮಾನ್ಯತೆ ಹಾಗೂ ವೈಶಿಷ್ಟ್ಯತೆ ಕೂಡ ಇದೆ. ಅದರಲ್ಲೂ ಕ್ಯಾಲಿಫೋರ್ನಿಯಾ ರಾಜ್ಯದ ಬಾದಾಮಿ ಬೆಳೆಗಾರರು, ತಮ್ಮ ತಮ್ಮಲ್ಲಿ ಸಾಕಷ್ಟು ನಿಯಮ ಹಾಕಿಕೊಂಡಿದ್ದಾರೆ. ಬಾದಾಮಿ ಬೆಳೆಯಲು ಇದೇ ನೀರನ್ನು ಬಳಸಬೇಕು, ಕುಡಿಯುವ ನೀರನ್ನೇ ಉಪಯೋಗಿಸಬೇಕು. ಗುಣಮಟ್ಟ ಕೆಡದಂತೆ ಕಾಪಾಡಿಕೊಂಡು ಬರಬೇಕು. ಹೀಗೆ ಹಲವು ನಿಯಮ ಹಾಕಿಕೊಂಡು ಉತ್ತಮವಾಗಿ 'ಬಾದಾಮಿ' ಬೆಳೆಯುತ್ತಾರೆ. ಹೀಗಾಗಿಯೇ ಕ್ಯಾಲಿಫೋರ್ನಿಯಾ ಬಾದಾಮಿಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಇದೆ. ಆದ್ರೆ ಈ ಬಾರಿ ಎದುರಾದ ಬರಗಾಲ ಸುಮಾರು ಅರ್ಧಲಕ್ಷ ಕೋಟಿ ಅಂದರೆ 50 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಉಂಟುಮಾಡಿದೆ.

ಕುಡಿವ ನೀರಿಗೂ ಪರದಾಟ
ಅಮೆರಿಕ ಹೆಸರಿಗೆ ಮಾತ್ರ ಶ್ರೀಮಂತ ರಾಷ್ಟ್ರ, ಆದರೆ ದೊಡ್ಡ ದೊಡ್ಡ ನಗರಗಳನ್ನ ಬಿಟ್ಟು ಸಣ್ಣಪುಟ್ಟ ಪ್ರದೇಶಗಳ ಪಾಡು ಹೇಳತೀರದು. ಕುಡಿಯುವ ನೀರಿನ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಜನವಸತಿ ಪ್ರದೇಶಕ್ಕೆ ಸಪ್ಲೈ ಆಗುವ ನೀರಲ್ಲಿ ಹಾವು, ಕಪ್ಪೆ ಹೀಗೆ ನಾನಾ ಅತಿಥಿಗಳ ಹೆಣ ಮನೆ ಕೊಳಾಯಿ ಮೂಲಕ ಬಂದು ಬೀಳುತ್ತಿದೆ. ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಿದುಳು ತಿನ್ನುವ ಅಮೀಬಾ ಸೇರಿದಂತೆ ಹಲವು ಕಂಟಕಗಳು ಅಮೆರಿಕದ ನಿವಾಸಿಗಳನ್ನ ಕಾಡುತ್ತಿದೆ. ಹಾಳಾಗಿ ಹೋಗಲಿ ಅದೇ ಕೊಳಕು ನೀರನ್ನ ಬಳಸೋಣ ಅಂದ್ರೂ, ಈಗ ಅದಕ್ಕೂ ಕಲ್ಲು ಹಾಕಿದ್ದಾನೆ ಮಳೆರಾಯ.

ರಸ್ತೆ, ನೀರಿಗೆ 1.7 ಟ್ರಿಲಿಯನ್..!
ಮೂಲ ಸೌಕರ್ಯ ಅಂದ್ರೆ ಮನುಷ್ಯ ಬದುಕಲು ಅತ್ಯಗತ್ಯವಾಗಿರುವ ಕುಡಿಯುವ ನೀರು, ಉತ್ತಮ ರಸ್ತೆಗಳ ನಿರ್ಮಾಣ ಹೀಗೆ ಹಲವು ವಿಭಾಗಗಳಿಗೆ ಬಜೆಟ್ನಲ್ಲಿ ಹೆಚ್ಚು ಹಣ ನೀಡಲು ಜೋ ಬೈಡನ್ ನಿರ್ಧರಿಸಿದ್ದಾರೆ. ಬೈಡನ್ ಲೆಕ್ಕಾಚಾರದ ಪ್ರಕಾರ ಮೂಲ ಸೌಕರ್ಯ ಕ್ಷೇತ್ರಕ್ಕೆ 1.7 ಟ್ರಿಲಿಯನ್ ಡಾಲರ್ಗೆ ಫಿಕ್ಸ್ ಆಗಿದೆ. ಈ ಮೂಲಕ ಇಡೀ ಅಮೆರಿಕದ ಇತಿಹಾಸದಲ್ಲೇ ಮೂಲ ಸೌಕರ್ಯ ಮತ್ತೊಮ್ಮೆ ಅತ್ಯುನ್ನತ ಮಟ್ಟಕ್ಕೆ ಏರಿಸೋಕೆ ತಯಾರಿ ನಡೆಸಿದ್ದಾರೆ ಬೈಡನ್. ಆದರೆ ಇದೀಗ ಬರಗಾಲ ಎದುರಾಗಿದ್ದು, ಇದನ್ನೆಲ್ಲಾ ಸರಿಯಾಗಿ ನಿಭಾಯಿಸಿ, ಅಮೆರಿಕನ್ನರ ದಾಹ ತೀರಿಸಬೇಕಾದ ಜವಾಬ್ದಾರಿ ಬೈಡನ್ ಮೇಲಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications