ಹವಾಮಾನ ವೈಪರೀತ್ಯದ ಬಗ್ಗೆ ವಿಜ್ಞಾನಕ್ಕೆ ಏನೂ ಗೊತ್ತಿಲ್ಲ: ಟ್ರಂಪ್
ವಾಷಿಂಗ್ಟನ್, ಸೆಪ್ಟೆಂಬರ್ 15: ಹವಾಮಾನ ವೈಪರೀತ್ಯದ ಕುರಿತು ವಿಜ್ಞಾನಿಗಳ ಗ್ರಹಿಕೆ ಮತ್ತು ಅಧ್ಯಯನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಾಗತಿಕ ಹವಾಮಾನ ಶೀಘ್ರದಲ್ಲಿಯೇ ತಣ್ಣಗಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ವಾತಾವರಣವು ತಣ್ಣಗಾಗುತ್ತಿದೆ. ಕಾದು ನೋಡಿ. ಬಹುಶಃ ವಿಜ್ಞಾನಕ್ಕೆ ಇದು ತಿಳಿದಿದೆ ಎನಿಸುತ್ತಿಲ್ಲ ಎಂದಿದ್ದಾರೆ.
'ವಾತಾವರಣದ ಬದಾಲವಣೆಯನ್ನು ನೀವು ಗಮನಿಸಬೇಕು ಎಂದು ಕೋರುತ್ತೇವೆ. ಮುಖ್ಯವಾಗಿ ನಮ್ಮ ಕಾಡುಗಳ ಮೇಲೆ ಅದರ ಪರಿಣಾಮ ಗುರುತಿಸಬೇಕು. ನಾವು ವಿಜ್ಞಾನದ ಜತೆಗೂಡಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ವಿಜ್ಞಾನ ಬಹಳ ಮುಖ್ಯ. ಏಕೆಂದರೆ ನಾವು ವಿಜ್ಞಾನವನ್ನು ಅಲಕ್ಷಿಸಿದರೆ, ಇದೆಲ್ಲವೂ ನಿಸರ್ಗದ ಪ್ರಕ್ರಿಯೆ ಎಂದುಕೊಂಡರೆ ಕ್ಯಾಲಿಫೋರ್ನಿಯಾವನ್ನು ರಕ್ಷಿಸುವುದರಲ್ಲಿ ಸಫಲರಾಗುವುದಿಲ್ಲ' ಎಂದು ಕ್ಯಾಲಿಫೋರ್ನಿಯಾದ ನೈಸರ್ಗಿಕ ಸಂಪನ್ಮೂಲಗಳ ಕಾರ್ಯದರ್ಶಿ ವೇಡ್ ಕ್ರೌಫೂಟ್ ಹೇಳಿದ್ದರು.

ಈ ಹೇಳಿಕೆಗೆ ಅಸಮ್ಮತಿ ಸೂಚಿಸಿರುವ ಡೊನಾಲ್ಡ್ ಟ್ರಂಪ್, ಕ್ಯಾಲಿಫೋರ್ನಿಯಾದಲ್ಲಿ ಉರಿಯುತ್ತಿರುವ ಕಾಳ್ಗಿಚ್ಚು ತಾನಾಗಿಯೇ ತಣ್ಣಗಾಗಲಿದೆ ಎಂದಿದ್ದರು. ಅದಕ್ಕೆ ಕ್ರೌಫೂಟ್, 'ವಿಜ್ಞಾನ ನಿಮ್ಮ ಹೇಳಿಕೆಯನ್ನು ಒಪ್ಪಿಕೊಳ್ಳಲಿದೆ ಎಂದು ಭರವಸೆ ಹೊಂದಿದ್ದೇನೆ' ಎಂದು ಹೇಳಿದ್ದರು. ಅದಕ್ಕೆ ಟ್ರಂಪ್, 'ಇದು ವಿಜ್ಞಾನಕ್ಕೆ ತಿಳಿದಿದೆ ಎಂದು ನನಗನಿಸುತ್ತಿಲ್ಲ' ಎಂದಿದ್ದಾರೆ.
ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್ನಲ್ಲಿನ ಕಾಳ್ಗಿಚ್ಚಿನ ಪ್ರಕೋಪಕ್ಕೆ ಅರಣ್ಯವನ್ನು ಸೂಕ್ತವಾಗಿ ನೋಡಿಕೊಳ್ಳದಿರುವುದೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ. 'ಉರುಳಿ ಬಿದ್ದ ಮರಗಳು ಕೆಲವು ಸಮಯದಲ್ಲಿಯೇ ಬಹಳ ಒಣಗಿ ಹೋಗುತ್ತವೆ. ಅವು ಬೆಂಕಿ ಕಡ್ಡಿಯಂತಾಗಿರುತ್ತವೆ. ಅವು ಸ್ಫೋಟಗೊಳ್ಳಬಹುದು. ಹಾಗೆಯೇ ಎಲೆಗಳು ಕೂಡ. ನೆಲದಲ್ಲಿ ಒಣಗಿದ ಎಲೆಗಳಿದ್ದರೆ ಬೆಂಕಿಗೆ ತೈಲ ಸುರಿದಂತೆ ಎಂದು ಟ್ರಂಪ್ ತಿಳಿಸಿದ್ದಾರೆ.
-
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
ಇರಾನ್ ವಿರುದ್ಧ ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನಷ್ಟು ದಾಳಿ ಎಚ್ಚರಿಕೆ | Operation Roaring Lion -
ಕಚ್ಚಾತೈಲ ಸರಬರಾಜು ಮಾಡಲು ಮತ್ತೆ ಇರಾನ್ ಅಡ್ಡಿ, ಪರಿಸ್ಥಿತಿ ಇನ್ನಷ್ಟು ಕಠಿಣ | Operation Roaring Lion -
ಭಾರತಕ್ಕೆ ಬಂಪರ್, ರಷ್ಯಾ ಮೂಲಕ 30 ಮಿಲಿಯನ್ ಬ್ಯಾರಲ್ ತೈಲ ಖರೀದಿ | Operation Roaring Lion -
ತೀವ್ರಗೊಂಡ ಇರಾನ್ ಯುದ್ಧದ ಸಮಸ್ಯೆ, ತಿಕ್ಕಾಟ ಇನ್ನಷ್ಟು ಜೋರು | Operation Roaring Lion -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications