ಮಾನವ ಸಹಿತ ಚಂದ್ರಯಾನ ನಾಸಾ ತಂಡದಲ್ಲಿ ಓರ್ವ ಭಾರತೀಯ
ವಾಷಿಂಗ್ಟನ್, ಡಿ. 11: ಮಾನವ ಸಹಿತ ಚಂದ್ರಯಾನ ಯೋಜನೆ ಹಾಕಿಕೊಂಡಿರುವ ನಾಸಾದ ತಂಡದಲ್ಲಿ ಭಾರತ ಮೂಲದ ಗಗನಯಾನಿ ಕೂಡಾ ಆಯ್ಕೆಯಾಗಿದ್ದಾರೆ. ಇಂಡೋ ಅಮೆರಿಕನ್ ಗಗನಯಾನಿ ಸೇರಿದಂತೆ 18 ಮಂದಿ ತಂಡಕ್ಕೆ ವಿಶೇಷ ತರಬೇತಿ ಆರಂಭವಾಗಿದೆ.
18 ಮಂದಿ ಗಗನಯಾತ್ರಿಗಳ ತಂಡದಲ್ಲಿ ಮಹಿಳೆಯರೇ ಅಧಿಕವಾಗಿದ್ದು, ಆರ್ಟಿಮಿಸ್ ಚಂದ್ರನ ಮೇಲೆ ಲ್ಯಾಂಡಿಂಗ್ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆಯಲಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಸೂಕ್ತ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ತಂಡದಲ್ಲಿರುವ ಭಾರತೀಯ ಮೂಲದ ಅಮೆರಿಕನ್ ರಾಜಾ ಜಾನ್ ವರ್ಪುತೂರ್ ಎಂದು ಗುರುತಿಸಲಾಗಿದೆ. 43ವರ್ಷ ವಯಸ್ಸಿನ ಗಗನಯಾನಿ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದು, ಯುಎಸ್ ನೇವಿ ಪೈಲಟ್ ಸ್ಕೂಲ್, ಎಂಐಟಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ತಂಡದಲ್ಲಿರುವ ಏಕೈಕ ಇಂಡಿಯನ್- ಅಮೆರಿಕನ್ ಎನಿಸಿಕೊಂಡಿದ್ದಾರೆ.

2017ರಿಂದ ಗಗನಯಾನಿ ಅಭ್ಯರ್ಥಿ ತರಗತಿಗಳಲ್ಲಿ ಪಾಲ್ಗೊಂಡು ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ಈ ಮಹತ್ವದ ಯೋಜನೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಸಾ ಹೇಳಿದೆ.
ಗಗನಯಾನಿಗಳು ವಿವಿಧ ವಯೋಮಿತಿಯಲ್ಲಿದ್ದು, 32 ವರ್ಷದವರೊಬ್ಬರು ಅತ್ಯಂಕ ಕಿರಿಯರೊಬ್ಬರು ಹಾಗೂ 55 ವರ್ಷದವರು ಹಿರಿಯರಾಗಿದ್ದಾರೆ. ಸರಾಸರಿ ವಯಸ್ಸು 30 ರಿಂದ 40ರೊಳಗಿನ ವಯೋಮಿತಿಯವರಿದ್ದಾರೆ.
2024ರ ಚಂದ್ರಯಾನ ಕಾರ್ಯಕ್ರಮವು ಮೊದಲಿಗೆ ಮಹಿಳಾ ಗಗನಯಾನಿಗೆ ಚಂದ್ರನ ಅಂಗಳದಲ್ಲಿ ಕಾಲಿಡಲು ಅವಕಾಶ ನೀಡುತ್ತಿದೆ. ಚಂದ್ರನ ಮೇಲೆ ನಡಿಗೆ ಎಂಬುದು ಪ್ರತಿಯೊಬ್ಬರ ಕನಸು, ಅತ್ಯಂತ ಹೆಮ್ಮೆಯ ಕ್ಷಣ ಎಂದು ಮುಖ್ಯ ಗಗನಯಾನಿ ಪ್ಯಾಟ್ ಫಾರೆಸ್ಟರ್ ಹೇಳಿದ್ದಾರೆ. ಈ ತಂಡದಲ್ಲಿ ಕಳೆದ ವರ್ಷ ಮಹಿಳಾ ಗಗನಯಾನ ಯೋಜನೆ ಯಶಸ್ವಿಗೊಳಿಸಿದ ಕ್ರಿಶ್ಚಿಯನ್ ಕೋಚ್ ಹಾಗೂ ಜೆಸ್ಸಿಕಾ ಮೇರ್ ಕೂಡಾ ಇದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications