ಅಂದು ವಾದಿರಾಜ ಗುರುಗಳು ಸೃಷ್ಟಿಸಿದ್ದ ಜಾಗದಲ್ಲಿ ಈಗಲೂ ನೀರಿನ ಸೆಲೆ
ಶತಮಾನದ ಹಿಂದೆ ವಾದಿರಾಜ ಗುರುಗಳು ತಮ್ಮ ಕಮಂಡಲದಿಂದ ನೀರು ಸೃಷ್ಟಿಸಿದ್ದ ಸ್ಥಳಕ್ಕೆ ಹಾಲೀ ಸೋದೆ ವಾದಿರಾಜ ಮಠದ ಪೀಠಾಧಿಪತಿಗಳಾದ ವಿಶ್ವವಲ್ಲಭ ತೀರ್ಥರು ಇತ್ತೀಚಿಗೆ ಭೇಟಿ ನೀಡಿದ್ದರು.
ಉಡುಪಿ, ಜುಲೈ 13: ಭಾವಿಸಮೀರ ಶ್ರೀವಾದಿರಾಜ ಗುರುಗಳು ಶತಮಾನಗಳ ಕೆಳಗೆ ತಮ್ಮ ಮಂತ್ರ ಶಕ್ತಿಯಿಂದ ಸೃಷ್ಟಿಸಿದ್ದ ನೀರಿನ ಸೆಲೆಯ ಪ್ರದೇಶಕ್ಕೆ ಹಾಲೀ ಸೋದೆ ವಾದಿರಾಜ ಮಠದ ಪೀಠಾಧಿಪತಿಗಳಾದ ವಿಶ್ವವಲ್ಲಭ ತೀರ್ಥರು ಇತ್ತೀಚಿಗೆ ಭೇಟಿ ನೀಡಿದ್ದರು.
ಉಡುಪಿ ಹೊರವಲಯದ ಕೆಮುಂಡೇಲು ಎನ್ನುವ ಪುಟ್ಟಗ್ರಾಮಕ್ಕೆ ವಿಶ್ವವಲ್ಲಭ ತೀರ್ಥರು ಭೇಟಿ ನೀಡಿದ ಸಂದರ್ಭದಲ್ಲಿ ಊರಿನ ಪ್ರಮುಖರು, ಜನರು ಹಾಜರಿದ್ದು ಶ್ರೀಗಳನ್ನು ಸ್ವಾಗತಿಸಿ, ಪ್ರದೇಶದ ಮಾಹಿತಿಯನ್ನು ನೀಡಿದರು.

ಕೆಮುಂಡೇಲು ಊರಿನ ಹೆಸರಿನ ಹಿಂದೆ ಒಂದು ಇತಿಹಾಸವಿದೆ. ಭಾವಿಸಮೀರ ಶ್ರೀವಾದಿರಾಜರು ಈ ಪ್ರದೇಶಕ್ಕೆ ಬಂದಾಗ ಅಲ್ಲಿರುವ ಕೃಷಿಕರು, ಈ ಸ್ಥಳದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವವಿದೆ ಅನುಗ್ರಹಿಸಬೇಕು ಎಂದು ಗುರುಗಳನ್ನು ಪ್ರಾರ್ಥಿಸಿದ್ದರು.
ಆಗ ಶ್ರೀವಾದಿರಾಜರು ಒಂದು ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಕಮಂಡಲುವನ್ನು ಇರಿಸಿ ನೀರಿನ ಸೆಲೆಯನ್ನು ಸೃಷ್ಟಿಸಿದರು. ಆ ಪ್ರದೇಶಕ್ಕಿದ್ದ ನೀರಿನ ಅಭಾವವನ್ನು ನೀಗಿಸಿದರು. ಶ್ರೀವಾದಿರಾಜರು ತಮ್ಮ ಕಮಂಡಲುವನ್ನು ಇರಿಸಿ ನೀರನ್ನು ಸೃಷ್ಟಿಸಿದ್ದರಿಂದ ಆ ನೀರಿನ ಕುಂಡ 'ಕಮಂಡಲು ತೀರ್ಥ'ಎಂದೇ ಪ್ರಸಿದ್ಧಿಯಾಯಿತು.
ಕಾಲಕ್ರಮೇಣ ಆ ಊರಿನ ಹೆಸರೇ' ಕೆಮುಂಡೇಲು' ಎಂದಾಯಿತು. ಇವತ್ತಿಗೂ ಆ ಕುಂಡದಲ್ಲಿ ಕಡು ಬೇಸಿಗೆಯ ಸಮಯದಲ್ಲೂ ನೀರು ಬತ್ತುವುದಿಲ್ಲ. ಅಂದು ವಾದಿರಾಜರು ಸೃಷ್ಟಿಸಿದ ನೀರು ಇವತ್ತಿಗೂ ಜೀವಂತವಾಗಿದೆ.
ಇವತ್ತಿಗೂ ಈ ಪರಿಸರಕ್ಕೆ ಸೂತಕದವರು, ರಜಸ್ವಲೆಯರು ಪ್ರವೇಶಿಸುವಂತಿಲ್ಲ. ಪ್ರವೇಶಿಸಿದವರು ಅನರ್ಥಗಳನ್ನು ಅನುಭವಿಸಿದ್ದಾರೆ. ಅಲ್ಲೇ ಸಮೀಪದಲ್ಲಿ 'ಜನ್ನಿ' ಎಂಬ ಮನೆತನದವರಿಗೆ ಲಕ್ಷ್ಮೀ ನಾರಾಯಣ ದೇವರ ಪ್ರತಿಮೆಯನ್ನೂ ಶ್ರೀ ವಾದಿರಾಜರು ಅನುಗ್ರಹಿಸಿದ್ದರು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications