ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2000 ಕಾರ್ಮಿಕರನ್ನು ತವರಿಗೆ ಕಳಿಸಿಕೊಟ್ಟ ಉಡುಪಿ ಜಿಲ್ಲಾಡಳಿತ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 30: ಉಡುಪಿ ನಗರದಲ್ಲಿ ಸಿಕ್ಕಿಬಿದ್ದಿದ್ದ ಉತ್ತರ ಕರ್ನಾಟಕ ಭಾಗದ ಸಾವಿರಾರು ಸಂಖ್ಯೆಯ ಕೂಲಿಕಾರ್ಮಿಕರನ್ನು ಉಡುಪಿ ಜಿಲ್ಲಾಡಳಿತ, ಎರಡನೇ ಹಂತದಲ್ಲಿ ತವರಿಗೆ ಕಳುಹಿಸಿಕೊಟ್ಟಿದೆ.

ಸುಮಾರು 50ಕ್ಕೂ ಅಧಿಕ ಬಸ್ಸುಗಳಲ್ಲಿ 3600 ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿದ್ದು, ಇದರಲ್ಲಿ ಬಾಗಲಕೋಟೆ, ಕೊಪ್ಪಳ, ಕುಷ್ಟಗಿ, ಹಾವೇರಿ, ಗದಗ ಮೊದಲಾದ ಭಾಗಗಳ ಜನರು ಸೇರಿದ್ದಾರೆ. ಇವರು ಏಕಾಏಕಿ ಉಡುಪಿಯಿಂದ ಹೊರಟ ಕಾರಣ ಕಟ್ಟಡ ನಿರ್ಮಾಣ ರಸ್ತೆ ಕಾಮಗಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

ವಲಸೆ ಕಾರ್ಮಿಕರನ್ನು ಕಳುಹಿಸಲು, ಕರೆತರಲು ಮೂರು ರಾಜ್ಯಗಳ ಮಾಸ್ಟರ್ ಪ್ಲಾನ್ವಲಸೆ ಕಾರ್ಮಿಕರನ್ನು ಕಳುಹಿಸಲು, ಕರೆತರಲು ಮೂರು ರಾಜ್ಯಗಳ ಮಾಸ್ಟರ್ ಪ್ಲಾನ್

ಗ್ರೀನ್ ಝೋನ್ ಘೋಷಣೆಯಾದ ತಕ್ಷಣ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಾರ್ಮಿಕರು ಮಾತ್ರ ನಮಗೆ ಕೆಲಸ ಬೇಡ, ಊರಿಗೆ ಕಳುಹಿಸಿಕೊಟ್ಟರೆ ಸಾಕು ಎಂದು ಜಿಲ್ಲಾ ಆಡಳಿತದ ಮುಂದೆ ಗೋಗರೆಯುತ್ತಿದ್ದಾರೆ. ಈ ಕೂಲಿ ಕಾರ್ಮಿಕರನ್ನು ಕಳೆದ ಎರಡು ತಿಂಗಳಿನಿಂದ ಜಿಲ್ಲಾಡಳಿತವೇ ಊಟೋಪಚಾರ ಕೊಟ್ಟು ನೋಡಿಕೊಳ್ಳುತ್ತಿತ್ತು.

Udupi District Administration Sent 2000 Workers To Their Hometown

ಹೊರ ರಾಜ್ಯದಲ್ಲಿರುವ ಕರ್ನಾಟಕದ ಕಾರ್ಮಿಕರಿಗಾಗಿ ಸಹಾಯವಾಣಿಹೊರ ರಾಜ್ಯದಲ್ಲಿರುವ ಕರ್ನಾಟಕದ ಕಾರ್ಮಿಕರಿಗಾಗಿ ಸಹಾಯವಾಣಿ

ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಇಂದು ಇವರೆಲ್ಲರನ್ನು ಬಸ್ಸು ಹತ್ತಿಸಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಲಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಊರಿಗೆ ತೆರಳುವಂತೆ ಸೂಚಿಸಲಾಗಿದೆ.

English summary
Udupi district administration has sent 2000 workers to their hometown at second stage today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X