ಉಡುಪಿಯಲ್ಲಿ ಪೊಲೀಸ್ ಸ್ಟೂಡೆಂಟ್ಸ್ ಗಾಗಿ "ತೆರೆದ ಮನೆ' ಇದು!
ಉಡುಪಿ, ಫೆಬ್ರವರಿ 28: ಪೊಲೀಸರೆಂದರೆ ಸಮಾಜಕ್ಕೆ ಒಂದು ರೀತಿಯ ಗೌರವ. ಇದು ಸಹಜವೂ ಕೂಡ. ಇದರ ಜೊತೆಗೆ ಪೊಲೀಸರೆಂದರೆ ಲಾಠಿ, ಪಿಸ್ತೂಲು ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವವರು ಎಂಬ ಕಾರಣಕ್ಕೆ ಜನ ಪೊಲೀಸರಿಂದ ದೂರವೇ ಇರುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ಯಂಗ್ ಸ್ಟರ್ ಗಳಿಗಂತೂ ಪೊಲೀಸರ ಬಗ್ಗೆ ಎಲ್ಲಿಲ್ಲದ ಕುತೂಹಲ.
ಇಂತಹ ಕುತೂಹಲ ತಣಿಸುವ ಸಲುವಾಗಿಯೇ ಉಡುಪಿ ಪೊಲೀಸರು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಹೆಸರು ತೆರೆದ ಮನೆ.
ಸಾರ್ವಜನಿಕರ ಜೊತೆ ಉತ್ತಮ ಸಂಪರ್ಕ ಬೆಳೆಸುವುದಕ್ಕೆ ಪೊಲೀಸ್ ಇಲಾಖೆ ಬೇರೆ ಬೇರೆ ಕಾರ್ಯಕ್ರಮ ರೂಪಿಸುತ್ತಲೇ ಇರುತ್ತದೆ. ಜನಸ್ನೇಹಿ ಆಗೋದಕ್ಕೆ ವರ್ಷದಲ್ಲಿ ಹಲವಾರು ಅಭಿಯಾನಗಳನ್ನು ಇಲಾಖೆ ನಡೆಸುತ್ತದೆ. ಉಡುಪಿಯಲ್ಲಿ ಪೊಲೀಸ್ ಇಲಾಖೆ "ತೆರೆದ ಮನೆ' ಅನ್ನುವ ವಿಭಿನ್ನ ಯೋಜನೆ ಆರಂಭಿಸಿದೆ.

ಪೊಲೀಸರು ಶಾಲಾ ಮಕ್ಕಳ ಜೊತೆ ಮತ್ತು ಮಕ್ಕಳು ಪೊಲೀಸ್ ಇಲಾಖೆಯ ಜೊತೆ ಬೆರೆಯೋದು ಈ ಯೋಜನೆಯ ಉದ್ದೇಶ. ಒಂದೊಂದು ಶಾಲೆಗೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಹೋಗಿ ಇಲಾಖೆ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಟ್ಟು, ಮಕ್ಕಳ ಮೂಲಕ ಸಮಾಜದ ಜೊತೆ ಇಲಾಖೆ ಬೆರೆಯುವ ಕಾನ್ಸೆಪ್ಟ್ ಇದಾಗಿದೆ.
ಮಣಿಪಾಲದ ಮಾಧವ ಕೃಪ ಶಾಲೆಗೆ ಮಣಿಪಾಲ ಪೊಲೀಸರು ಭೇಟಿ ನೀಡಿ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪೊಲೀಸ್ ಇಲಾಖೆ, ಪೊಲೀಸ್ ಕೆಲಸದ ಬಗ್ಗೆ ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಂಡರು.

ಈ ವೇಳೆ ಪೊಲೀಸ್ ನಾಯಿಗಳ ಪ್ರದರ್ಶನವೂ ನಡೆಯಿತು. ಅಧಿಕಾರಿಗಳು ಶ್ವಾನಗಳಿಗೆ ಕಲಿಸಿದ ಚಾಕಚಕ್ಯತೆ, ವಿಧ್ವಂಸಕ ಕೃತ್ಯಗಳನ್ನು ಶ್ವಾನಗಳು ಬಯಲಿಗೆಳೆಯುವ ಪ್ರಾತ್ಯಕ್ಷಿಕೆ ನಡೆಯಿತು. ನೂರಾರು ಮಕ್ಕಳು ಪೊಲೀಸರ ಜೊತೆ ಬೆರೆತು ಖುಷಿಪಟ್ಟರು.
ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ನಡೆಯದಂತೆ ಶಾಲಾ ಮಕ್ಕಳನ್ನು ಬಳಸುವ ಯೋಚನೆ ಕೂಡಾ ಪೊಲೀಸರ ಬಳಿಯಲ್ಲಿದೆ. ಗಾಂಜಾ ಮತ್ತಿತರ ಅಮಲು ಸೇವನೆಯಿಂದ ಯುವ ಜನಾಂಗ ದಾರಿ ತಪ್ಪುತ್ತಿದ್ದು, ಅಕ್ರಮ ಅಡ್ಡೆಗಳ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳೇ ಬೆಸ್ಟ್ ಎಂಬುದು ಪೊಲೀಸರ ಯೋಚನೆ.

ಈಗ ಮಕ್ಕಳ ಬಳಿ ಶಿಕ್ಷಕರು ಬಂದಿದ್ದು, ಮುಂದೆ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಭೇಟಿ ಕೊಡಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಲಿದೆ. ಪೊಲೀಸರು ಮಾತ್ರ ಅಲ್ಲ, ಮಕ್ಕಳೂ ಕೂಡ ಅಕ್ರಮ ಚಟುವಟಿಕೆ ಮಾಡುವವರ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications