ಕೊಲ್ಲೂರು ಸಲಾಂ ಮಂಗಳಾರತಿ ನಿಲ್ಲಿಸಿ; ಕಲ್ಲಡ್ಕ ಪ್ರಭಾಕರ್ ಭಟ್
ಉಡುಪಿ, ಮಾರ್ಚ್ 29; ರಾಜ್ಯದ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ಟಿಪ್ಪು ನೆನಪಿನ ಸಲಾಂ ಆರತಿಗೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಉಡುಪಿಯ ಬೈಂದೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದೇವಸ್ಥಾನಗಳನ್ನು ಕೊಳ್ಳೆ ಹೊಡೆದ, ಹಿಂದೂಗಳ ನರಮೇಧ ನಡೆಸಿದ ವ್ಯಕ್ತಿಯ ಹೆಸರಿನಲ್ಲಿ ಪೂಜೆ ನಡೆಯೋದು ಅಕ್ಷಮ್ಯವಾಗಿದೆ" ಎಂದರು.
"ಆತನ ಹೆಸರಿನಲ್ಲಿ ಪೂಜೆ ನಡೆದರೆ ಕೇವಲ ಭಕ್ತರಿಗೆ ಮಾತ್ರವಲ್ಲ ಸ್ವತಃ ದೇವಿಗೇ ನೋವಾಗಬಹುದು. ಯಾರದ್ದೋ ಕಾಲದಲ್ಲಿ ಆದ ತಪ್ಪನ್ನು ಮುಂದುವರಿಸೋದು ಸರಿಯಲ್ಲ. ಆಗ ಆಗಿ ಹೋಗಿದೆ, ಇನ್ನು ಆಗೋದು ಬೇಡ. ಇನ್ನೂ ಹೀಗೇಯೇ ಆದರೆ ನಾಳೆ ಅಲ್ಲಾನಾ ಹೆಸರಿನಲ್ಲೂ ಪೂಜೆ ಬರಬಹುದು. ಸಲಾಂ ಅಲ್ಲಾ ಎಲ್ಲವೂ ಅವರಲ್ಲೇ ಇರಲಿ. ನಮ್ಮ ಕಡೆಗೆ ಬರೋದೇ ಬೇಡ" ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.

ದೇವಸ್ಥಾನಗಳಲ್ಲಿ ವ್ಯಾಪಾರ ನಿಷೇಧದ ಬಗ್ಗೆ ಮಾತನಾಡಿದ ಭಟ್, "ಈ ಅಭಿಯಾನ ಹಿಂದೆಯೇ ಆಗ ಬೇಕಿತ್ತು. ಹಿಂದೂ ಜಾಗೃತನಾಗಿದ್ದಾನೆ. 2002ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೆ ಮುಂದಿನ ಅಪಾಯದ ಬಗ್ಗೆ ಮನವರಿಕೆ ಆಗಿ ಧಾರ್ಮಿಕ ದತ್ತಿಯಲ್ಲೇ ಈ ನಿಯಮ ಮಾಡಿದ್ದಾರೆ. ಶುರು ಮಾಡಿದ್ದು ಅವರು ಮುಗಿಸೋದು ನಾವು. ಹಿಂದೂಗಳದ್ದು ಕೇವಲ ಆಕ್ಷನ್ಗೆ ರಿಯಾಕ್ಷನ್ ಅಷ್ಟೇ ಇದು. ಇನ್ನೂ ಮುಂದುವರಿಯಬೇಕೆಂದು" ಎಂದರು.
"ಆದರೆ ಕೊಲ್ಲೂರು ದೇವಳದ ಆಡಳಿತ ಮಂಡಳಿ ಮಾತ್ರ ನಮ್ಮಲ್ಲಿ ಸಲಾಂ ಪೂಜೆ ಅನ್ನುವ ಪೂಜೆಯೇ ಇಲ್ಲ ಅಂತಾ ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಳದ ಪ್ರಧಾನ ಅರ್ಚಕರಲ್ಲಿ ಒಬ್ಬರಾದ ಕೆ. ವಿ. ಶ್ರೀಧರ ಅಡಿಗ ಎಂಬುವವರು, ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ನಡೆಯುವ ರಾತ್ರಿ ಪೂಜೆಗೆ ಪ್ರಧೋಷ ಪೂಜೆ ಅಂತಾ ಕರೆಯುತ್ತಾರೆ" ಎಂದರು.
"ಈ ಪೂಜೆಗೆ ಬಹಳ ಮಹತ್ವವಿದೆ. ಪ್ರದೋಷ ಕಾಲದಲ್ಲಿ ಎಲ್ಲಾ ದೇವಿ ದೇವತೆಗಳ ಸಾನಿಧ್ಯ ಇರುತ್ತದೆ. ಆಗ ದೇವಿಗೆ ವೈಭವೋಪೇತ ವಾಗಿ ರಾಜೋಪಚಾರ ದೀಪಾರಾಧನೆ ನಡೆಸಲಾಗುತ್ತದೆ. ಇದು ಪ್ರದೋಷ ಕಾಲದ ಮಹತ್ವದ ಪೂಜೆ ಹೊರತು ಸಲಾಂ ಮಂಗಳಾರತಿ ಅಲ್ಲ" ಎಂದು ಸ್ಪಷ್ಟಪಡಿಸಿದರು.
"ಹಿಂದಿನ ಇತಿಹಾಸದ ಪ್ರಕಾರ ಕೊಲ್ಲೂರು ದೇವಳದಲ್ಲಿ ಪ್ರದೋಷ ಕಾಲದ ಪೂಜೆ ನಡೆಯುತ್ತಿದ್ದ ವೇಳೆ ತಾಯಿ ಮೂಕಾಂಬಿಕೆಗೆ ಟಿಪ್ಪು ಬಂದು ಸಲಾಂ ಮಾಡಿದ್ದ. ಹೀಗಾಗಿ ಈ ಪೂಜೆಯನ್ನು ಸಲಾಂ ಮಂಗಳಾರತಿ ಅಂತಾ ಆಡು ಭಾಷೆಯಲ್ಲಿ ವಾಡಿಕೆಗೆ ಕರೆಯಲಾಗುತ್ತದೆ. ಆದರೆ ಇದಕ್ಕೆ ಯಾವುದೇ ದಾಖಲೆಗಳು ಇಲ್ಲ. ಆದರೆ ರಾತ್ರಿ ನಡೆಯುವ ಪ್ರದೋಷ ಪೂಜೆಗೆ ಪ್ರದೋಷ ಮಂಗಳಾರತಿ ಅಂತಾ ದಾಖಲೆಯಿದೆ. ನಾಡಿನ ಯೋಗಕ್ಷೇಮಕ್ಕೆ ಈ ಪೂಜೆಯ ವೇಳೆ ಪ್ರಾರ್ಥನೆ ನಡೆಯುತ್ತದೆ" ಎಂದು ಕೆ.ವಿ ಶ್ರೀಧರ ಅಡಿಗ ಹೇಳಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications