ಕಾಂಗ್ರೆಸ್ ಮನಸ್ಥಿತಿ ತೆರೆದಿಟ್ಟ ಮಣಿಶಂಕರ್ ಅಯ್ಯರ್: ಸಂಸದೆ ಕರಂದ್ಲಾಜೆ
ಉಡುಪಿ, ಡಿಸೆಂಬರ್ 8: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಸಂಭೋದಿಸಿದ ಕಾಂಗ್ರೆಸ್ ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಉಡುಪಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ, ಈ ಮೂಲಕ ಕಾಂಗ್ರೆಸ್ ನ ಮನಸ್ಥಿತಿಯನ್ನು ಮಣಿಶಂಕರ್ ಅಯ್ಯರ್ ಸಾಬೀತು ಪಡಿಸಿದ್ದಾರೆ ಎಂದು ಕಿಡಿ ಕಾರಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೋದಿ ಅವರು ಜಾತಿಯಿಂದ ಹೀನರು ಅನ್ನೋ ಕಾರಣಕ್ಕೆ ನೀಚ ಅಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಟಿಸಿದ ಅವರು, ಮಣಿಶಂಕರ್ ಅಯ್ಯರ್ ಅವರ ಅಮಾನತು ಕಾಂಗ್ರೆಸ್ ನವರ ಕಣ್ಣೊರೆಸುವ ತಂತ್ರ ಎಂದು ಟೀಕೆ ಮಾಡಿದರು.

ಬಡ ಹಿಂದುಳಿದ ಜಾತಿಯವರು ಪ್ರಧಾನಿ ಆದರೆ ನೀಚ ಅಂತೀರಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಇದು ಕಾಂಗ್ರೆಸ್ ಗೆ ಬಹಳ ದುಬಾರಿ ಆಗಲಿದೆ. ಗುಜರಾತ್ ಜನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ವಂಶಾಡಳಿತ ರಾಜಕಾರಣಕ್ಕೆ, ಕಾಂಗ್ರೆಸ್ ನವರಿಗೆ ದೇಶವನ್ನು ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದ ಕಾರಣ ಕಾಂಗ್ರೆಸ್ ನ ಚಡಪಡಿಕೆ ಗೊತ್ತಾಗುತ್ತಿದೆ ಎಂದು ಅವರು ಕುಟುಕಿದರು.












Click it and Unblock the Notifications