ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕರ ವಿರುದ್ಧ ಆಕ್ರೋಶ
ಉಡುಪಿ, ಏಪ್ರಿಲ್ 27: ಶಾಸಕರೇ ಲಾಕ್ ಡೌನ್ ಸಂದರ್ಭದಲ್ಲಿ ಮೆಹಂದಿ ಅಭಿಯಾನ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಇದರ ವತಿಯಿಂದ "ಮನೆಮನೆಗಳಲ್ಲಿ ಮೆಹಂದಿ ಅಭಿಯಾನ' ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಕೊರೊನಾ ವೈರಸ್ ದಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದ್ದು, ಜನಸಾಮಾನ್ಯರೆಲ್ಲಾ ಮನೆಯೊಳಗಡೆ ಬಂಧಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಡವರ್ಗದ ಜನರಿಗೆ ನೆರವಾಗುವುದು ಬಿಟ್ಟು, ಮೆಹಂದಿ ಬಿಡಿಸಿ ಜನರಿಗೆ ಸಂದೇಶ ಕೊಡುವುದು ಎಷ್ಟು ಸರಿ ಎಂಬಂತೆ ಟ್ವೀಟ್ ಗಳು ಹರಿದಾಡುತ್ತಿವೆ.












Click it and Unblock the Notifications