ಕಳೆದೊಂದು ವಾರದಿಂದ ಉಡುಪಿಯಲ್ಲಿ ಅಣಬೆಗಳಿಗೆ ಭಾರೀ ಡಿಮ್ಯಾಂಡ್
ಉಡುಪಿ, ಆಗಸ್ಟ್.14: ಅಣಬೆಗಳಿಗೆ ಮಳೆಗಾಲದಲ್ಲಿ ಭಾರೀ ಡಿಮ್ಯಾಂಡ್. ಸಹಜವಾಗಿ ಪಟ್ಟಣ ಪ್ರದೇಶಗಳಲ್ಲಿ ಕೃತಕವಾಗಿ ಅಣಬೆಗಳನ್ನು ಬೆಳೆಸುವುದರಿಂದ ಗ್ರಾಮೀಣ ಭಾಗದಲ್ಲಿ ದೊರೆಯುವ ಅಣಬೆಗಳಿಗೆ ವಿಶೇಷ ಬೇಡಿಕೆಯಿರುತ್ತದೆ.
ಉತ್ತರ ಕನ್ನಡದ ಅಣಬೆಗಳಿಗೂ ವಿಶೇಷವಾದ ಬೇಡಿಕೆಯಿದ್ದು, ಗ್ರಾಮೀಣ ಭಾಗದ ಕೆಲವರಿಗೆ ಅಣಬೆ ಹುಡುಕುವುದು ಆದಾಯದ ಮೂಲವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಅಣಬೆಗಳ ಮಾರಾಟ ಕಂಡು ಬರುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಣಬೆ ಮಾರಾಟ ಕಡಿಮೆಯಿದೆ.
ಮಳೆಗಾಲದಲ್ಲಿ ಮಾತ್ರ ದೊರೆಯುವ ಈ ಅಣಬೆಗಳು ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯಂತರದವರೆಗೆ ಕಾಣ ಸಿಗುತ್ತವೆ. ವಿಷ ಜಂತುಗಳು ಸ್ಪರ್ಶಿಸುತ್ತದೆ ಎನ್ನುವ ಕಾರಣದಿಂದ ನಾಗರಪಂಚಮಿ ಬಳಿಕ ಅಣಬೆಗಳನ್ನು ತಿನ್ನುವುದಿಲ್ಲ.

ಹಳ್ಳಿಗಳಲ್ಲಿ ಕೃಷಿಕರು ಮತ್ತು ಪ್ರಕೃತಿಯ ನಡುವೆ ವಿಶೇಷವಾದ ಬಾಂಧವ್ಯವಿದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಮುಗಿದಾಕ್ಷಣ ಆಷಾಢ ಮಾಸದಲ್ಲಿ ಸುರಿವ ಮಳೆ, ಚಳಿಗೆ ರೈತರು ಅಣಬೆಯನ್ನು ಶೋಧಿಸುತ್ತಾರೆ. ಕೃಷಿ ಚಟುವಟಿಕೆಯಿಲ್ಲದ ಕಾರಣ ಈ ಸಮಯದಲ್ಲಿ ರೈತರು ಕಾಡಿನಲ್ಲಿ ದೊರೆಯುವ ಅಣಬೆಗಳನ್ನು ಹುಡುಕಿ ತರುತ್ತಾರೆ.
ಹಿಂದೆಲ್ಲಾ ಕಾಡಿನ ಪ್ರಮಾಣ ಅಧಿಕವಾಗಿರುವ ಕಾರಣ ಅಣಬೆ ವ್ಯಾಪಕವಾಗಿ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳ ಅಳವಡಿಕೆ, ಕಾಡು ನಾಶವಾದ ಪರಿಣಾಮ ಅಣಬೆಗಳು ದೊರೆಯುವುದು ಅಪರೂಪವಾಗಿದೆ.
ಅಂದಹಾಗೆ ಅಣಬೆಗಳು ಬೈಂದೂರು, ಗಂಗನಾಡು, ಮದ್ದೋಡಿ, ತೂದಳ್ಳಿ, ಶಿರೂರು ಸಮೀಪದ ಹಾಡುವಳ್ಳಿ, ಕೋಣಾರ, ಮಾರುಕೇರಿ ಮುಂತಾದ ಕಡೆ ವ್ಯಾಪಕವಾಗಿ ದೊರೆಯುತ್ತದೆ. ಈ ಅಣಬೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದ್ದು, ನೂರು ಅಣಬೆಗೆ ಇನ್ನೂರ ಐವತ್ತರಿಂದ ಎಂಟುನೂರು ರೂಪಾಯಿ ದರವಿದೆ.

ಗ್ರಾಮೀಣ ಭಾಗದಲ್ಲಿ ಅಣಬೆಗಳನ್ನು ಕೊಂಡು ಪಟ್ಟಣ ಪ್ರದೇಶದಲ್ಲಿ ಮಾರಾಟ ಮಾಡಲು ಎಜೆಂಟರುಗಳೂ ಸಹ ಇದ್ದಾರೆ. ಸರಾಸರಿ 15 ದಿನಗಳಿಂದ ಒಂದು ತಿಂಗಳು ಮಾತ್ರ ಅಣಬೆಗಳು ದೊರೆಯುತ್ತದೆ. ಅಣಬೆಗಳಿಂದ ತಯಾರಿಸಿದ ಖಾದ್ಯಗಳು ಶಿರೂರು, ಭಟ್ಕಳ ಮುಂತಾದ ಕಡೆಗಳಿಂದ ಮುಂಬೈ ಹಾಗೂ ವಿದೇಶಕ್ಕೂ ರವಾನೆಯಾಗುತ್ತದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications