ಉಡುಪಿಯಲ್ಲಿ ಬಾವಿ ಸ್ವಚ್ಛಗೊಳಿಸಲು ಇಳಿದ ಸೋದರರು ದಾರುಣ ಸಾವು
ಹೊನ್ನಾಪ್ಪ ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಜಾರಿ ಬಾವಿಯೊಳಕ್ಕೆ ಬಿದಿದ್ದಾರೆ. ಅವರ ರಕ್ಷಣೆಗೆ ಲೋಕೇಶ್ ಧಾವಿಸಿದಾಗ ಅವರೂ ಕೂಡ ಜಾರಿ ಬಾವಿಗೆ ಬಿದ್ದು ಅಲ್ಲೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಉಡುಪಿ, ಏಪ್ರಿಲ್ 28: ಉಡುಪಿಯ ಸುಬ್ರಮಣ್ಯನಗರದಲ್ಲಿ ಬಾವಿಗೆ ಬಿದ್ದು ಇಬ್ಬರು ವ್ಯಕ್ತಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಲೋಕೇಶ್ (24) ಮತ್ತು ಅವರ ಸೋದರ ಹೊನ್ನಪ್ಪ ಗೌಡ (45) ಎಂದು ಗುರುತಿಸಲಾಗಿದೆ.
ಹೊನ್ನಾಪ್ಪ ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಜಾರಿ ಬಾವಿಯೊಳಕ್ಕೆ ಬಿದಿದ್ದಾರೆ. ಅವರ ರಕ್ಷಣೆಗೆ ಲೋಕೇಶ್ ಧಾವಿಸಿದಾಗ ಅವರೂ ಕೂಡ ಜಾರಿ ಬಾವಿಗೆ ಬಿದ್ದು ಅಲ್ಲೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.[ವಿವಾಹಿತ ಮಹಿಳೆಯ ಸಾವು, ಶ್ರೀ ರಾಮ ಸೇನೆ ನಾಯಕ ಅಂದರ್]

ಇವರಿಬ್ಬರು ಮೂಲತಃ ಬೆಳ್ತಂಗಡಿಯವರಾಗಿದ್ದು, ಐದು ವರ್ಷಗಳ ಹಿಂದೆ ಉಡುಪಿಗೆ ಸ್ಥಳಾಂತರಗೊಂಡಿದ್ದರು ಎನ್ನಲಾಗಿದೆ.[ಉಡುಪಿ ತಾಯಿ-ಮಗ ಸಾವು: ಕ್ವಾರಿ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಕೇಸು]
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಹೆಣವನ್ನು ಮೇಲೆತ್ತಿದ್ದಾರೆ. ದುರಂತ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಬಾವಿಗೆ ಇಳಿಯುವ ಮೊದಲು ಆಳ ನೋಡಿ ಇಳಿಯುವುದು ಉತ್ತಮ]












Click it and Unblock the Notifications