ಉಡುಪಿ: ಸಾಮಾನ್ಯ ಸಭೆಯಲ್ಲಿ ಗಲಭೆ ಎಬ್ಬಿಸಿದಾತನಿಗೆ ಥಳಿತ
ಉಡುಪಿ, ಜೂನ್ 29 : ಇಲ್ಲಿನ ನಗರಸಭೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಏಕಾಏಕಿ ಒಳನುಗ್ಗಿದ ವ್ಯಕ್ತಿಯೊಬ್ಬರ ಮೇಲೆ ಸದಸ್ಯರು ಹಲ್ಲೆ ನಡೆಸಿ ಹೊರ ದೂಡಿದ ಪ್ರಸಂಗ ಗುರುವಾರ ನಡೆಯಿತು.
'ವಾರ್ಡ್ ನಲ್ಲಿ ಕಾರ್ಯಕ್ರಮ ನಡೆಯುವ ವೇಳೆ ಬ್ಯಾನರ್ನಲ್ಲಿ ನನ್ನ ಭಾವಚಿತ್ರ ಹಾಕುತ್ತಿಲ್ಲ. ಅಲ್ಲದೆ ಶಾಸಕರಿಗೆ ಮಾಹಿತಿ ನೀಡದೆ ರಸ್ತೆಯೊಂದನ್ನು ಉದ್ಘಾಟನೆ ಮಾಡಲಾಗಿದೆ ಎಂದು ಪಕ್ಷದವರೇ ಕೆಲವರು ವಿನಾಕಾರಣ ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯೆ ಗೀತಾ ಅವರ ಪರವಾಗಿ ಹೇಳಿಕೆ ನೀಡಲು ರೋನಿ ಎಂಬುವರು ಒಳ ನುಗ್ಗಿದ್ದು, ಕೆಲ ಸದಸ್ಯರು ಅವರನ್ನು ತಡೆದು ಹಲ್ಲೆ ಮಾಡಿ ಹೊರ ದೂಡಿದರು.
ಸಧ್ಯ ರೋನಿ ಉಡುಪಿ ಅಜ್ಜಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ನಗರಸಭೆಯ ಇತಿಹಾಸದಲ್ಲಿಯೇ ಇಂತಹ ಘಟನೆ ನಡೆದಿರಲಿಲ್ಲ. ಮುಂದೆ ಇಲ್ಲಿ ಕೊಲೆಯಾದರೂ ಆಶ್ಚರ್ಯ ಇಲ್ಲ. ಇದಕ್ಕೆ ಆಡಳಿತ ಪಕ್ಷವೇ ನೇರ ಹೊಣೆ' ಎಂದು ವಿರೋಧ ಪಕ್ಷದ ನಾಯಕ ಡಾ. ಎಂ.ಆರ್. ಪೈ ಆರೋಪಿಸಿದರು.
Comments
English summary
Chaos erupted at City Municipal Council (AMC) general meeting and a person, who visited the meeting hall with the intention of testifying on behalf a councillor, was manhandled by some councilors on Thursday, June 29.
Story first published: Thursday, June 29, 2017, 16:21 [IST]