ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂಗಳು ಬಂದೂಕು, ಲಾಠಿ ಇಟ್ಟುಕೊಳ್ಳಿ: ಸ್ವಾಮೀಜಿ ಹೇಳಿಕೆ ವಿವಾದ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 26 : ಹಿಂದೂಗಳಿಗೆ ಒಂದು ಮದುವೆ, ಎರಡು ಮಕ್ಕಳ ನಿಯಮವಿದ್ದಂತೆ ಮುಸಲ್ಮಾನರಿಗೂ ಇದೇ ನಿಯಮ ಅನ್ವಯವಾಗಲಿ ಎಂದು ವಾರಣಾಸಿಯ ಕಾಶೀಮಠದ ನರೇಂದ್ರನಂದ್ ಸರಸ್ವತಿ ಮಹಾರಾಜ್ ಒತ್ತಾಯಿಸಿದ್ದಾರೆ.

'ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು''ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು'

ಉಡುಪಿಯಲ್ಲಿ ಧರ್ಮ ಸಂಸದ್ ನಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೂ ಸಮಾನ ಕಾನೂನು ಸಂಹಿತೆ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

Hindus should keep gun and lathi as mobile phone: Seer

ಜನಸಂಖ್ಯೆ ನಿಯಂತ್ರಣಕ್ಕೆ ಚೀನಾದಲ್ಲಿರುವಂತೆಯೇ ಇಲ್ಲಿಯೂ ಕಠಿಣ ಕಾನೂನು ಜಾರಿಯಾಗಬೇಕು ಎಂದು ಹೇಳಿದ ಅವರು, ಹಿಂದೂಗಳು ಧರ್ಮ ಹಾಗೂ ಸ್ವಯಂ ರಕ್ಷಣೆಗೆ ಪ್ರತಿಯೊಬ್ಬರೂ ಲೈಸೆನ್ಸ್ ಹೊಂದಿದ ಬಂದೂಕು ಹೊಂದಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಮುಸ್ಲಿಮರ ಜನಸಂಖ್ಯೆ ಏರುತ್ತಿರುವುದು ಕಳವಳಕಾರಿ : ಹರಿಶಂಕರ್ ದಾಸ್ಮುಸ್ಲಿಮರ ಜನಸಂಖ್ಯೆ ಏರುತ್ತಿರುವುದು ಕಳವಳಕಾರಿ : ಹರಿಶಂಕರ್ ದಾಸ್

ಒಂದು ಲಕ್ಷದ ಮೊಬೈಲ್ ಹೊಂದುವ ಬದಲು ಬಂದೂಕು, ಲಾಠಿಯನ್ನು ಹೊಂದಬೇಕಾಗಿರುವ ಅಗತ್ಯ ಇದೆ ಎಂದು ಹೇಳಿದರು. ಸಮಾಜಘಾತುಕರು, ಆತಂಕವಾದಿಗಳು, ದೇಶವಿರೋಧಿಗಳೆಂಬ ನಾಯಿ- ಬೆಕ್ಕುಗಳನ್ನು ಕೊನೆಗಾಣಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಚೀನಾ ಸಹಾಯದಿಂದ ಪಾಕಿಸ್ತಾನ ಗಡಿಭಾಗದಲ್ಲಿ ಬಂಕರ್ ನಿರ್ಮಾಣ ಮಾಡಿದೆ. ಭಾರತವೂ ಗಡಿಭಾಗದಲ್ಲಿ ಹೆಲಿಪ್ಯಾಡ್, ಬಂಕರ್ ಗಳನ್ನು ನಿರ್ಮಿಸಿ ತಕ್ಕ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

English summary
Hindus should keep gun and lathi as mobile phone, suggested by Varanasi Kashi mutt Narendranand Saraswathi Maharaj in Udupi Dharma sansad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X