ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘಟ ಬಂಧನ್ ದೇಶದ ಭವಿಷ್ಯಕ್ಕೆ ಮಾರಕ: ಬಿಜೆ ಪುಟ್ಟಸ್ವಾಮಿ

|
Google Oneindia Kannada News

ಉಡುಪಿ, ಜನವರಿ 28: ದೇಶದಲ್ಲಿ ಎಲ್ಲಾ ಪಕ್ಷಗಳು ಘಟ ಬಂಧನ್ ಮಾಡಿಕೊಂಡಿವೆ. ಆದರೆ ಇದು ನೀತಿ ನಿಯಮ ಇಲ್ಲದ ಅನೈತಿಕ ಬಂಧನ್. ದೇಶದ ಭವಿಷ್ಯಕ್ಕೆ ಇದು ಮಾರಕವಾಗಲಿದ್ದು, ಆರ್ಥಿಕ ಭದ್ರತೆ, ರಕ್ಷಣೆಗೆ ಹೊಡೆತ ಬೀಳಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯಾಧ್ಯಕ್ಷ ಬಿಜೆ ಪುಟ್ಟಸ್ವಾಮಿ ಹೇಳಿದರು.

ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ರಾಜ್ಯದ ಸಾಂದರ್ಭಿಕ ಸಿಎಂ ಆಗಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ದೇವೇಗೌಡರಿಗೆ ಶರಣಾಗಿದೆ. 2 ರಿಂದ 10 ಸೀಟು ವಿಸ್ತರಣೆ ಮಾಡೋದ್ರಲ್ಲಿ ದೇವೇಗೌಡ ಯಶಸ್ವಿಯಾಗಿದ್ದು, ಸಿಎಂ ರೈತರ ತುಟಿಗೆ ತುಪ್ಪಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮೈತ್ರಿಯಿಂದ ದೇಶ ಕಾಪಾಡಲು ಸಾಧ್ಯವಿಲ್ಲ ಎಂದರು.

 ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್' ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'

ಸಿಎಂ ರಾಜೀನಾಮೆಗೆ ಸದಾ ಸಿದ್ದರಾಗಿರ್ತಾರೆ. ಅಷ್ಟೇ ಅಲ್ಲ, ಎಲ್ಲಾ ಆಶ್ವಾಸನೆಗಳಿಂದ ನುಣಿಚಿಕೊಳ್ಳಲು ರಾಜೀನಾಮೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

Gathbandhan will be fatal to the countrys future:BJ Puttaswamy

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪ್ರಿಯಾಂಕಾ ಪ್ರವೇಶ ಬಿಜೆಪಿಗೆ ಎಫೆಕ್ಟಾಗಲ್ಲ. ಪ್ರಿಯಾಂಕಾ ಪತಿ ವಾದ್ರಾನ ಮೇಲೆಯೇ ಸಾಕಷ್ಟು ಕೇಸುಗಳಿವೆ ಎಂದರು.

English summary
Udupi district President of BJP Backward Class Morcha BJ Puttaswamy Said Gathbandhan will be fatal to the country's future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X