Get Updates
Get notified of breaking news, exclusive insights, and must-see stories!

ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ, ಪೂಜೆಗೆ ನಿರಾಕರಣೆ, ಪ್ರಕರಣ ದಾಖಲು

ಉಡುಪಿ, ನ. 29: ಕುಂದಾಪುರದ ಕಂಬದಕೋಣೆ ಗ್ರಾಮದ ದೇವಸ್ಥಾನವೊಂದರ ಅರ್ಚಕರೊಬ್ಬರ ಮೇಲೆ ದಲಿತ ವ್ಯಕ್ತಿ ಮತ್ತು ಆತನ ಮಗನಿಗೆ ದೇವಸ್ಥಾನಕ್ಕೆ ಪ್ರವೇಶ ಮತ್ತು ಪೂಜೆಯನ್ನು ನಿರಾಕರಿಸಿದ ಆರೋಪ ಕೇಳಿಬಂದಿದೆ. ಅರ್ಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಂಬದಕೋಣೆಯ ಹಲಗೇರಿಯ ದಲಿತ ವ್ಯಕ್ತಿ ಶಿವರಾಮ (51) ಅವರು ತಮ್ಮ ದೂರಿನಲ್ಲಿ ತನಗೆ ಮತ್ತು ತನ್ನ ಮಗನಿಗೆ ದೇವಸ್ಥಾನ ಪ್ರವೇಶಿಸಲು ಮತ್ತು ಕಂಬದಕೋಣೆಯ ಕೊಕ್ಕೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೋಮವಾರ (ನವೆಂಬರ್ 28) ಬೆಳಗ್ಗೆ 9.30ರ ಸುಮಾರಿಗೆ ಶಿವರಾಮ ಅವರು ತಮ್ಮ ಪುತ್ರನೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ಅವರು ಪೂಜೆ ಮಾಡಿಸಲು ಬಾಳೆಹಣ್ಣು ಮತ್ತು ತೆಂಗಿನಕಾಯಿ, ಹೂವುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದರು.

Dalit man, son denied entry into Kambadakone temple

ತಂದೆ ಮಗ ಇಬ್ಬರೂ ಕಂಬದಕೋಣೆಯ ಕೊಕ್ಕೇಶ್ವರ ದೇವಸ್ಥಾನವನ್ನು ತಲುಪಿದಾಗ, ಗರ್ಭಗುಡಿ ಬಳಿ ಅರ್ಚಕ ಶೇಷಗಿರಿ ಕಾರಂತ ಇರುವುದನ್ನು ಕಂಡು, ಪೂಜೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಅರ್ಚಕರು ಪೂಜೆ ಮಾಡಿಕೊಡಲು ಒಪ್ಪಲಿಲ್ಲ ಎಂದು ದೂರುದಾರ ಶಿವರಾಮ ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುವ ಮತ್ತು ಪೂಜೆ ಸಲ್ಲಿಸಲು ನಿರಾಕರಿಸುವ ಸಂದರ್ಭದಲ್ಲಿ ಅರ್ಚಕನು ತನ್ನ ಮತ್ತು ಮಗನನ್ನು ಜಾತಿ ಹೆಸರಿನಿಂದ ನಿಂದಿಸಿದ್ದಾರೆ ಎಂದು ಶಿವರಾಮ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಬೈಂದೂರು ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3 (1)(ಆರ್), (ಎಸ್), (ವೈ), (ಝಾ), (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+