ಸಂವಿಧಾನದ ಮೇಲೆ ಬುಲ್ಡೋಜರ್ ಚಲಾಯಿಸಲಾಗುತ್ತಿದೆ
ಉಡುಪಿ, ಮೇ 15; ಹಿಜಾಬ್ ವಿವಾದ ಆರಂಭವಾದ ಉಡುಪಿಯಲ್ಲಿ ಪ್ರಗತಿಪರ ಚಿಂತಕರು ಸೌಹಾರ್ದತೆಯ ಕೂಗು ಮೊಳಗಿಸಿದ್ದಾರೆ. ರಾಜ್ಯದ ಪ್ರಗತಿಪರ ಚಿಂತಕರು, ಎಡಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ಉಡುಪಿಯಲ್ಲಿ ರಾಜ್ಯಮಟ್ಟದ ಸಹಬಾಳ್ವೆ ಸೌಹಾರ್ದ ಸಮಾವೇಶ ನಡೆಯಿತು.
ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಫ್ರೌಢ ಶಾಲೆಯಲ್ಲಿ ಈ ಸಮಾವೇಶ ನಡೆದಿದ್ದು, ಸರ್ವಧರ್ಮದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾವೇಶಕ್ಕೂ ಮುನ್ನ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಟ್ಯಾಬ್ಲೋ ಮೂಲಕ ಹಿಜಾಬ್ ಹೋರಾಟದ ಊರಲ್ಲಿ ಸೌಹಾರ್ದತೆಯ ಸಂದೇಶ ರವಾನಿಸಿದರು.
'ಸಹಬಾಳ್ವೆ ಸಮಾವೇಶ'ದಲ್ಲಿ ಪ್ರಮುಖ ಭಾಷಣ ಮಾಡಿದ ಮಾನವ ಹಕ್ಕು ಹೋರಾಟಗಾರ ಯೋಗೀಂದ್ರ ಯಾದವ್, "ಉಡುಪಿಯಿಂದಲೇ ದ್ವೇಷದ ಸಂದೇಶ ಹೊರಟಿತ್ತು.ಕರಾವಳಿ ಏನು ಬಿತ್ತಿದರೂ ಉತ್ತಮ ಫಸಲು ನೀಡುತ್ತದೆ. ಇಲ್ಲಿ ಏನು ಬಿತ್ತಿದರೂ ಬಂಗಾರದ ಬೆಳೆ ಸಿಗುತ್ತದೆ. ಹಾಗಾಗಿ ಕೆಲವರು ದ್ವೇಷದ ಬೀಜ ಬಿತ್ತಿದ್ದಾರೆ" ಎಂದು ದೂರಿದರು.

"ಕರ್ನಾಟಕದಲ್ಲಿ ದ್ವೇಷದ ಬೀಜದಿಂದ ಫಸಲು ಹುಟ್ಟುವುದಿಲ್ಲ. ಅವರು ಮಂದಿರ ಇಲ್ಲೇ ಮಾಡುತ್ತೇವೆ ಅಂತಾರೆ. ನಾವು ಸೌಹಾರ್ದ ಇಲ್ಲಿಂದಲೇ ಆರಂಭ ಅನ್ನೋಣ. ಅವರು ಒಡೆಯುತ್ತಾರೆ, ನಾವು ಜೋಡಿಸೋಣ" ಎಂದು ಕರೆ ನೀಡಿದರು.
"ಒಡೆಯುವ ಜನರು ಈ ದೇಶದಲ್ಲಿ ಎರಡನೇ ದರ್ಜೆಯ ಜನರನ್ನು ತಯಾರಿಸಲು ಬಯಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎನ್ನುತ್ತಾರೆ. ಆದರೆ ಕನ್ನಡ ಹಿಂದಿಗಿಂತಲೂ ಪುರಾತನ ಭಾಷೆ. ಹಿಂದಿ ಈ ದೇಶದ ರಾಷ್ಟ್ರ ಭಾಷೆ ಆಗಲು ಸಾಧ್ಯವಿಲ್ಲ. ಇತರ ಭಾಷೆಗಳು ಈ ದೇಶದಲ್ಲಿ ಬಾಡಿಗೆದಾರರಲ್ಲ. ಈ ದೇಶದಲ್ಲಿ ಯಾರೂ ಎರಡನೇ ದರ್ಜೆಯ ನಾಗರಿಕರಲ್ಲ. ಎಲ್ಲರೂ ಮನೆಯ ಮಾಲೀಕರೆ, ಬಾಡಿಗೆದಾರರಲ್ಲ" ಎಂದರು.
ತಾವೇ ದೇವರು ಎಂದು ತಿಳಿದಿದ್ದಾರೆ; "ಸೆಕ್ಯುಲರಿಸಂ ಅಂದರೆ ಏನು ಅಂತ ಕೇಳುತ್ತಾರೆ. ಸೆಕ್ಯುಲರಿಸಂ ಈ ದೇಶದ ಸ್ವಧರ್ಮ. ಅಧಿಕಾರದ ಕುರ್ಚಿಯಲ್ಲಿ ಕುಳಿತವರು ತಾವೇ ದೇವರು ಅಂತ ಭಾವಿಸಿದ್ದಾರೆ. ಆದರೆ ದೇಶ ಅವರು ಅಧಿಕಾರ ಹಿಡಿಯುವ ಹಿಂದೆಯೂ ನಡೆಯುತ್ತಿತ್ತು. ಮುಂದೆಯೂ ನಡೆಯುತ್ತದೆ. ದೇಶಪ್ರೇಮ ದೇಶದ್ರೋಹದ ಬಗ್ಗೆ ದೇಶದಲ್ಲಿ ಬಹಳ ಚರ್ಚೆಯಾಗುತ್ತಿದೆ. ಈ ದೇಶದ ಜನರನ್ನು ಜೋಡಿಸುವುದೇ ದೇಶಪ್ರೇಮಿ. ಈ ದೇಶದಲ್ಲಿ ಕಲಹ, ದ್ವೇಷ, ಜಗಳ ಮಾಡಿಸುವಾತನೇ ದೇಶದ್ರೋಹಿ" ಎಂದು ಆರೋಪಿಸಿದರು.

"ಈ ದೇಶದಲ್ಲಿ ಬುಲ್ಡೋಜರ್ ಕೇವಲ ಕಟ್ಟಡಗಳ ಮೇಲೆ ಹರಿಯುತ್ತಿಲ್ಲ. ಹಿಂದೂಸ್ಥಾನದ ಸಂವಿಧಾನದ ಮೇಲೂ ಬುಲ್ಡೋಜರ್ ಚಲಾಯಿಸಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯರು ದೇಶ ರಕ್ಷಣೆಯ ವಿಷಯ ಬಂದಾಗ ಒಂದಾಗುತ್ತೇವೆ. ನಮಗೆ ಯಶಸ್ಸು ಸಿಗುತ್ತಾ? ಅನ್ನೋ ಸಂಶಯ ಹಲವರಿಗಿದೆ. ಆದರೆ ಗೆಲುತ್ತೇವಾ? ಅನ್ನೋದು ಮುಖ್ಯವಲ್ಲ ಯಾವಾಗ ಗೆಲ್ಲುತ್ತೇವೆ ಅನ್ನೋದು ಮುಖ್ಯ" ಎಂದು ಯೋಗೇಂದ್ರ ಯಾದವ್ ಹೇಳಿದರು.
ಇನ್ನು ಸಮಾವೇಶದಲ್ಲಿ ಬಸವ ಧರ್ಮಪೀಠ ಬಸವ ಪ್ರಕಾಶ ಸ್ವಾಮೀಜಿ ಮಾತನಾಡಿ, "ದೇವನೊಬ್ಬ ನಾಮ ಹಲವು ಎಂದು ಹೇಳಿರುವ ದೇಶ ಭಾರತ. ಸಬ್ ಕಾ ಮಾಲಿಕ್ ಏಕ್ ಹೇ ಎಂದಿರುವ ದೇಶ ಭಾರತಹಿಂದು ಮುಸ್ಲಿಂ ಅಲ್ಲಾ ಗಹರ್ ದೋನೋ ಭಗವಾನ್ ಏಕ್ ಹರ್ ಅನ್ನುವ ದೇಶದೊಳಗೆ ಕೋಮುಗಲಭೆ ನಡೆಯುತ್ತಿದೆ. ಧರ್ಮ ಹಾಗೂ ದೇವರ ಹೆಸರಿನ ಮೇಲೆ ಕೋಮುಗಲಭೆ ನಡೆಯುತ್ತಿದೆ. ಉಸಿರು ಗಟ್ಟಿಸುವ ವಾತಾವರಣ ಇದೆ" ಎಂದರು.
"ನಮಗೆ ಹಿಂದುತ್ವ ಬೇಕಾಗಿಲ್ಲ ಮಾನವ ಬಂಧುತ್ವ ಬೇಕಾಗಿದೆ. ಧರ್ಮವನ್ನು ಮುಸಲ್ಮಾನ ಮಸೀದಿಯೊಳಗೆ, ಹಿಂದು ದೇವಾಲಯದೊಳಗೆ ಹಾಗೂ ಲಿಂಗಾಯತ ಮಠದ ಒಳಗೆ ಇಡೋಣ. ನಾವೆಲ್ಲ ಭಾರತಾಂಬೆಯ ಮಕ್ಕಳು ಅನ್ನುವ ಸಂದೇಶ ಸಾರೋಣ. ನನ್ನ ಮಠಕ್ಕೂ ಎರಡು ಪತ್ರ ಬಂದಿದೆ. ಸ್ವಾಮೀ ನೀವು ಬೆಳಗಾವಿ ಜಿಲ್ಲೆಯೊಳಗಡೆ ಸಂವಿಧಾನ ಹಿಡಿದು ಬುದ್ದ, ಬಸವ, ಅಂಬೇಡ್ಕರ್ ವಿಚಾರದಲ್ಲಿ ಸಮಾನತೆ ಎಂದು ಹಾರಾಡುತ್ತಿಯಾ. ನೀನು ಬುಲೆಟ್ನಿಂದ ಹೊರಟ ಗುಂಡಿಗೆ ಬಲಿಯಾಗ್ತೀಯಾ ಎಂದು ಬರೆದಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಇರುವಾಗ ನೂರು ಗುಂಡು ಹಾಕಿದ್ರೂ ಫರಕ್ ಇರೋದಿಲ್ಲ. ಅಂಬೇಡ್ಕರ್ ತಾಕತ್ತಿನ ಕಾನೂನು ಕೊಟ್ಟಿದ್ದಾರೆ" ಎಂದು ಹೇಳಿದರು.
"ಭಾರತ ದೇಶದೊಳಗೆ ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದ್ದಾರೆ. ಸಂವಿಧಾನದಲ್ಲಿ ಸ್ವಾಮಿಗಳು ಖಾವಿ ಪೇಟ ಹಾಕಲು ಅವಕಾಶ ಇದೆ. ಮುಸ್ಲಿಂಮರಿಗೆ ಹಿಜಾಬ್ ಹಾಕಲು ಅವಕಾಶ ಕೊಟ್ಟಿದ್ದಾರೆ. ಇದ್ಯಾವುದನ್ನೂ ಕಡೆಗಣಿಸಬಾರದು ಆಗ ಮಾತ್ರ ಅಂಬೇಡ್ಕರ್ ಕಂಡ ಕನಸು ನನಸಾಗುತ್ತದೆ. ಹಿಂದು ಎಂದು ಬಡಿದಾಡುವುದಕ್ಕಿಂತ ನಾವೆಲ್ಲ ಒಂದು ಎಂದು ಬಡಿದಾಡಿದರೆ ಎಲ್ಲರ ಕನಸು ನನಸಾಗುತ್ತದೆ" ಎಂದು ಆಶಯ ವ್ಯಕ್ತಪಡಿಸಿದರು.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications