Get Updates
Get notified of breaking news, exclusive insights, and must-see stories!

ಉಡುಪಿಯ ಹಿರಿಯಡ್ಕ ವೀರಭದ್ರ ದರ್ಶನ ಮಾಡಿದ ದರ್ಶನ್

ಉಡುಪಿ, ಏಪ್ರಿಲ್ 22: ಉಡುಪಿಯ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಭಾನುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದರು. ಉಡುಪಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನವನ್ನು ಮೂವತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.

ಈ ಪ್ರಯುಕ್ತ ಪಡೆದ ಸಭಾ ಕಾರ್ಯಕ್ರಮದಲ್ಲಿ ದರ್ಶನ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಕೈ ಮುಗಿದು ವೇದಿಕೆ ಹತ್ತಿದ ದರ್ಶನ್, ನಾಡಿನ ಹಿರಿಯ ಯತಿ ಪೇಜಾವರ ಸ್ವಾಮೀಜಿಯ ಆಶಿರ್ವಾದ ಪಡೆದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿದರು.

Veerabhadra temple

ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಅಪೂರ್ವ ಶಿಲ್ಪಕಲಾ ಕೆತ್ತನೆಯನ್ನು ಬೆರಗುಗಣ್ಣಿನಿಂದ ನೋಡಿದ ದರ್ಶನ್, ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ದರ್ಶನ್ ಗೆ ಖ್ಯಾತ ನಟರಾದ ಸೃಜನ್ ಲೋಕೇಶ್, ಧನಂಜಯ್ ಮತ್ತಿತರರು ಸಾಥ್ ನೀಡಿದರು. ದೇವರ ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರು ದರ್ಶನ್ ದರ್ಶನದಿಂದ ಪುಳಕಿತರಾದರು.

ದೇವರ ದರ್ಶನದ ನಂತರ ಮಾತನಾಡಿದ ದರ್ಶನ್, ಪೂರ್ವಿಕರು ನೀಡಿದ ಆಸ್ತಿಯನ್ನು ಉಳಿಸುವುದು, ಜೀರ್ಣೋದ್ಧಾರಗೊಳಿಸುವುದು ಪುಣ್ಯದ ಕೆಲಸ ಎಂದು ಈ ಕಾರ್ಯ ಮಾಡಿದ ಹಿರಿಯಡ್ಕ ಜನತೆಯನ್ನು ಅಭಿನಂದಿಸಿದರು.

Darshan
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+