ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ- ಅರ್ಜಿ ಆಹ್ವಾನ
ಉಡುಪಿ, ಅಕ್ಟೋಬರ್ 5: ಪ್ರಧಾನಮಂತ್ರಿಗಳ ಮುದ್ರಾ ಯೋಜನೆ (PMMY) ಹಾಗೂ ಸ್ಟಾಂಡ್ ಅಪ್(SUI) ಯೋಜನೆಗಳಡಿ ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಸಾಲ ಸೌಲಭ್ಯ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿಗಳ ಮುದ್ರಾ ಯೋಜನೆಯನ್ನು ಪ್ರಧಾನಮಂತ್ರಿಗಳು 2015 ರ ಏಪ್ರಿಲ್ 8 ರಂದು ಉದ್ಘಾಟನೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಸಣ್ಣ ಕೈಗಾರಿಕಾ ಘಟಕಗಳಿಗೆ ಶಿಶು ಸಾಲ ರೂ.50 ಸಾವಿರ ದ ವರೆಗೆ, ಕಿಶೋರ್ ಸಾಲ ರೂ.50 ಸಾವಿರದಿಂದ ರೂ.5 ಲಕ್ಷ ದವರೆಗೆ ಹಾಗೂ ತರುಣ್ ಸಾಲ ರೂ.5 ಲಕ್ಷ ದಿಂದ ರೂ.10 ಲಕ್ಷ ದ ವರೆಗಿನ ಸೌಲಭ್ಯ ಒದಗಿಸಿದೆ.[ಮೋದಿ ಕನಸಿನ ಸ್ಟ್ಯಾಂಡಪ್ ಇಂಡಿಯಾ ಯೋಜನೆ]
ಸ್ಟಾಂಡ್ ಅಪ್ ಯೋಜನೆಯನ್ನು ಪ್ರಧಾನಮಂತ್ರಿಗಳು 2016 ರ ಏಪ್ರಿಲ್ 5 ರಂದು ಉದ್ಘಾಟನೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು ಮಾತ್ರ ಗ್ರೀನ್ ಪೀಲ್ಡ್ ಎಂಟರ್ಪ್ರೈಸರ್ ಸ್ಥಾಪನೆಗೆ ಸಾಲ ಸೌಲಭ್ಯಗಳನ್ನು ಪಡೆಯಲ ಅರ್ಹ ಇರುತ್ತಾರೆ. ಸಾಲದ ಮೊತ್ತವು ರೂ.10 ಲಕ್ಷ ಗಳಿಂದ ರೂ.1 ಕೋಟಿಯ ವರೆಗೆ ನಿಗದಿಪಡಿಸಲಾಗಿದೆ.[ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]
ಹೆಚ್ಚಿನ
ಮಾಹಿತಿಗಾಗಿ
ಜಂಟಿ
ನಿರ್ದೇಶಕರ
ಕಚೇರಿ,
ಜಿಲ್ಲಾ
ಕೈಗಾರಿಕಾ
ಕೇಂದ್ರ,
ಪ್ಲ್ಯಾಟ್
ನಂ.36-ಸಿ,
ಶಿವಳ್ಳಿ
ಕೈಗಾರಿಕಾ
ಪ್ರದೇಶ
ಮಣಿಪಾಲ
ದೂರವಾಣಿ
ಸಂಖ್ಯೆ
0820-2575650
ನ್ನು
ಸಂಪರ್ಕಿಸಬಹುದು.
(ಒನ್ಇಂಡಿಯಾ
ಸುದ್ದಿ)