ಇಂದು ಶ್ರೀ ಸಿದ್ಧಲಿಂಗಸ್ವಾಮಿಗಳ ಜನ್ಮದಿನ-ಗುರುವಂದನೆ
ತುಮಕೂರು, ಜುಲೈ 22: ಹಲವು ದಶಕಗಳ ಹಿಂದೆ, ಅದೊಂದು ದಿನ ಶ್ರೀ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಇವತ್ತು "ಬುದ್ದೇರು (ಶ್ರೀ ಶ್ರೀ ಶ್ರೀ ಶಿವಕುಮಾರ ಮಾಹಾಸ್ವಾಮಿಗಳು) ಹುಟ್ಟಿದ ದಿನವಂತೆ, ಹೋಗಿ ನಮಸ್ಕಾರ ಮಾಡಿ ಬರೋಣ" ಎಂದು ಮಾತನಾಡಿಕೊಂಡದ್ದು, ಅಲ್ಲಿಯೇ ಮಠದಲ್ಲಿದ್ದ ಕೆಲವು ಹಿರಿಯರ ಕಿವಿಗೆ ಬಿದ್ದು ಅರೆ, ಮಕ್ಕಳಿಗೆ ಶ್ರೀಗಳ ಜನ್ಮದಿನವನ್ನು ಆಚರಣೆ ಮಾಡುವ ಆಸೆಯಿದೆ ಎಂದು ಅರಿತು ಗುರುಗಳ ಕಚೇರಿಯ ಮುಂದೆ ಜಮಾಯಿಸಿದ್ದ ಹುಡುಗರನ್ನು ಶ್ರೀಗಳ ಆಶೀರ್ವಾದ ಪಡೆದು ಹೋಗಿ ಎಂದು ಒಳಗೆ ಕಳುಹಿಸಿ ಎಲ್ಲರಿಗೂ ಕಡ್ಲೆ ಸಕ್ಕರೆ ಹಂಚಿದ್ದರು.
ಹಾಗೆ ಮಕ್ಕಳ ಮನದಲ್ಲಿ ಮೊಳೆತ ಗುರುಗಳ ಜನ್ಮದಿನದ ಸಂಭ್ರಮ ಮುಂದೆ 'ಗುರುವಂದನೆ' ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಪ್ರಕೃತಿಯಲ್ಲಿ ಗಿಡ, ಮರ, ಬಳ್ಳಿ ಬೆಳೆದಂತೆ ಗುರುವಂದನೆಯ ಕಲ್ಪನೆಯೂ ಜನರ ನಡುವೆಯೇ ಬೆಳೆದು ಹೆಮ್ಮರವಾಗಿ ಶ್ರೀ ಮಠದ ಪರಂಪರೆಯಲ್ಲಿ ದೊಡ್ಡ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದ್ದು ಇತಿಹಾಸ. ಪರಮಪೂಜ್ಯರು ಹೀಗೆ ಮಕ್ಕಳ ಹಾಗೂ ಸಮೂಹ ಪ್ರೀತಿಯನ್ನು ಅಭಿಮಾನದಿಂದ ಸ್ವೀಕರಿಸುತ್ತಿದ್ದರು.

ಇಂದು ಶ್ರೀ ಸಿದ್ಧಲಿಂಗ ಸ್ವಾಮಿಗಳ ಜನ್ಮದಿನ. ಕೊರೊನಾ ವೈರಸ್ ಸಾಂಕ್ರಾಮಿಕ ಸಂಕಷ್ಟದ ಈ ದಿನಗಳಲ್ಲಿ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ. ಹಾಗಾಗಿ ಶ್ರೀ ಮಠದ ಭಕ್ತರು, ಗುರುಪರಂಪರೆಗಳ ಬಗ್ಗೆ ಅಭಿಮಾನ ಗೌರವ ಉಳ್ಳವರು ತಮ್ಮ ಮನೆಗಳಿಂದಲೇ ಶ್ರೀ ಸಿದ್ಧಗಂಗಾ ಸ್ವಾಮಿಗಳಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತಾರೆ.

ಯಾವುದೇ ಜಾತಿ ಮತ ಪಂಥಗಳ ಬೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುತ್ತಾ ನಿಜ ಬಸವ ತತ್ವವನ್ನು ಜಾರಿಯಲ್ಲಿಟ್ಟುರುವ ಶ್ರೀ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳಿಗೆ ಅವರ ಜನ್ಮದಿನವಾದ ಇಂದು ಮತ್ತೊಮ್ಮೆ ಭಕ್ತಿ ಪೂರ್ವಕ ಪ್ರಣಾಮಗಳು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications