ಪಾವಗಡದ ಬೃಹತ್ ಸೊಲಾರ್ ಪಾರ್ಕ್ಗೆ 'ಟೈಟಾನಿಕ್' ಹೀರೊ ಮೆಚ್ಚುಗೆ
ಬೆಂಗಳೂರು, ಮಾರ್ಚ್ 21: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಇತ್ತೀಚೆಗೆ ಉದ್ಘಾಟನೆ ಕಂಡ ಬೃಹತ್ ಸೋಲಾರ್ ಪಾರ್ಕ್ ವಿಶ್ವದ ಗಮನ ಸೆಳೆದಿದೆ.
ಅಮೆರಿಕದ ಖ್ಯಾತ ದಿನಪತ್ರಿಕೆಗಳಲ್ಲಿ ಒಂದಾದ ಲಾಸ್ ಎಂಜಲಿಸ್ ಟೈಮ್ಸ್ ಪಾವಗಡದ ಬೃಹತ್ ಸೊಲಾರ್ ಪಾರ್ಕ್ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದು, ಟೈಟಾನಿಕ್ ಚಿತ್ರದ ಮೂಲಕ ಪ್ರಪಂಚದೆಲ್ಲೆಡೆ ಮನೆ ಮಾತಾದ ಆಸ್ಕರ್ ವಿಜೇತ ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಕೂಡ ಕರ್ನಾಟಕ ಸರ್ಕಾರದ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಲಾಸ್ ಎಂಜಲಿಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ವೆಬ್ ಲಿಂಕ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಿಂದ ರಿಟ್ವೀಟ್ ಮಾಡಿರುವ ಲಿಯೊನಾರ್ಡೊ ಡಿ ಕಾಪ್ರಿಯೊ ವಿಶ್ವದೆಲ್ಲೆಡೆಯ ಜನಗಳಿಗೆ ಕರ್ನಾಟಕದ ಅತ್ಯುತ್ತಮ ಪ್ರಯತ್ನದ ಮಾಹಿತಿ ಪಸರಿಸುವಂತೆ ಮಾಡಿದ್ದಾರೆ. ಜಾಗತಿಕ ತಾಪಮಾನದ ವಿರುದ್ಧ ಆಂಧೋಲನದ ರಾಯಭಾರಿ ಆಗಿರುವ ಲಿಯೊನಾರ್ಡೊ ಡಿ ಕ್ಯಾಪ್ರಿಯೊ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಾಗತಿಕ ತಾಪಮಾನ ಸಂಬಂಧಿ ಸುದ್ದಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಲಾಸ್ ಏಂಜಲಿಸ್ ಟೈಮ್ಸ್ ಪತ್ರಿಕೆಯು ಪಾವಗಡದ ಸೋಲಾರ್ ಪಾರ್ಕ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು, 'ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಫ್ರಾನ್ಸ್ ಒಪ್ಪಂದವನ್ನು ಕಡಿದುಕೊಂಡು, ಶಕ್ತಿ ಸಂಪನ್ಮೂಲವಾಗಿ ಕಲ್ಲಿದ್ದಲನ್ನು ಹೆಚ್ಚು ಬಳಸಲು ಉತ್ತೇಜಿಸುತ್ತಿರುವ ಹೊತ್ತಿನಲ್ಲಿ ಭಾರತದ ದಕ್ಷಿಣ ರಾಜ್ಯ ಕರ್ನಾಟಕದ ಪಾವಗಡ ಎಂಬಲ್ಲಿ 20 ಚದರ ಮೈಲಿಯಲ್ಲಿ ಬೃಹತ್ ಸೊಲಾರ್ ನಿರ್ಮಿಸಿ ಪುನರ್ನವೀಕರಣ ಹೊಂದುವ ಸಂಪನ್ಮೂಲಗಳತ್ತ ಭಾರತ ದೃಷ್ಠಿ ಹರಿಸಿರುವುದಾಗಿ ಸಾರಿದೆ' ಎಂದು ಬರೆಯಲಾಗಿದೆ.
ಶಶಾಂಕ್ ಬೆಂಗಾಲಿ ಎಂಬ ಭಾರತೀಯರು ಲಾಸ್ ಏಂಜಲ್ಸ್ ಟೈಮ್ಸ್ ನಲ್ಲಿ ಈ ಲೇಖನ ಬರೆದಿದ್ದು ವಿಶ್ವದ ಅತಿ ದೊಡ್ಡ ಸೊಲಾರ್ ಪಾರ್ಕ್ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ಸುಮಾರು 700000 ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲಿದೆ ಎಂದು ಬರೆದಿದ್ದಾರೆ.
The biggest solar parks in the world are now being built in India https://t.co/hUlSLdqdfq pic.twitter.com/l0ZqnCZZRl
— Los Angeles Times (@latimes) March 19, 2018
ಲಾಸ್ ಏಂಜಲಿಸ್ ಟೈಮ್ಸ್ನಲ್ಲಿ ಸರ್ಕಾರದ ಕಾರ್ಯಕ್ರಮದ ವರದಿ ಬಂದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications