ಸಾಯಲೆಂದು ಟವರ್ ಏರಿದವಳ ಜೀವ ಉಳಿಸಿದ ಕಣಜ ಹುಳು
ಅಲಪ್ಪುಳ, ಮೇ 10: ಮೊಬೈಲ್ ಟವರ್ ಏರಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಮಹಿಳೆಯೊಬ್ಬಳು ಕಣಜಗಳಿಗೆ ಹೆದರಿ ಕೆಳಗಿಳಿದು ಜೀವ ಉಳಿಸಿದ ಘಟನೆ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಕೈಯಂಕುಳಂ (Kayamkulam) ಪಟ್ಟಣದಲ್ಲಿ ನಡೆದಿದೆ. ಸ್ಥಳೀಯ ಟಿವಿ ಚಾನಲ್ಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.
ನಿನ್ನೆ ಸೋಮವಾರ ಈ ಘಟನೆ ನಡೆದಿದೆ. ತನ್ನ ಮಗು ಗಂಡನ ಬಳಿ ಇದೆ. ಅದನ್ನು ತನಗೆ ಒಪ್ಪಿಸಬೇಕು ಎಂಬುದು ತಮಿಳುನಾಡು ಮೂಲದ ಈ ಮಹಿಳೆಯ ಬೇಡಿಕೆ. ತನಗೆ ಮಗು ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಬಿಎಸ್ಎನ್ಎಲ್ ಮೊಬೈಲ್ ಟವರ್ ಹತ್ತತೊಡಗುತ್ತಾಳೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಕೆಳಗಿಳಿಯುವಂತೆ ಆಕೆಗೆ ಮನವೊಲಿಸಲು ಯತ್ನಿಸುತ್ತಾರೆ. ಆದರೂ ಆಕೆ ಕೇಳದೇ ತನ್ನ ಪಾಡಿಗೆ ತಾನು ಟವರ್ ತುದಿತ್ತ ಹತ್ತುತ್ತಾ ಹೋಗುತ್ತಿರುತ್ತಾಳೆ.

ಕಣಜ ಹುಳುಗಳ ಸ್ವಾಗತ:
ಸಿಟ್ಟಿನ ಭರದಲ್ಲಿ ಮೊಬೈಲ್ ಟವರ್ ಹತ್ತುತ್ತಿದ್ದ ಆ ಮಹಿಳೆ ಆಕಸ್ಮಿಕವಾಗಿ ಕಣಜ ಹುಳುಗಳ ಗೂಡನ್ನ (Wasp Net) ಕೆದಕಿಬಿಡುತ್ತಾಳೆ. ರೊಚ್ಚಿಗೆದ್ದ ಕಣಜಗಳು ಆಕೆಯ ಮೇಲೆ ಮುತ್ತಗೆ ಹಾಕಿ ಕಚ್ಚಿವೆ.
ದಿಢೀರ್ ಆಗಿ ಕಣಜಗಳ ದಾಳಿಯಿಂದ ಆ ಮಹಿಳೆಗೆ ಬೆವರಿಳಿಯುತ್ತದೆ. ಸಾಯುತ್ತೇನೆಂದು ಬೆದರಿಕೆ ಹಾಕಲು ಮೇಲೆ ಹತ್ತಿದ ಮಹಿಳೆ ಕಣಜಗಳ ದಾಳಿಯಿಂದ ಭಯಗೊಂಡು ಜೀವ ಉಳಿಸಿಕೊಳ್ಳಲು ಕೆಳಗೆ ಇಳಿಯತೊಡುತ್ತಾಳೆ. ಸರಸರನೆ ಕೆಳಗಿಳಿದ ಈಕೆ ಇನ್ನೂ ಕೆಲ ಅಡಿ ಎತ್ತರದಲ್ಲಿರುವಾಗಲೇ ಕೆಳಗೆ ಹಾರುತ್ತಾಳೆ. ಕೆಳಗೆ ಸುರಕ್ಷತೆಗೆಂದು ಹಾಕಲಾಗಿದ್ದ ಬಲೆಯಿಂದಾಗಿ ಆಕೆಗೆ ಸಣ್ಣಪುಟ್ಟ ಗಾಯ ಮಾತ್ರ ಆಗಿದೆ.

ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಈ ಕಣಜಗಳು ದಾಳಿ ಮಾಡದೇ ಇದ್ದಿದ್ದರೆ ಆ ಮಹಿಳೆ ಕೆಳಗಿಳಿದು ಬರುತ್ತಿರಲಿಲ್ಲವೇನೋ ಎಂದು ಅನುಮಾನ ವ್ಯಕ್ತಡಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications