ಕಣ್ಣೂರು ಹೊಸ ಏರ್ಪೋರ್ಟ್ ವಿಶೇಷತೆಗಳೇನು?ರಾಜ್ಯಕ್ಕೆ ಏನು ಪ್ರಯೋಜನ?
ಕಣ್ಣೂರು, ನವೆಂಬರ್ 30: ಕಣ್ಣೂರು ನೂತನ ಏರ್ಪೋರ್ಟ್ ಡಿಸೆಂಬರ್ 9ಕ್ಕೆ ಉದ್ಘಾಟನೆಗೊಳ್ಳಿದ್ದು ಮೊದಲು ಅಬುಧಾಬಿಗೆ ಹಾರಾಟ ನಡೆಸಲಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹಾಗಾದರೆ ಕಣ್ಣೂರು ಏರ್ಪೋರ್ಟ್ ನಿಂದ ರಾಜ್ಯಕ್ಕೆ ಏನು ಪ್ರಯೋಜನವಾಗಲಿದೆ, ಸದ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದ್ದು, ವಿಸ್ತರಣೆಯಾಗಲಿದೆ , ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗು, ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ. ಅಲ್ಲಿನ ಕಾಫಿ, ಪುಷ್ಪೋದ್ಯಮ, ಕರಿಮೆಣಸು, ಕೃಷಿ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ದೊರೆಯಲಿದೆ.
ಕೆಂಪೇಗೌಡ ಏರ್ಪೋರ್ಟ್: ಬೋರ್ಡಿಂಗ್ ಪಾಸ್ ಮತ್ತಷ್ಟು ಸುಲಭ
ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಲಿರುವುದರಿಂದ ಕಣ್ಣೂರು-ವಿರಾಜಪೇಟೆ-ಮೈಸೂರು ಸಂಪರ್ಕ ಮೇಲ್ದರ್ಜೆಗೆ ಏರಲಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ.
ಇದೀಗ 24 ಚೆಕ್ ಇನ್ ಕೌಂಟರ್ಗಳಿದ್ದು, ಬೇಡಿಕೆ ಆಧರಿಸಿ 48 ಕೌಂಟರ್ಗಳಿಗೆ ಹೆಚ್ಚಿಸುವ ಅವಕಾಶವನ್ನು ಹೊಂದಿದೆ. ಜನವರಿಯಲ್ಲಿ 13 ವಿಮಾನಗಳ ಹಾರಾಟ ನಡೆಯಲಿದ್ದು, ವಿದೇಶಿ ಸಂಸ್ಥೆಗಳ ವಿಮಾನ ಸೇವೆ ಆರಂಭಿಸಲು ಅನುಮತಿಗಾಗಿ ಕಾಯಲಾಗುತ್ತಿದೆ.
ಹೊಸ ವಿಮಾನ ನಿಲ್ದಾಣದ ವಿಶೇಷತೆಯೇನು?
ಹಲವು ಹೊಸತನದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಬಳಕೆಗೆ ಸಜ್ಜಾಗಿದೆ. ಒಟ್ಟು ಆರು ಅಂತಸ್ತಿನ ಟರ್ಮಿನಲ್ ಕಟ್ಟಡ, ಎಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಎಟಿಎಸ್ನ ಅಂತಿಮ ಕಾಮಗಾರಿ ಪೂರ್ಣಗೊಂಡಿದೆ.
ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ
ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ ಯಾವಾಗ?
ಕಣ್ಣೂರು ವಿಮಾನ ನಿಲ್ದಾಣವು ಡಿಸೆಂಬರ್ 9ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ವಿಮಾನ ನಿಲ್ದಾಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ತಪಾಸಣೆ, ಲಗ್ಗೇಜ್ ಸಿಸ್ಟಮ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸೇವೆ ನೀಡಲು ತಾಲೀಮು ನಡೆಸಲಾಗಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ.
ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ
ಕರ್ನಾಟಕಕ್ಕೆ ಪ್ರಯೋಜನ ಏನು?
ಕಣ್ಣೂರು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೊಂಡರೆ ಕರ್ನಾಟಕಕ್ಕೆ ಏನು ಪ್ರಯೋಜನ ಎಂದು ನೋಡುವುದಾದರೆ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆ ಇದೆ.ಈ ಜಿಲ್ಲೆಗಳಲ್ಲಿ ಬೆಳೆಯುವ ಕೃಷಿ ಹಾಗೂ ಪುಷ್ಪೋದ್ಯಮಕ್ಕೆ ವಿದೇಶದಲ್ಲಿ ಮಾರುಕಟ್ಟೆ ದೊರೆಯಲಿದೆ. ಹೆಚ್ಚಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ ಇಷ್ಟೇ ಅಲ್ಲದೆ ಗಡಿ ಜಿಲ್ಲೆಗಳಿಎ ಹಲವು ರೀತಿಯ ಪ್ರಯೋಜನವನ್ನು ನಾವು ನಿರೀಕ್ಷಿಸಬಹುದು.
ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ
ಮೊದಲ ಹಂತದಲ್ಲಿ ಎಲ್ಲೆಲ್ಲಿಗೆ ಪ್ರಯಾಣ
ಮೊದಲ ಹಂತದಲ್ಲಿ ವಾರಕ್ಕೆ ನಾಲ್ಕು ದಿನ ಅಬುಧಾಬಿಗೆ ವಿಮಾನ ಬೆಳಗ್ಗೆ 9 ಗಂಟೆಗೆ ಹೊರಡಲಿದ್ದು, ಅಲ್ಲಿಂದ ರಾತ್ರಿ 8.20ಕ್ಕೆ ಆಗಮಿಸಲಿದೆ. ಗಲ್ಫ್ ದೇಶಗಳಿಗೆ ವಿಮಾನ ಹಾರಾಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಕೆಲವು ದಿನಗಳ ಬಳಿಕ ನಿತ್ಯ ಪಯಣ ಬೆಳೆಸಲಿದೆ. ಅಲ್ಲದೇ, ಮಸ್ಕತ್, ಕುವೈತ್, ಶಾರ್ಜಾ ಸೇರಿದಂತೆ ವಿವಿಧ ದೇಶಗಳಿಗೆ ಸಂಪರ್ಕ ಕಲ್ಪಿಸಲು ತಯಾರಿ ನಡೆಯುತ್ತಿದೆ.
ಎರಡನೇ ಹಂತದಲ್ಲಿ ಎಲ್ಲೆಗೆ ವಿಮಾನ ಹಾರಾಟ
ಕೆಲವು ದಿನಗಳಲ್ಲಿ ಆಂತರಿಕ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ. ಬೆಂಗಳೂರು, ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್, ಗೋವಾ, ಮುಂಬಯಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಗೆ ಹಾರಾಟ ನಡೆಸಲು ವಿವಿಧ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ. ಅದೇ ರೀತಿ ಸರಕು ಸಾಗಣೆಗೆ ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಹಂತಹಂತವಾಗಿ ಜಾರಿಗೆ ಬರಲಿದೆ.
ನೂತನ ತಂತ್ರಜ್ಞಾನ, ಆಧುನಿಕ ವ್ಯವಸ್ಥೆ
ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ನೂತನ ಸ್ಕ್ಯಾನಿಂಗ್ ತಂತ್ರಜ್ಞಾನದಿಂದ ತಪಾಸಣೆ ಶೀಘ್ರವಾಗಿ ಮುಗಿಯಲಿದೆ. ಅಲ್ಲದೇ, ಲಗ್ಗೇಜ್ ಡ್ರಾಪಿಂಗ್ ಸಿಸ್ಟಮ್ ಎಂಬ ತಂತ್ರಜ್ಞಾನ ಕೂಡ ಮಿಂಚಿನ ವೇಗದಲ್ಲಿ ಲಗ್ಗೇಜ್ಗಳನ್ನು ಪರಿಶೀಲನೆ ನಡೆಸಲಿದೆ. ಪ್ರತಿ ಗಂಟೆಗೆ 2 ಸಾವಿರ ಮಂದಿ ಪ್ರಯಾಣಿಕರನ್ನು ತಪಾಸಣೆ ಮಾಡಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ಇಲ್ಲಿದೆ.