Get Updates
Get notified of breaking news, exclusive insights, and must-see stories!

'ಸಂತೋಷದ ವಿದಾಯ': ಶವದ ಮುಂದೆ ಕುಟುಂಬಸ್ಥರ ನಗುವಿನ ಫೋಟೋ ವೈರಲ್

ತಿರುವನಂತಪುರಂ ಆಗಸ್ಟ್ 24: ಕೇರಳದ ಪತ್ತನಂತಿಟ್ಟದ ಮಲ್ಲಪಲ್ಲಿಯ ಒಂದು ದೊಡ್ಡ ಕುಟುಂಬದ ಫೋಟೋ ವೈರಲ್ ಆಗಿದೆ. ಈ ಫೋಟೋದ ವಿಶೇಷತೆ ಏನು ಅಂದರೆ ಈ ಫೋಟೋದಲ್ಲಿ ಎಲ್ಲರ ಮುಖದಲ್ಲಿ ನಗು ಇದೆ. ಫೋಟೋ ಅಂದ ಮೇಲೆ ಎಲ್ಲರ ಮುಖದಲ್ಲಿ ನಗು ಇರಲೇ ಬೇಕು ಅದರಲ್ಲಿ ವಿಶೇಷತೆ ಏನಿದೆ? ಅನ್ನೋ ಪ್ರಶ್ನೆಯನ್ನು ನೀವು ಮಾಡಬಹುದು. ಆದರೆ ಫೋಟೋ ಅಂದ ಮೇಲೆ ಎಲ್ಲರ ಮುಖದಲ್ಲಿ ನಗು ಇರಲೇಬೇಕು. ಆದರೆ ಎಲ್ಲಾ ಸಂದರ್ಭದಲ್ಲಿ ನಗು ಇರಲು ಸಾಧ್ಯವಿಲ್ಲ. ಹೀಗಾಗಿ ದು:ಖದ ಸಂದರ್ಭದಲ್ಲಿ ಫೋಟೋ ತೆಗೆಯುವುದು ಕೊಂಚ ಕಡಿಮೆಯೇ. ಹೀಗಿರುವಾಗ ಕೇರಳದ ಕುಟುಂಬವೊಂದು ಶವದ ಮುಂದೆ ನಗುತ್ತಾ ಫೋಟೋ ತೆಗೆಸಿಕೊಂಡು ಸಂತೋಷದಿಂದ ಬಾಳಿ ಬದುಕಿದ ಕುಟುಂಬ ಸದಸ್ಯೆಗೆ ವಿದಾಯ ಹೇಳಿದೆ. ಇದನ್ನು ಹಲವಾರು ಜನ ಟೀಕಿಸಿದ್ದಾರೆ. ಸಾವಿನ ಮನೆಯಲ್ಲಿ ನಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಹರಿದಾಡುತ್ತಿದೆ. ಈ ಫೋಟೋದಲ್ಲಿ ವಯಸ್ಸಾದ ಮಹಿಳೆಯ ಶವವನ್ನು ಇರಿಸಲಾಗಿದ್ದ ಗಾಜಿನ ಶವಪೆಟ್ಟಿಗೆಯ ಸುತ್ತಲೂ ಕುಟುಂಬ ಸದಸ್ಯರು ನಗುತ್ತಿರುವುದನ್ನು ಕಾಣಬಹುದು.

 ಸಂತೋಷದ ವಿದಾಯ ನೀಡಿದ ಕುಟುಂಬ

ಸಂತೋಷದ ವಿದಾಯ ನೀಡಿದ ಕುಟುಂಬ

ಕುಟುಂಬದ ಸದಸ್ಯರಾದ 95 ವರ್ಷದ ಮರಿಯಮ್ಮ ಅವರು ಆಗಸ್ಟ್ 17 ರಂದು ನಿಧನರಾದರು. ಈ ವೇಳೆ ಅವರ ಶವಪೆಟ್ಟಿಗೆಯ ಸುತ್ತಲು ನಿಂತ ಕುಟುಂಬ ಸದಸ್ಯರು ನಗುತ್ತಿರುವ ಫೋಟೋ ಕಂಡು ಹಲವರು ಟೀಕಿಸಿದ್ದಾರೆ. ಕುಟುಂಬದ ಮೇಲೆ ಕಿಡಿ ಕಾರಿದ್ದಾರೆ. ಕುಟುಂಬದಲ್ಲಿ ಪ್ರಿಯವಾದ ಯಾರಾದರೂ ತೀರಿಕೊಂಡಾಗ ಅವರು ಹೇಗೆ ನಗುತ್ತಾರೆ ಎಂದು ಕೇಳಲಾಗಿದೆ.

ನಗುವಿಗೆ ಕಾರಣವನ್ನು ವಿವರಿಸಿದ ಕುಟುಂಬ

ನಗುವಿಗೆ ಕಾರಣವನ್ನು ವಿವರಿಸಿದ ಕುಟುಂಬ

ಇಂತಹ ಪ್ರತಿಕ್ರಿಯೆಗಳ ನಂತರ, ನಗುವಿಗೆ ಕಾರಣವನ್ನು ವಿವರಿಸಲು ಕುಟುಂಬ ಸದಸ್ಯರು ಮುಂದೆ ಬಂದಿದ್ದಾರೆ. 95 ವರ್ಷಗಳ ಕಾಲ ಮರಿಯಮ್ಮ ಅವರು ಸಾಕಷ್ಟು ಪ್ರೀತಿಯನ್ನು ಕೊಟ್ಟು, ನೆಮ್ಮದಿಯ ಜೀವನ ನಡೆಸಿದ್ದು, ಕುಟುಂಬಸ್ಥರು ಅವರಿಗೆ ಸಂತಸದಿಂದ ಬೀಳ್ಕೊಟ್ಟಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮರಿಯಮ್ಮ ಒಂಬತ್ತು ಮಕ್ಕಳ ತಾಯಿಯಾಗಿದ್ದಾರೆ ಮತ್ತು ಅವರು ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ವಾಸಿಸುತ್ತಿದ್ದರು. ಕುಟುಂಬದವರು ಅವಳನ್ನು ಚೆನ್ನಾಗಿ ನೋಡಿಕೊಂಡರು ಎಂದು ಕುಟುಂಬ ಹೇಳಿಕೊಂಡಿದೆ. ಸುಮಾರು ಒಂದು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಮರಿಯಮ್ಮ ಆಗಸ್ಟ್ 17 ರಂದು ನಿಧನರಾದರು ಮತ್ತು ವೈರಲ್ ಫೋಟೋವನ್ನು ಆಗಸ್ಟ್ 19ರಂದು ಹಂಚಿಕೊಕೊಳ್ಳಲಾಗಿದೆ.

 ಸಾವಿನ ನಂತರ ಉತ್ತಮ ಸಂದರ್ಭ ನೆನೆದ ಕುಟುಂಬ

ಸಾವಿನ ನಂತರ ಉತ್ತಮ ಸಂದರ್ಭ ನೆನೆದ ಕುಟುಂಬ

ಮರಿಯಮ್ಮನ ಸಂಬಂಧಿಕರು ಅವರ ಸಾವಿನ ನಂತರ, ಅವರು ತಮ್ಮ ತಾಯಿಯೊಂದಿಗೆ ಉತ್ತಮ ಸಂದರ್ಭಗಳನ್ನು ನೆನಪಿಸಿಕೊಳ್ಳಲು ಬಯಸಿದ್ದರು ಎಂದು ಹೇಳಿದರು. ಅವರ ಮೃತದೇಹದ ಪಕ್ಕದಲ್ಲಿ ನಗುತ್ತಿರುವ ಫೋಟೋವನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಅಂತ್ಯಕ್ರಿಯೆಯ ಮೊದಲು, ಇಡೀ ಕುಟುಂಬ ಒಟ್ಟಿಗೆ ಕುಳಿತು ಸುಮಾರು 24 ಗಂಟೆಗಳ ಕಾಲ ಮರಿಯಮ್ಮಗಾಗಿ ಪ್ರಾರ್ಥಿಸಿದೆ. ಸಾವಿನ ಸಮಯದಲ್ಲಿ ಕಣ್ಣೀರಿಗೆ ಒಗ್ಗಿಕೊಂಡಿರುವ ಜನರು ಈ ಫೋಟೋವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮರಿಯಮ್ಮನವರ ಕುಟುಂಬದ ಸದ್ಯಸರು ಹೇಳಿದರು.

ಕೇರಳದ ಶಿಕ್ಷಣ ಸಚಿವ ಟ್ವೀಟ್

ಕೇರಳದ ಶಿಕ್ಷಣ ಸಚಿವ ಟ್ವೀಟ್

ಛಾಯಾಚಿತ್ರವನ್ನು ಖಾಸಗಿ ಕುಟುಂಬದ ನೆನಪಿಗಾಗಿ ತೆಗೆದಿದ್ದು ಅದು ಹೇಗೋ ಹೊರಗಿನವರಿಗೆ ಸೋರಿಕೆಯಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ತಮ್ಮ ಕ್ರಿಶ್ಚಿಯನ್ ನಂಬಿಕೆಯಂತೆ ಸ್ವರ್ಗಕ್ಕೆ ಹೋಗುವ ತಮ್ಮ ತಾಯಿಗೆ ವಿದಾಯ ಹೇಳುತ್ತಿರುವುದರಿಂದ ಅವರು ಫೋಟೋ ತೆಗೆದುಕೊಳ್ಳುವ ನಿರ್ಧಾರಕ್ಕೆ ವಿಷಾದಿಸುವುದಿಲ್ಲ ಎಂದು ಅವರು ಹೇಳಿದರು.

ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಛಾಯಾಚಿತ್ರದ ಮೇಲೆ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡದಂತೆ ಜನರನ್ನು ಕೇಳಿದ್ದಾರೆ. "ಸಾವು ನೋವಿನಿಂದ ಕೂಡಿದೆ. ಆದರೆ ಇದು ವಿದಾಯವೂ ಆಗಿದೆ. ಸುಖವಾಗಿ ಬಾಳಿದವರಿಗೆ ನಗುಮೊಗದ ವಿದಾಯ ನೀಡುವುದಕ್ಕಿಂತ ಹೆಚ್ಚಿನ ಸಂತೋಷ ಬೇರೇನಿದೆ? ಈ ಫೋಟೋಗೆ ಋಣಾತ್ಮಕ ಕಾಮೆಂಟ್‌ಗಳ ಅಗತ್ಯವಿಲ್ಲ ಎಂದು ಸಚಿವರು ಬರೆದಿದ್ದಾರೆ.

Recommended Video

      ಮೋದಿ ಬಂದರೂ ಕೋಮು ಸಂಘರ್ಷ ಮುಂದುವರಿದರೆ ಏನ್ ಪ್ರಯೋಜನ..? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+