Fake: ಜಾಯ್ ಅಲುಕ್ಕಾಸ್ ಸ್ಥಾಪಕ ಸಾವಿನ ಸುದ್ದಿ ಸುಳ್ಳು
ತಿರುವನನಂತಪುರಂ, ಮೇ 1: ಜನಪ್ರಿಯ ಆಭರಣ ಮಳಿಗೆ ಜಾಯ್ ಅಲುಕ್ಕಾಸ್ ಸಮೂಹದ ಸ್ಥಾಪಕ ಯುಎಇಯಲ್ಲಿ ಮೃತರಾಗಿದ್ದಾರೆ. ಅವರಿಗೂ ಕೊವಿಡ್19 ತಗುಲಿತ್ತು ಎಂಬ ಸುದ್ದಿ ವಾಟ್ಸಾಪ್ ನಲ್ಲಿ ಹರಡುತ್ತಿದೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಜಾಯ್ ಅಲುಕ್ಕಾಸ್ ವಕ್ತಾರರು ತಿಳಿಸಿದ್ದಾರೆ.
ದುಬೈನಲ್ಲಿ ಇತ್ತೀಚೆಗೆ ಜನಪ್ರಿಯ ಉದ್ಯಮಿ ಜಾಯ್ ಅರಕ್ಕಲ್ ಅವರು ನಿಧನರಾಗಿದ್ದರು. ಇದನ್ನೇ ಬಳಸಿಕೊಂಡ ಕೆಲ ದುಷ್ಕರ್ಮಿಗಳು ಜಾಯ್ ಅಲುಕ್ಕಾಸ್ ಅವರು ನಿಧನರಾಗಿದ್ದಾರೆ. ಆಭರಣ ಮಳಿಗೆ ಸಂಸ್ಥೆ ಇನ್ನೇನು ಮುಚ್ಚಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಫೇಸ್ಬುಕ್, ವಾಟ್ಸಾಪ್ ನಲ್ಲಿ ಹಬ್ಬಿ, ಆತಂಕ ಮೂಡಿಸಿತ್ತು.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಾಯ್ ಅಲುಕ್ಕಾಸ್ ಸಂಸ್ಥೆ, ಸಂಸ್ಥೆಯ ಸ್ಥಾಪಕರು ಆರೋಗ್ಯದಿಂದಿದ್ದಾರೆ. ಸಂಸ್ಥೆ ಕೂಡಾ ಸುಸ್ಥಿತಿಯಲ್ಲಿದೆ ಎಂದಿದ್ದಾರೆ.

ಸತ್ಯಾಸತ್ಯತೆ: ಏಪ್ರಿಲ್ 23, 2020 ರಂದು ದುಬೈನಲ್ಲಿ 54 ವರ್ಷ ವಯಸ್ಸಿನ ಅರಕ್ಕಲ್ ಅವರು ಹೃದಯಾಘಾತದಿಂದ ಮೃತರಾಗಿದ್ದರು. ಇದನ್ನು ಪ್ರಮುಖ ದಿನಪತ್ರಿಕೆ, ವೆಬ್ ಹಾಗೂ ಚಾನೆಲ್ ಗಳು ಪ್ರಸಾರ ಮಾಡಿವೆ.
ಯುಎಇಯ ಇನ್ನೋವಾ ಗ್ರೂಪಿನ ಅಧ್ಯಕ್ಷರಾಗಿದ್ದ ಅರಕ್ಕಲ್ ಅವರಿಗೂ ಕೊರೊನಾವೈರಸ್ ತಗುಲಿ ಮೃತಪಟ್ಟರು ಎಂಬ ಸುದ್ದಿಯೂ ಸುಳ್ಳು. ಮಾನಂತವಾಡಿಯ ಅರಕ್ಕಲ್ ಕುಟುಂಬದ ಜಾಯ್ ಅರಕ್ಕಲ್ ಅವರು ಹೃದಯಾಘಾತದಿಂದಲೇ ಮೃತರಾಗಿದ್ದು ಎಂದು ಕುಟುಂಬವರ್ಗ ಸ್ಪಷ್ಟಪಡಿಸಿದೆ.

ಇನ್ನು 1987ರಲ್ಲಿ ಸ್ಥಾಪನೆಯಾದ ಜಾಯ್ ಅಲುಕ್ಕಾಸ್ ಆಭರಣ ಮಳಿಗೆಯ ಸ್ಥಾಪಕ ಜಾಯ್ ಅಲುಕ್ಕಾಸ್ ಅವರು ಆರೋಗ್ಯದಿಂದಿದ್ದಾರೆ. ತ್ರಿಶೂರ್, ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಆಭರಣ, ಹಣ ವಿನಿಮಯ, ಫ್ಯಾಷನ್, ರೇಷ್ಮೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications