ಮುಸ್ಲಿಮರ ವಸ್ತ್ರ ತೆಗೆಯಬೇಕೆಂದ ಬಿಜೆಪಿ ಮುಖಂಡ
ತಿರುವನಂತಪುರಂ, ಏ.16: ಉತ್ತರಪ್ರದೇಶದಲ್ಲಿ ರಾಜಕೀಯ ನಾಯಕರ ಬಾಯಿಗೆ ಬೀಗ ಹಾಕಿದ ಬೆನ್ನಲ್ಲೇ ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಪ್ರಚಾರದ ಸಭೆಯೊಂದರಲ್ಲಿ ಮಾತನಾಡಿದ ಶ್ರೀಧರನ್ ರಾಹುಲ್ ಗಾಂಧಿ, ಯೆಚೂರಿ ಹಾಗೂ ಪ್ರತಿಪಕ್ಷ ನಾಯಕರು ದೇಶದ ಸೈನಿಕರ ಬಗ್ಗೆ ಇಲ್ಲಸಲ್ಲದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಜಾತಿ, ಧರ್ಮಗಳನ್ನು ಹುಡುಕಲಾಗುತ್ತಿದೆ.
ಒಂದೊಮ್ಮೆ ಇಸ್ಲಾಂ ಧರ್ಮವಾಗಿದ್ದರೆ ಕೆಲವು ಗುರುತುಗಳ ಮೂಲಕ ಅವರ ಧರ್ಮ ಅರಿಯಬಹುದಾಗಿದೆ. ಅವರ ವಸ್ತ್ರವನ್ನು ತೆಗೆದರೆ ಗುರುತಿಸುವುದು ಸುಲಭ.

ಪ್ರತಿಪಕ್ಷಗಳು ಮಾಡುವುದಕ್ಕೆ ಪ್ರತಿಯಾಗಿ ನಾವು ತಿರುಗೇಟು ನೀಡಲೇಬೇಕು ಎಂದು ಹೇಳಿದ್ದಾರೆ.
ಪಿಳ್ಳೈ ಹೇಳಿಕೆ ಮುಸ್ಲಿಂ ಸಮುದಾಯಕ್ಕೆ ಅವಮಾನ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತಾಲ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಪಿಳ್ಳೈ ಮುಸ್ಲಿಂ ಸಮುದಾಯದ ಬಳಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾರಣ ಚುನಾವಣಾ ಆಯೋಗವು ಪಿಳ್ಳೈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications