ಕೇರಳ ವಿಮಾನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ ಸೋಂಕು
ತಿರುವನಂತಪುರಂ, ಆಗಸ್ಟ್ 14: ಕೇರಳದಲ್ಲಿ ನಡೆ ವಿಮಾನ ದುರಂತದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಲಪ್ಪುರಂ ಮೆಡಿಕಲ್ ಕಾಲೇಜು ಈ ಮಾಹಿತಿ ರವಾನಿಸಿದೆ. ದುಬೈನಿಂದ 190 ಮಂದಿಯನ್ನು ಹೊತ್ತು ತರುತ್ತಿದ್ದ ಏರ್ ಏಷ್ಯಾ ವಿಮಾನ ಹೆಚ್ಚು ಮಳೆಯಿದ್ದ ಕಾರಣ ರನ್ವೇನಲ್ಲಿ ಎಡವಿತ್ತು, ಡಿಕ್ಕಿ ಹೊಡೆದು ಎರಡು ಹೋಳಾಗಿತ್ತು.
ರಕ್ಷಣಾ ಕಾರ್ಯ ಮುಗಿದ ಬಳಿಕ ಅವರನ್ನು ಗೃಹಬಂಧನದಲ್ಲಿಡಲಾಗಿತ್ತು. ಮೂರ್ನಾಲ್ಕು ಗಂಟೆಗಳ ಸತತ ಕಾರ್ಯಾಚರಣೆ ನಡೆದತ್ತು. ಘಟನೆಯಲ್ಲಿ 18 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಇಬ್ಬರು ಪೈಲಟ್ ಕೂಡ ಸಾವನ್ನಪ್ಪಿದ್ದರು. 150 ಮಂದಿಗೆ ಗಾಯಗಳಾಗಿತ್ತು.

ಎಲ್ಲಾ ಬದುಕುಳಿದ ಪ್ರಯಾಣಿಕರಿಗೂ ಕೂಡ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. 2010ರ ಬಳಿಕ ಸಂಭವಿಸಿದ ಮೊದಲ ದೊಡ್ಡ ವಿಮಾನ ಅಪಘಾತ ಇದಾಗಿದೆ. ಅಂದು 158 ಮಂದಿ ಮೃತಪಟ್ಟಿದ್ದರು.
ಸುರಕ್ಷತಾ ನಿಯಮ ಉಲ್ಲಂಘಿಸಿದ ಆರೋಪದಡಿ ಏರ್ ಏಷ್ಯಾದ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಭಾರತೀಯ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ಮಾಹಿತಿ ನೀಡಿದೆ.ಕಳೆದ ಜೂನ್ ತಿಂಗಳಲ್ಲಿ ಏರ್ ಏಷಿಯಾದ ಮಾಜಿ ಪೈಲಟ್ ನಡೆಸುತ್ತಿರುವ ಯೂಟ್ಯೂಬ್ ಚಾನಲ್ ಫೈಯಿಂಗ್ ಬೀಸ್ಟ್ ನಲ್ಲಿ, ಕಡಿಮೆ ವೆಚ್ಚದ ವಿಮಾನದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದರು.












Click it and Unblock the Notifications