ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್
ನವದೆಹಲಿ, ಜೂನ್ 04: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಹೊಸ ಗೃಹ ಸಚಿವ ಅಮಿತ್ ಶಾ ಅವರು ಅನುಸರಿಸುವ ಮಾರ್ಗದ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯದಿಂದ ಭಯಾನಕ ಉಗ್ರರ ಪಟ್ಟಿ ಬಹಿರಂಗವಾಗಿದೆ. ಸಶಸ್ತ್ರಧಾರಿಗಳಾಗಿ ಸುತ್ತುತ್ತಿರುವ ಟಾಪ್ 10 ಭಯೋತ್ಪಾದಕರ ಪಟ್ಟಿ ಇಲ್ಲಿದೆ.
ಲಷ್ಕರ್ ಏ ತೋಯ್ಬಾದ ಕಮಾಂಡರ್ ಅಬು ದುಜಾನ್, ಸಬ್ ಜಾರ್ ಭಟ್, ಬುರ್ಹಾನ್ ವಾನಿ ಸೇರಿದಂತೆ ಪ್ರಮುಖ ಉಗ್ರರ ಹತ್ಯೆ ಮೂಲಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಚಟುವಟಿಕೆಗೆ ತಡೆ ಹಾಕಲಾಗಿತ್ತು.
ಇದಾದ ವರ್ಷದ ಬಳಿಕ ಮತ್ತೆ ಉಗ್ರ ಚಟುವಟಿಕೆಗಳು ಆರಂಭಗೊಂಡು, ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಯಿತು. ಇದಕ್ಕೆ ಪ್ರತೀಕಾರವಾಗಿ ಬಾಲಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿದ ಭಾರತ, ಉಗ್ರರನ್ನು ಮಟ್ಟ ಹಾಕಿದೆ. ಆದರೆ, ಲಷ್ಕರ್ ಇ ತೋಯ್ಬಾ, ಜೈಷ್ ಎ ಮೊಹಮ್ಮದ್ ಸಂಘಟನೆ ಇನ್ನು ಅಸ್ತಿತ್ವದಲ್ಲಿದ್ದು,
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ಪ್ರಮುಖ ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಪಟ್ಟಿಯಲ್ಲಿರುವ ಬಾಕಿ ಉಳಿದಿರುವ ಉಗ್ರರ ಮಾಹಿತಿ ಇಲ್ಲಿದೆ....ಟಾಪ್ 10 ಹಿಟ್ ಲಿಸ್ಟ್ ಹೀಗಿದೆ:

1. ರಿಯಾಜ್ ನಾಯ್ಕು
* ರಿಯಾಜ್ ಎಎಚ್ ನಾಯ್ಕು ಆಲಿಯಾಸ್ ಮೊಹಮ್ಮದ್ ಬಿನ್ ಖಾಸಿಮ್ ಅಲಿಯಾಸ್ ಜುಬೈರ್.
* ಎ++ ಕೆಟಗರಿ ಉಗ್ರ
* 2010ರಿಂದ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿ, 2012ರಲ್ಲಿ
ಕಾಶ್ಮೀರದಲ್ಲಿ ಹಿಜ್ಬುಲ್ ನ ನೂತನ ನಾಯಕನಾಗಿ ಗುರುತಿಸಿಕೊಂಡ.
* ಪುಲ್ವಾಮಾದ ಟೋಕುನ್, ಅವಂತಿಪೋರ್ ನ ನಿವಾಸಿ.

2. ವಾಸಿಂ ಅಹ್ಮದ್ ಅಲಿಯಾಸ್ ಒಸಾಮಾ
* ಕಾಶ್ಮೀರದ ಒಸಾಮಾ
* ವಾಸೀಮ್ ಎಎಚ್ ಅಲಿಯಾಸ್ ಒಸಾಮಾ.
* ಶೋಪಿಯಾನ್ ಪ್ರಾಂತ್ಯದ ನಿವಾಸಿ.
* A+ ಭಯೋತ್ಪಾದಕ
* ಲಷ್ಕರ್ ಎ ತೋಯ್ಬಾ ಸಂಘಟನೆ ಉಗ್ರ. ಜಿಲ್ಲಾ ಕಮ್ಯಾಂಡರ್
* 2014ರ ಮಾರ್ಚ್ 28ರಿಂದ ಲಷ್ಕರ್ ಸಂಘಟನೆಯಲ್ಲಿ ಸಕ್ರಿಯ.
* ಬುರ್ಹಾನ್ ವನಿ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ.
***

3. ಮೊಹಮ್ಮದ್ ಅಶ್ರಫ್ ಖಾನ್
ಮೊಹಮ್ಮದ್ ಅಶ್ರಫ್ ಖಾನ್ ಅಲಿಯಾಸ್ ಅಶ್ರಫ್ ಮೌಲ್ವಿ
ಹಿಜ್ಬುಲ್ ಮುಜಾಹಿದ್ದೀನ್ ನ ಉಗ್ರ, ಅನಂತ್ ನಾಗ್ ಜಿಲ್ಲೆಯಲ್ಲಿ ಸಕ್ರಿಯ.
***

4. ಮೆಹ್ರಜುದ್ದೀನ್
ಬಾರಾಮುಲ್ಲಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಜಿಲ್ಲಾ ಕಮ್ಯಾಂಡರ್ ಮೆಹ್ರಜುದ್ದೀನ್ ಎ+ ಕೆಟಗರಿಯ ಉಗ್ರನಾಗಿ ಪರಿಗಣಿಸಲಾಗಿದೆ.
ಚಿತ್ರದಲ್ಲಿ ಅಬು ದುಜಾನಾ, ಪಾಕಿಸ್ತಾನದ ನಿವಾಸಿ, ಲಷ್ಕರ್ ತೋಯ್ಬಾ ಕಮ್ಯಾಂಡರ್ 2014ರಿಂದ ಸಕ್ರಿಯನಾಗಿದ್ದವನು. ಭಾರತದ ಗೃಹ ಸಚಿವಾಲಯದ ಹಿಟ್ ಲಿಸ್ಟ್ ನಲ್ಲಿ ಎ ++ ಕೆಟಗರಿಯಲ್ಲಿ ಕಾಣಿಸಿಕೊಂಡವನು.

ಡಾ. ಸೈಫುಲ್ಲಾ ಅಲಿಯಾಸ್
5. ಡಾ. ಸೈಫುಲ್ಲಾ ಅಲಿಯಾಸ್ ಸೈಫುಲ್ಲಾ ಮೀರ್ ಅಲಿಯಾಸ್ ಡಾ. ಸೈಫ್
ಶ್ರೀನಗರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಉಗ್ರ.
***
ಚಿತ್ರದಲ್ಲಿ: ಜಾಕೀರ್ ರಶೀದ್ ಭಟ್- ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ವಿಭಾಗೀಯ ಕಮ್ಯಾಂಡರ್, 2013ರಿಂದ ಸಕ್ರಿಯವಾಗಿರುವ ಎ++ ಕೆಟಗರಿ ಉಗ್ರ.

6. ಅರ್ಷದ್ ಉಲ್ ಹಕ್
* ಅರ್ಷದ್ ಉಲ್ ಹಕ್
* ಎ++ ಕೆಟಗರಿ
* ಪುಲ್ವಾಮಾ ಹಿಜ್ಬುಲ್ ಮುಜಾಹಿದ್ದೀನ್ ಜಿಲ್ಲಾ ಕಮ್ಯಾಂಡರ್
***
ಚಿತ್ರದಲ್ಲಿ ಶೌಕತ್ ಅಹ್ಮದ್ ಅಲಿಯಾಸ್ ಹುಫೈಜಾ, ಪುಲ್ವಮಾದ ಲಷ್ಕರ್ ಕಮ್ಯಾಂಡರ್, ಅವಂತಿಪೋರ್ ನಿವಾಸಿ, 2011ರಿಂದ ಸಕ್ರಿಯ, ಎ++ ಕೆಟಗರಿ ಉಗ್ರ.

7. ಹಫೀಜ್ ಒಮರ್
ಹಫೀಜ್ ಒಮರ್
ಪಾಕಿಸ್ತಾನ ನಿವಾಸಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಾರ್ಯಕಾರಿ ಕಮ್ಯಾಂಡರ್
***
ಚಿತ್ರದಲ್ಲಿ ಜೈಷ್ ಎ ಮೊಹಮ್ಮದ್ ವಿಭಾಗೀಯ ಕಮ್ಯಾಂಡರ್ ಅಬು ಹಮಾಸ್, ಪಾಕಿಸ್ತಾನದ ನಿವಾಸಿ, 2016ರಿಂದ ಸಕ್ರಿಯ, ಎ++ ಕೆಟಗರಿಯ ಉಗ್ರ.

8. ಜಹೀದ್ ಶೇಖ್
ಜಹೀದ್ ಶೇಖ್ ಅಲಿಯಾಸ್ ಒಮರ್ ಅಫ್ಘಾನಿ
ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ
***
ಚಿತ್ರದಲ್ಲಿ ಜೀನತ್ ಅಲ್ ಇಸ್ಲಾಂ, ಲಷ್ಕರ್ ಇ ತೋಯ್ಬಾ ಉಗ್ರ, ಶೋಪಿಯಾನ್ ನ ಸುಗುನ್ ಝನಿಪುರದ ನಿವಾಸಿ, 2015ರಿಂದ ಸಕ್ರಿಯ

9. ಜುನೈದ್ ಮಟ್ಟೂ
* ಜುನೈದ್ ಮಟ್ಟೂ ಅಲಿಯಾಸ್ ಫೈಸಲ್ ಅಲಿಯಾಸ್ ಶಕೀಬ್ ಅಲಿಯಾಸ್ ಮುಸಾಬ್ ಅಲಿಯಾಸ್ ಕಂಡ್ರೂ.
* ಉತ್ತರ ಕಾಶ್ಮೀರದ ಅಲ್ ಬದರ್ ನ ವಿಭಾಗೀಯ ಕಮ್ಯಾಂಡರ್
* ಲಷ್ಕರ್ ಇ ತೋಯ್ಬಾ ಉಗ್ರ ಜೂನ್ 3, 2015ರಿಂದ ಸಕ್ರಿಯ.
* ಈತ A ಕೆಟಗರಿ ಭಯೋತ್ಪಾದಕ.
***

10 ಎಜಾಜ್ ಅಹ್ಮದ್ ಮಲೀಕ್
* ಎಜಾಜ್ ಅಹ್ಮದ್ ಮಲೀಕ್
* ಕುಪ್ವಾರಾದ ಹಿಜ್ಬುಲ್ ಮುಜಾಹಿದ್ದೀನ್ ಜಿಲ್ಲಾ ಕಮ್ಯಾಂಡರ್
***
ಚಿತ್ರದಲ್ಲಿ ಅಲ್ತಾಫ್ ಅಹ್ಮದ್ ಅಲಿಯಾಸ್ ಕಚ್ರೂ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ, ಕುಲ್ಗಾಂ ಜಿಲ್ಲಾ ಕಮ್ಯಾಂಡರ್, ಕುಲ್ಗಾಂ ಹವಾರಾದ ನಿವಾಸಿ, 2006ರಿಂದ ಸಕ್ರಿಯ. ಎ++ ಕೆಟಗರಿ ಉಗ್ರ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications