ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲಾಗದ್ದಕ್ಕೆ ಕಾರಣ ಬಿಜೆಪಿ ಮತ್ತು ಫ್ಯಾಕ್ಸ್ ಮಷಿನ್!
ಶ್ರೀನಗರ, ನವೆಂಬರ್ 22: ಕೆಟ್ಟ ಫ್ಯಾಕ್ಸ್ ಮಷಿನ್ನಿಂದ ಸರ್ಕಾರವೇ ರಚಿಸಲು ಆಗದೇಹೋದ ವಿಚಿತ್ರ ಘಟನೆ ಜಮ್ಮು ಕಾಶ್ಮೀರದಲ್ಲಿ ನಿನ್ನೆಯಷ್ಟೆ ನಡೆದಿದೆ.
ಹೌದು, ನಿನ್ನೆ ನಡೆದ ದಿಡೀರ್ ಬೆಳವಣಿಗೆಯಲ್ಲಿ ಪಿಡಿಪಿ, ಕಾಂಗ್ರೆಸ್, ಎನ್ಸಿ ಪಕ್ಷಗಳು ಸೇರಿ ಕಾಶ್ಮೀರದಲ್ಲಿ ಸರ್ಕಾರ ರಚಿಸುವ ಎಲ್ಲ ಮಾತುಕತೆಯನ್ನು ಮುಗಿಸಿ ರಾಜ್ಯಪಾಲರನ್ನು ಭೇಟಿ ಮಾಡಲು ಮೆಹಬೂಬಾ ಮಫ್ತಿ ಅವರು ಫ್ಯಾಕ್ಸ್ ಕಳುಹಿಸಿದರು. ಆದರೆ ಕೆಟ್ಟ ಫ್ಯಾಕ್ಸ್ ಮಿಷನ್ನಿಂದಾಗಿ ಅದು ರಾಜ್ಯಪಾಲರನ್ನು ತಲುಪಲೇ ಇಲ್ಲ.
ಮೂರು ಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಲೆಂದು ಫ್ಯಾಕ್ಸ್ ಕಳುಹಿಸಿ ಕಾಯುತ್ತಿದ್ದರೆ ಇತ್ತ ರಾಜ್ಯಪಾಲ ಸತ್ಯಪಾಲ ಮಲ್ಲಿಕ್ ವಿಧಾನಸಭೆಯನ್ನೇ ವಿಸರ್ಜಿಸಿಬಿಟ್ಟರು. ಅಲ್ಲಿಗೆ ಸರ್ಕಾರ ರಚಿಸುವ ಮೂರೂ ಪಕ್ಷಗಳ ಆಸೆಗೆ ತಣ್ಣೀರು ಬಿತ್ತು.
ಮೆಹಬೂಬಾ ಮಫ್ತಿ ಅವರು ಕಳುಹಿಸಿದ ಫ್ಯಾಕ್ಸ್ ರಾಜ್ಯಪಾಲರನ್ನು ತಲುಪಿಲ್ಲವೆಂದು ಗೊತ್ತಾದ ನಂತರ ಮೆಹಬೂಬಾ ಮಫ್ತಿ ಅವರು ಮೇಲ್ ಮೂಲಕ ಸರ್ಕಾರ ರಚನೆ ಬಗ್ಗೆ ಅವಕಾಶ ನೀಡುವ ಬಗ್ಗೆ ಮಾತುಕತೆ ಮಾಡುಲು ಭೇಟಿಗೆ ಅವಕಾಶ ಕೋರಿ ಮೇಲ್ ಮಾಡಿದರು. ಆದರೆ ಅದಕ್ಕೂ ರಾಜ್ಯಪಾಲರ ಭವನದಿಂದ ಪ್ರತಿಕ್ರಿಯೆ ಬಂದಿಲ್ಲ.
|
ಮೆಹಬೂಬಾ ಮಫ್ತಿ ಆಕ್ರೋಶ
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ಪಿಡಿಪಿ ಮುಖಂಡೆ ಮೆಹಬೂಬಾ ಮಫ್ತಿ, 'ತಂತ್ರಜ್ಞಾನ ಮುಂಚೂಣಿಯಲ್ಲಿರುವ ಇಂತಹಾ ದಿನಗಳಲ್ಲಿ ರಾಜ್ಯಪಾಲರ ಕಚೇರಿಯಲ್ಲಿ ಫ್ಯಾಕ್ಸ್ ಯಂತ್ರ ಕೆಲಸ ಮಾಡುವುದಿಲ್ಲ, ಆದರೆ ವಿಧಾನಸಭೆ ವಿಸರ್ಜನೆ ಮಾಡುವ ಆದೇಶ ಹೊರಡಿಸಲು ಮಾತ್ರ ಫ್ಯಾಕ್ಸ್ ಕೆಲಸ ಮಾಡುತ್ತದೆ' ಎಂದು ಅವರು ವ್ಯಂಗ್ಯ ಮಾಡಿದ್ದಾರೆ.
| Array |
ರಾಜಕೀಯ ಮುಖಂಡರ ಆಕ್ಷೇಪ
ರಾಜ್ಯಪಾಲರ ಈ ನಿರ್ಧಾರಕ್ಕೆ ಕಾಶ್ಮೀರದ ರಾಜಕೀಯ ಪಕ್ಷಗಳು ಹಾಗೂ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಣತಿಯಂತೆ ರಾಜ್ಯಪಾಲರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
|
ಓಮರ್ ಅಬ್ದುಲ್ಲಾ ಟ್ವೀಟ್
ಜಮ್ಮು ಕಾಶ್ಮೀರದ ಕಾಂಗ್ರೆಸ್ ಮುಖಂಡ ಓಮರ್ ಅಬ್ದುಲ್ಲಾ ಸಹ ಫ್ಯಾಕ್ಸ್ ಮಷಿನ್ ಬಗ್ಗೆ ಟ್ವೀಟ್ ಮಾಡಿದ್ದು, 'ಜಮ್ಮು ಕಾಶ್ಮೀರ ರಾಜಭವನ ಹೊಸ ಫ್ಯಾಕ್ಸ್ ಮಷೀನ್ ಖರೀದಿಸಬೇಕಿದೆ' ಎಂದಿದ್ದಾರೆ. ಜೊತೆಗೆ ಇನ್ನೂ ಹಲವು ವ್ಯಂಗ್ಯಭರಿತ ಟ್ವೀಟ್ಗಳನ್ನು ರಾಜಭವನದ ಫ್ಯಾಕ್ಸ್ ಮಷಿನ್ ಬಗ್ಗೆ ಮಾಡಿದ್ದಾರೆ.

ನಾಲ್ಕು ಕಾರಣ ನೀಡಿದ ರಾಜ್ಯಪಾಲ
ಇನ್ನು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ವಿಧಾನಸಭೆ ವಿಸರ್ಜನೆ ಮಾಡಿರುವುದಕ್ಕೆ ನಾಲ್ಕು ಕಾರಣಗಳನ್ನು ನೀಡಿದ್ದು, ದುರ್ಬಲ ಮೈತ್ರಿ ಸರ್ಕಾರ ಹೆಚ್ಚು ದಿನ ನಡೆಯುತ್ತಿರಲಿಲ್ಲ, ಕುದುರೆ ವ್ಯಾಪಾರದ ಶಂಕೆ ಇತ್ತು, ಇಂತಾ ಸಂದರ್ಭದಲ್ಲಿ ಚುನಾವಣೆ ನಡೆಯುವುದೇ ಸರಿ ಹಾಗಾಗಿ ವಿಧಾನಸಭೆ ವಿಸರ್ಜನೆ ಮಾಡಿರುವುದಾಗಿ ಹೇಳಿದ್ದಾರೆ.
|
ಬಿಜೆಪಿ ಅಣತಿಯಂತೆ ಕಾರ್ಯ
ಸತ್ಯಪಾಲ ಮಲ್ಲಿಕ್ ಅವರು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾಶ್ಮೀರದ ರಾಜಕೀಯ ಮುಖಂಡರುಗಳು ಆಕ್ರೋಶ ಹೊರಹಾಕಿದ್ದಾರೆ. ವಿಧಾನಸಭೆ ವಿಸರ್ಜನೆ ಆಗಿದ್ದು, ಇನ್ನೇನಿದ್ದರು ಚುನಾವಣೆ ನಡೆಯಬೇಕಿದೆ ಅಷ್ಟೆ.
-
Tamil Nadu Assembly Election: ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಏಪ್ರಿಲ್ 23ಕ್ಕೆ ಮತದಾನ, ಬಲಾಬಲ ಹೇಗಿದೆ? -
Assam Assembly Election 2026: ಅಸ್ಸಾಂ ವಿಧಾನಸಭಾ ಚುನಾವಣೆಯ ಮತದಾನ, ಮತ ಎಣಿಕೆ ದಿನಾಂಕಗಳ ವಿವರ -
Puducherry Election 2026: ವಿಧಾನಸಭಾ ಚುನಾವಣೆಗೆ ಸಜ್ಜಾದ ಪುದುಚೇರಿ ರಾಜಕೀಯ ಅಖಾಡ: ಏಪ್ರಿಲ್ 9ಕ್ಕೆ ಮತದಾನ -
Kerala Assembly Election 2026: ಕೇರಳಂ ವಿಧಾನಸಭೆ ಚುನಾವಣೆ 2026: ಒಂದೇ ಹಂತದಲ್ಲಿ 140 ಸ್ಥಾನಗಳಿಗೆ ಚುನಾವಣೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಒಡಿಶಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ -
ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ಘೋಷಿಸಿದ ಸಿಎಂ ಸಿದ್ಧರಾಮಯ್ಯ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್












Click it and Unblock the Notifications