Paris Olympics: ವಿಶ್ವ ಚಾಂಪಿಯನ್ ಯುಯಿ ಸುಸಾಕಿ ವಿರುದ್ಧ ಗೆದ್ದ ವಿನೇಶ್ ಫೋಗಟ್
ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮಾಡಿ, ಬಿಜೆಪಿ ಬೆಂಬಲಿಗರಿಂದ ಟೀಕೆ, ಅವಹೇಳನಕ್ಕೆ ಒಳಗಾಗಿದ್ದ ಭಾರತದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. ಮಂಗಳವಾರ ನಡೆದ ರೋಚಕ ಕುಸ್ತಿ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಜಪಾನ್ನ ಯುಯಿ ಸುಸಾಕಿಯನ್ನು 3-2 ರಿಂದ ಸೋಲಿಸಿದ್ದಾರೆ.
ಈ ಗೆಲುವಿನ ಮೂಲಕ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಕುಸ್ತಿಪಟು ಉಕ್ರೇನ್ನ ಒಕ್ಸಾನಾ ಲಿವಾಚ್ ಅವರ ವಿರುದ್ಧ ಸೆಣೆಸಲಿದ್ದಾರೆ. ಇನ್ನೆರಡು ಪಂದ್ಯ ಗೆದ್ದರೆ ಸಾಕು ವಿನೇಶ್ ಫೋಗಟ್ ಒಲಿಂಪಿಕ್ನಲ್ಲಿ ಪದಕವನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

ವಿಶ್ವ ಚಾಂಪಿಯನ್ ಜಪಾನ್ನ ಯುಯಿ ಸುಸಾಕಿ ಮತ್ತು ವಿನೇಶ್ ಫೋಗಾಟ್ ಪಂದ್ಯ ನಿಧಾನವಾಗಿ ಆರಂಭವಾಯಿತು. ಆರಂಭದ ಕೆಲ ಸಮಯ ಇಬ್ಬರು ಮಹತ್ವದ ಮೂವ್ಗಳನ್ನು ಮಾಡಿದರು. ವಿನೇಶ್ಗೆ ರೆಫರಿಂದ ಎಚ್ಚರಿಕೆ ಸಿಕ್ಕಿದೆ. ವಿನೇಶ್ ಹೆಚ್ಚು ರಕ್ಷಣಾತ್ಮಕವಾಗಿ ಆಡಿದ್ದರಿಂದ ರೆಫರಿ ಯುಯಿಗೆ ಮೊದಲ ಅಂಕ ನೀಡಿದರು. ವಿನೇಶ್ 30 ಸೆಕೆಂಡ್ ಸಮಯದಲ್ಲಿ ಸ್ಕೋರ್ ಗಳಿಸಲು ವಿಫಲವಾದರು.
ಯುಯಿ ಮೊದಲ ಪಾಯಿಂಟ್ ಗಳಿಸಿದ ಬಳಿಕ ಹೆಚ್ಚು ಸಕ್ರಿಯವಾಗಿ ಆಡಿದರು. ಆದರೆ ವಿನೇಶ್ ಫೋಗಟ್ ರಕ್ಷಣಾತ್ಮಕವಾಗಿ ಆಡುವ ಮೂಲಕ ಎದುರಾಳಿಯ ಸ್ಕೋರ್ ಹೆಚ್ಚಾಗದಂತೆ ನೋಡಿಕೊಂಡರು. ಮೊದಲು ಮೂರು ನಿಮಿಷಗಳಲ್ಲಿ ಸ್ಕೋರ್ 1-0 ಆಗಿತ್ತು.
ಕೊನೆಯ ಎರಡು ನಿಮಿಷ ಇರುವಾಗ ವಿನೇಶ್ಗೆ ರೆಫರಿ ಕಡೆಯಿಂದ ಮತ್ತೊಂದು ಎಚ್ಚರಿಕೆ ಸಿಕ್ಕಿದೆ. ಯುಯಿ ಮತ್ತೊಂದು ಪಾಯಿಂಟ್ ಗಳಿಸಿದರು. ಇನ್ನೇನು ವಿನೇಶ್ ಫೋಗಟ್ ಸೋಲು ಖಚಿತ ಎಂದೇ ಭಾವಿಸಲಾಗಿತ್ತು, ಆದರೆ ಕೊನೆಯ 10 ಸೆಕೆಂಡ್ಗಳಲ್ಲಿ ಪಂದ್ಯದ ಫಲಿತಾಂಶವೇ ಬದಲಾಯಿಗಿ ಹೋಯಿತು.
ವಿನೇಶ್ ಹೆಚಚು ಆಕ್ರಮಣಕಾರಿಯಾಗಿ ಆಡಿದರು ಮತ್ತು ಯುಯಿ ಅವರನ್ನು ಅಂಕದಿಂದ ಹೊರಗೆ ತಳ್ಳಿದರು. ಇದರಿಂದ ಅವರು ಎರಡು ಅಂಕ ಪಡೆದುಕೊಂಡರು, ಬಳಿಕ ರೆಫರಿ ವಿನೇಶ್ಗೆ ಒಂದು ಅಂಕವನ್ನು ಬಹುಮಾನವಾನಿ ನೀಡಿದರು ಮತ್ತು 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications