ಆರ್ಸಿಬಿ ಸೋಲಿಗೆ ನಂಬರ್ ಗುರೂಜಿ ವಕ್ರದೆಸೆ ಕಾರಣ? ಹಿಗ್ಗಾಮುಗ್ಗಾ ಬೈಯುತ್ತಿರುವ ಆರ್ಸಿಬಿ ಫ್ಯಾನ್ಸ್... Kohli
ಕಪ್ ಗೆದ್ದಿಲ್ಲ... ಕಪ್ ಗೆದ್ದಿಲ್ಲ... ಅಂತಾ ಬೇಸರದಲ್ಲಿ ಇರುವ ಆರ್ಸಿಬಿ ಅಭಿಮಾನಿಗಳಿಗೆ ಈ ವರ್ಷ ನಮ್ಮ ಆರ್ಸಿಬಿ ಕಪ್ ಗೆಲ್ಲುವುದು ಗ್ಯಾರಂಟಿ ಎಂಬ ನಿರೀಕ್ಷೆ ಇತ್ತು. ಆದರೆ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಸೋಲಿನ ಹಾದಿ ಹಿಡಿದಿರುವುದು ಬೇಸರ ಮತ್ತು ಭಯ ಎರಡೂ ಕಾಡುತ್ತಿದೆ. ಹೀಗಿದ್ದಾಗಲೇ, ದೆಹಲಿ ಕ್ಯಾಪಿಟಲ್ಸ್ ಎದುರು ಆರ್ಸಿಬಿ ಸೋಲಿಗೆ ನಂಬರ್ ಗುರೂಜಿ ವಕ್ರದೆಸೆ ಕಾರಣ? ಹಿಗ್ಗಾಮುಗ್ಗಾ ಬೈಯುತ್ತಿರುವ ಆರ್ಸಿಬಿ ಫ್ಯಾನ್ಸ್, ಆರ್ಯವರ್ಧನ್ ಗುರೂಜಿಗೆ ವಾರ್ನಿಂಗ್ ಕೊಟ್ಟು...
ಆರ್ಸಿಬಿ... ಆರ್ಸಿಬಿ... ಆರ್ಸಿಬಿ... ಆರ್ಸಿಬಿ... ಆರ್ಸಿಬಿ... ಆರ್ಸಿಬಿ... ಕನ್ನಡದ ಕ್ರಿಕೆಟ್ ಅಭಿಮಾನಿಗಳ ರಕ್ತದ ಕಣ ಕಣದಲ್ಲಿ 'ಆರ್ಸಿಬಿ' ಅನ್ನೋ ಹೆಸರು ರಾರಾಜಿಸುತ್ತಾ ಇದೆ. ಆರ್ಸಿಬಿ ತಂಡವನ್ನ ಕ್ರಿಕೆಟ್ ಟೀಂ ಅನ್ನೋದಕ್ಕಿಂತ ಹೆಚ್ಚಾಗಿ, ಮನೆಯ ಸದಸ್ಯನ ರೀತಿ ಕೋಟಿ ಕೋಟಿ ಅಭಿಮಾನಿಗಳು ಇಷ್ಟಪಡುತ್ತಾರೆ. ಆದರೆ ನಿನ್ನೆ ನಮ್ಮ ಆರ್ಸಿಬಿ ಬೆಂಗಳೂರು ತಂಡವು ಸೋತು ಹೋಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತು ಹೋಗಿದೆ ನಮ್ಮ ಆರ್ಸಿಬಿ ಟೀಂ. ಹೀಗಿದ್ದಾಗಲೇ, ಆರ್ಸಿಬಿ ಅಭಿಮಾನಿಗಳು ಆರ್ಯವರ್ಧನ್ ಗುರೂಜಿ ವಿರುದ್ಧ ರೊಚ್ಚಿಗೆದ್ದು ಏನು ಹೇಳುತ್ತಿದ್ದಾರೆ ಅಂದ್ರೆ...

ಆರ್ಯವರ್ಧನ್ ಗುರೂಜಿ ವಿರುದ್ಧ ರೊಚ್ಚಿಗೆದ್ದ...
ಮನುಷ್ಯ ಮಂಗಳ ಗ್ರಹಕ್ಕೆ ಹೋಗಲ್ಲ, ಆರ್ಸಿಬಿ ಕಪ್ ಗೆಲ್ಲೋದಿಲ್ಲ ಅಂತಾ ವಿರೋಧಿಗಳು ಈಗ ಬಾಯಿಗೆ ಬಂದಂತೆ ಮಾತನಾಡಿ ಸರಿಯಾಗಿ ಇಕ್ಕಿಸಿಕೊಳ್ಳುತ್ತಿದ್ದಾರೆ. ನಮ್ಮ ಆರ್ಸಿಬಿ ಈವರೆಗೂ ಕಪ್ ಗೆದ್ದೇ ಇಲ್ಲ ಅನ್ನೋ ವಿಚಾರ ಮುಂದಿಟ್ಟುಕೊಂಡು ವಿರೋಧಿಗಳು ಮಾತನಾಡುತ್ತಾರೆ. ಆದರೆ ನಮ್ಮ ಆರ್ಸಿಬಿ ತಂಡಕ್ಕೆ ಇರುವಷ್ಟು ಅಭಿಮಾನಿಗಳು ಯಾವುದೇ ತಂಡಕ್ಕೂ ಇಲ್ಲ. ಹೀಗೆ ನಮ್ಮ ಆರ್ಸಿಬಿ, ನಮ್ಮ ಹೆಮ್ಮೆ ಅನ್ನೋ ಘೋಷಣೆ ಎಲ್ಲಾ ಕಡೆ ಕೇಳಿ ಬರುತ್ತಲೇ ಇದೆ. ಹೀಗೆಲ್ಲಾ ಇದ್ದಾಗಲೇ, ಆರ್ಯವರ್ಧನ್ ಗುರೂಜಿ ವಿರುದ್ಧ ಆರ್ಸಿಬಿ ಫ್ಯಾನ್ಸ್ ರೊಚ್ಚಿಗೆದ್ದು...
ಅಯ್ಯಯ್ಯೋ... ಹಿಂಗೆಲ್ಲಾ ಆಗೋಯ್ತಾ?
ಹೌದು, ದೆಹಲಿ ವಿರುದ್ಧ ಆರ್ಸಿಬಿ ತಂಡ ಸೋತು ಹೋಗಿದೆ. ಆದರೆ ಈ ಪಂದ್ಯದಲ್ಲಿ ನಮ್ಮ ಆರ್ಸಿಬಿ ಸೋತು ಹೋಗಲು ಕಾರಣ ಆಗಿದ್ದೇ ಆರ್ಯವರ್ಧನ್ ಗುರೂಜಿ ಅಂತೆ. ಹೀಗಂತ ಇದೀಗ ಆರ್ಸಿಬಿ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ನಿನ್ನೆ ಆರ್ಸಿಬಿ & ದೆಹಲಿ ಟೀಂ ನಡುವೆ ಮ್ಯಾಚ್ ನಡೆಯುವಾಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದರು. ಹೀಗೆ ಆರ್ಯವರ್ಧನ್ ಗುರೂಜಿ ಮ್ಯಾಚ್ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋದ ಕಾರಣದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮ್ಯಾಚ್ ಸೋತಿದೆ ಅಂತಾ ಆರೋಪ ಮಾಡುತ್ತಿದ್ದಾರೆ ಅಭಿಮಾನಿಗಳು. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾ ಪೂರ್ತಿ ಕಿಚ್ಚು ಹೊತ್ತಿಸಿದೆ.












Click it and Unblock the Notifications