IPL 2023: ಸಿಎಸ್ಕೆ ಗೆಲ್ಲಿಸಿದ ಬಳಿಕ ಮೈದಾನದಲ್ಲಿ ರವೀಂದ್ರ ಜಡೇಜಾ ಕಾಲಿಗೆ ಬಿದ್ದು, ತಬ್ಬಿಕೊಂಡ ಪತ್ನಿ ರಿವಾಬಾ
ಮಂಗಳವಾರ, ಮೇ 30ರಂದು ನಸುಕಿನ ಜಾವ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2023ರ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿ ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
#RavindraJadeja #RivaBaJadeja #MSDhoni𓃵 #GTvCSK #GTvsCSK
— 👑👌🌟 (@superking1816) May 30, 2023
Ravindra Jadeja's wife touched Jadeja's feet after the victory last nightpic.twitter.com/g7r5mArM2Q
ಮಳೆ ಬಾಧಿತ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 215 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡ 215 ಓವರ್ಗಳಲ್ಲಿ 171 ರನ್ಗಳ ಪರಿಷ್ಕೃತ ಗುರಿ ಪಡೆದು, ಕೊನೆಯ ಎಸೆತದಲ್ಲಿ ಗೆಲುವಿನ ಗುರಿ ಮುಟ್ಟಿತು.

ಸಿಎಸ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸಿ ಫೈನಲ್ನಲ್ಲಿ ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಇದನ್ನು ಅತ್ಯಂತ ಸ್ಮರಣೀಯ ಫೈನಲ್ಗಳಲ್ಲಿ ಒಂದಾಯಿತು.
ನಂತರ ರವೀಂದ್ರ ಜಡೇಜಾ ಬ್ಯಾಟ್ ಅನ್ನು ಗಾಳಿಯಲ್ಲಿ ಕತ್ತಿವರಸೆ ಶೈಲಿಯಲ್ಲಿ ತಿರುಗಿಸಿ ಮೈದಾನದಾದ್ಯಂತ ಓಡುವ ಮೂಲಕ ಗೆಲುವಿನ ಕ್ಷಣವನ್ನು ಆಚರಿಸಿದರು. ಮೊದಲು ತಮ್ಮ ಸಹ ಆಟಗಾರರನ್ನು ಸೇರಿಕೊಂಡರು ಮತ್ತು ನಂತರ ನಾಯಕ ಎಂಎಸ್ ಧೋನಿ ಅವರನ್ನು ಅವರನ್ನು ತಬ್ಬಿಕೊಂಡು ಸಂಭ್ರಮಿಸಿದರು.
ಆ ಬಳಿಕ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಶಾಸಕಿ ರಿವಾಬಾ ಜಡೇಜಾ, ಸ್ಟ್ಯಾಂಡ್ನಿಂದ ಆಟದ ಉದ್ದಕ್ಕೂ ತನ್ನ ಪತಿ ಮತ್ತು ಸಿಎಸ್ಕೆಯನ್ನು ಹುರಿದುಂಬಿಸುತ್ತಿದ್ದರು. ಗೆದ್ದ ಬಳಿಕ ಬೌಂಡರಿ ಲೈನ್ನಲ್ಲಿ ಸಂಭ್ರಮಾಚರಣೆಗೆ ಸೇರಿಕೊಂಡರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವೀಂದ್ರ ಜಡೇಜಾ ಅವರ ಕಾಲಿಗೆ ಬಿದ್ದ ಪತ್ನಿ ರಿವಾಬಾ ನಂತರ ಭಾವನಾತ್ಮಕ ಅಪ್ಪುಗೆಯೊಂದಿಗೆ ಅಪ್ಪಿಕೊಂಡಾಗ ಅಭಿಮಾನಿಗಳ ಹೃದಯವನ್ನು ಗೆದ್ದರು. ದಂಪತಿಗಳು ತಮ್ಮದೇ ಆದ ಜಗತ್ತಿನಲ್ಲಿ ಕಳೆದುಹೋದಂತೆ ತೋರುತ್ತಿದೆ ಮತ್ತು ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸ್ಮರಣೀಯ ಫೈನಲ್ ಪಂದ್ಯವನ್ನು ಎಂಎಸ್ ಧೋನಿಗೆ ಅರ್ಪಿಸಿದ ರವೀಂದ್ರ ಜಡೇಜಾ
ಐಪಿಎಲ್ 2023ರ ಫೈನಲ್ ಗೆದ್ದ ಸಂಭ್ರಮಾಚರಣೆಯ ನಂತರ, ರವೀಂದ್ರ ಜಡೇಜಾ ಫೈನಲ್ ಗೆಲುವನ್ನು ಎಂಎಸ್ ಧೋನಿಗೆ ಅರ್ಪಿಸಿದರು. ಋತುವಿನ ಉದ್ದಕ್ಕೂ ತಮ್ಮ ಬೆಂಬಲವನ್ನು ತೋರಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡದ ಸಿಎಸ್ಕೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
"ನನ್ನ ತವರಿನ ಪ್ರೇಕ್ಷಕರ ಮುಂದೆ ನನ್ನ ಐದನೇ ಪ್ರಶಸ್ತಿಯನ್ನು ಗೆದ್ದಿರುವುದು ಅದ್ಭುತವಾಗಿದೆ. ನಾನು ಗುಜರಾತಿನವನು ಮತ್ತು ಅದೊಂದು ವಿಶೇಷ ಭಾವನೆ. ಈ ಜನಸಮೂಹವು ಅದ್ಭುತವಾಗಿದೆ. ಪ್ರೇಕ್ಷಕರು ತಡರಾತ್ರಿಯವರೆಗೆ ಮಳೆ ನಿಲ್ಲುವವರೆಗೆ ಕಾಯುತ್ತಿದ್ದರು. ನಮ್ಮನ್ನು ಬೆಂಬಲಿಸಲು ಬಂದ ಸಿಎಸ್ಕೆ ಅಭಿಮಾನಿಗಳಿಗೆ ನಾನು ದೊಡ್ಡ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ನಾನು ಈ ಗೆಲುವನ್ನು ಸಿಎಸ್ಕೆ ತಂಡದ ವಿಶೇಷ ಸದಸ್ಯ ಎಂಎಸ್ ಧೋನಿಗೆ ಅರ್ಪಿಸಲು ಬಯಸುತ್ತೇನೆ," ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ರವೀಂದ್ರ ಜಡೇಜಾ ಮತ್ತು ಅಂಬಟಿ ರಾಯುಡು ಅವರನ್ನು ತಮ್ಮ ಅಂತಿಮ ಐಪಿಎಲ್ ಪಂದ್ಯವನ್ನು ಆಡುವುದಕ್ಕಾಗಿ ಐದನೇ ಬಾರಿಗೆ ದಾಖಲೆಯ ಟ್ರೋಫಿಯನ್ನು ಎತ್ತಲು ಆಹ್ವಾನಿಸಿದಾಗ ಎಂಎಸ್ ಧೋನಿ ಎಲ್ಲರ ಹೃದಯಗಳನ್ನು ಗೆದ್ದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications