Asian Champions Trophy: ಚೀನಾವನ್ನು ಬಗ್ಗು ಬಡಿದ ಭಾರತ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಚೀನಾ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸೂಚನೆ ಕೊಟ್ಟಿದೆ.
ಭಾರತದ ಪರ ಸುಖಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಅಭಿಷೇಕ್ (32ನೇ) ಗೋಲು ಗಳಿಸಿ ಮಿಂಚಿದರು. ಭಾರತದ ಬಲಿಷ್ಠ ರಕ್ಷಣಾ ಕೋಟೆಯನ್ನು ಮೀರಿ ಗೋಲು ಗಳಿಸುವಲ್ಲಿ ಚೀನಾ ವಿಫಲವಾಯಿತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಭಾರತ ತಮ್ಮ ಘನತೆಗೆ ತಕ್ಕಂತೆ ಆಟವಾಡಿತು. ಭಾರತ ಮುಂದಿನ ಪಂದ್ಯದಲ್ಲಿ ಜಪಾನ್ ಅನ್ನು ಎದುರಿಸಲಿದೆ. ಸೆಪ್ಟೆಂಬರ್ 9ರ ಸೋಮವಾರದಂದು ಪಂದ್ಯ ನಡೆಯಲಿದೆ.

ಆರಂಭದಲ್ಲಿ ಭಾರತಕ್ಕೆ ಸವಾಲು
ಪಂದ್ಯದ ಆರಂಭದಲ್ಲಿ ಚೀನಾ ಆಕ್ರಮಣಕಾರಿ ಆಟವನ್ನು ಪ್ರದರ್ಶನ ಮಾಡಿದ ಬಳಿಕ ಭಾರತಕ್ಕೆ ಕಠಿಣ ಸವಾಲು ಎದುರಾಯಿತು. ಆದರೆ ಭಾರತ ದಾಳಿಯನ್ನು ಎದುರಿಸುವಲ್ಲಿ ಸಫಲವಾಯಿತು. ಐದು ನಿಮಿಷಗಳಲ್ಲೇ ಭಾರತಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿತು. ಅಭಿಷೇಕ್ ರಹೀಲ್ಗೆ ಪಾಸ್ ನೀಡಿದ್ದರು, ಆದರೆ ಗೋಲು ಗಳಿಸಲು ವಿಫಲವಾದರು.
ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ 8 ನೇ ನಿಮಿಷದಲ್ಲಿ ಬಂದಿತು, ಆದರೆ ಕ್ಯಾಪ್ಟನ್ ಹರ್ಮನ್ಪ್ರೀತ್ ಅವರ ಗೋಲು ಪ್ರಯತ್ನವನ್ನು ವೀನಾ ತಡೆಯಿತು. ಬಳಿಕ ಚೀನಾದ ತ್ವರಿತ ಪ್ರತಿದಾಳಿ ಆರಂಭಿಸಿತು ಆದರೆ ಭಾರತ ಎಚ್ಚರಿಕೆಯಿಂದ ಆಟವಾಡಿತು.
ಚೀನಾ ಸತತವಾಗಿ ಗೋಲು ಗಳಿಸಲು ಪ್ರಯತ್ನ ಮಾಡಿದರೂ ಭಾರತ ಅದಕ್ಕೆ ಅವಕಾಶ ನೀಡಲಿಲ್ಲ. ಚೀನಾದ ದಾಳಿಯ ಎದುರು ಭಾರತ ಮೊದಲ ಗೋಲು ಹೊಡೆಯಿತು. ಜುಗ್ರಾಜ್ ಸಿಂಗ್ ನಿಖರವಾದ ಪಾಸ್ ಅನ್ನು ಕಳುಹಿಸಿದರು, ಅದನ್ನು ಸುಖಜೀತ್ ಸಿಂಗ್ ಕೌಶಲ್ಯದಿಂದ ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಎರಡನೇ ಕ್ವಾರ್ಟರ್ನಲ್ಲಿ ಭಾರತವು ಹೆಚ್ಚು ಪ್ರಾಬಲ್ಯ ಸಾಧಿಸಿತು, ಎರಡನೇ ಕ್ವಾರ್ಟರ್ಗೆ ನಾಲ್ಕು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಉತ್ತಮ್ ಸಿಂಗ್ ಎರಡನೇ ಗೋಲು ಗಳಿಸುವ ಮೂಲಕ ಚೀನಾದ ರಕ್ಷಣಾ ಲೋಪದ ಲಾಭ ಪಡೆದರು. ಮೂರನೇ ಕ್ವಾರ್ಟರ್ನ ಆರಂಭದ ನಂತರ ಅಭಿಷೇಕ್ ಗೋಲು ಬಾರಿಸುವ ಮೂಲಕ 3-0 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಭಾರತದ ಬಲಿಷ್ಠ ರಕ್ಷಣಾ ಕೋಟೆ
ಉಭಯ ತಂಡಗಳಿಗೆ ಕೆಲವು ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕರೂ, ಭಾರತ ತಂಡ ಎದುರಾಳಿಗಳಿಗೆ ಗೋಲು ಗಳಿಸಲು ಅವಕಾಶ ಕೊಡಲಿಲ್ಲ. ಕರ್ಕೇರಾ ನೇತೃತ್ವದ ಭಾರತದ ರಕ್ಷಣಾ ಪಡೆ ಚೀನಾ ವಿರುದ್ಧ ಬಲಿಷ್ಠ ಗೋಡೆಯನ್ನು ಸೃಷ್ಟಿಸಿತು.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications