'ಕರ್ನಾಟಕದಲ್ಲಿ ಸರ್ಕಾರ ಜೀವಂತವಾಗಿಲ್ಲ'
ಶಿವಮೊಗ್ಗ, ನ. 17 : 'ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿದೆ. ಸಚಿವರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಬಹುದು, ಕಾರ್ಯಕರ್ತರು ಸಿದ್ಧವಾಗಿರಬೇಕೆಂದು' ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ
ಸೋಮವಾರ
ಬಿಜೆಪಿ
ಸದಸ್ಯತ್ವ
ನೋಂದಣಿ
ಅಭಿಯಾನಕ್ಕೆ
ಚಾಲನೆ
ನೀಡಿ
ಮಾತನಾಡಿದ
ಬಿ.ಎಸ್.ಯಡಿಯೂರಪ್ಪ
ಅವರು,
'ಕರ್ನಾಟಕದಲ್ಲಿ
ಚುನಾವಣೆ
ನಡೆದರೆ
ಬಿಜೆಪಿ
ಬಹುಮತ
ಪಡೆದು
ಸರ್ಕಾರ
ರಚನೆ
ಮಾಡಲಿದೆ'
ಎಂದು
ವಿಶ್ವಾಸ
ವ್ಯಕ್ತಪಡಿಸಿದರು.
'ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ಸರ್ಕಾರ ಬದುಕಿದೆಯೋ? ಸತ್ತಿದೆಯೋ? ಎಂಬ ಅನುಮಾನ ಕಾಡುತ್ತಿದೆ. ಸರ್ಕಾರದ ಖಜಾನೆ ಬರಿದಾಗಿದ್ದು, ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ' ಎಂದು ಬಿಎಸ್ವೈ ಆರೋಪಿಸಿದರು.
'ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡೋಣ ಎಂದು ಹಿಂದೆಯೇ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚಿದ್ದು, ಸಚಿವರು, ಪಕ್ಷದ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು, ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾಗುವ ಸಾಧ್ಯತೆ ಇದೆ' ಎಂದರು.
'ಸಿಎಂ
ಸಿದ್ದರಾಮಯ್ಯ
ಸಂಪುಟದ
ನಾಲ್ವರು
ಸಚಿವರ
ವಿರುದ್ಧ
ಭ್ರಷ್ಟಾಚಾರದ
ಆರೋಪಗಳಿವೆ.
ಬೆಳಗಾವಿಯಲ್ಲಿ
ಆರಂಭವಾಗುವ
ಚಳಿಗಾಲದ
ಅಧಿವೇಶನದ
ಸಂದರ್ಭದಲ್ಲಿ
ಪ್ರತಿಪಕ್ಷ
ಬಿಜೆಪಿ
ಈ
ವಿಚಾರಗಳ
ಬಗ್ಗೆ
ಸದನದವೊಳಗೆ
ಮತ್ತು
ಹೊರಗೆ
ಹೋರಾಟ
ಮಾಡಲಿದೆ'
ಎಂದು
ಯಡಿಯೂರಪ್ಪ
ತಿಳಿಸಿದರು.
'ರಾಜ್ಯ ಕಾಂಗ್ರೆಸ್ ಕಚ್ಚಾಟ ನೋಡಿದರೆ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಸಿದ್ಧವಾಗಿರಬೇಕು. ಚುನಾವಣೆ ನಡೆದರೆ ಕನಿಷ್ಠ 150 ಸ್ಥಾನಗಳನ್ನು ಗಳಿಸಲು ಶ್ರಮವಹಿಸಿ ಕೆಲಸ ಮಾಡಬೇಕು' ಎಂದು ಯಡಿಯೂರಪ್ಪ ಕರೆ ನೀಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ ಆಯನೂರು ಮಂಜುನಾಥ್, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ, ಬಿಜೆಪಿ ನಾಯಕ ಭಾನು ಪ್ರಕಾಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.